ನನ್ನ ಪರಿಸ್ಥಿತಿ ಅನುಗುಣವಾಗಿ ನಾನು ಕೆಲಸ ಮಾಡುತ್ತೇನೆ: ಡಿ ಕೆ ಶಿವಕುಮಾರ್
Team Udayavani, Nov 17, 2019, 11:53 AM IST
ಬೆಂಗಳೂರು: ಪಕ್ಷದ ಅಧ್ಯಕ್ಷರು ನಮ್ಮ ಪಕ್ಷದ ನಾಯಕರು ಎಲ್ಲಾ ತೀರ್ಮಾನ ಮಾಡಿದ್ದಾರೆ. ಕೆಲವು ಮೀಟಿಂಗ್ ಗೆ ನಾನು ಹೋಗಲು ಆಗಲಿಲ್ಲ. ನನ್ನದೇ ಕಾರಣದಿಂದ ಹೋಗಿಲ್ಲ. ಕಾಂಗ್ರೆಸ್ ಪಾರ್ಟಿ ಗೆಲ್ಲಬೇಕು ಅಷ್ಟೇ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಉಪ ಚುನಾವಣೆಗೆ ಉಸ್ತುವಾರಿ ವಹಿಸಿಕೊಳ್ಳದ ಸೈಲೆಂಟ್ ಆದ ವಿಚಾರದಲ್ಲಿ ಮಾತನಾಡಿದ ಡಿಕೆಶಿ, ಮಾಧ್ಯಮಗಳು ಸೈಲೆಂಟ್ ಆದ್ರೆ ನಾನು ಸೈಲೆಂಟ್ ಆಗಿರುತ್ತೇನೆ. ಕಾಂಗ್ರೆಸ್ ಪಕ್ಷ ಏನ್ ಹೇಳುತ್ತೋ ನಾನು ಅದನ್ನ ಮಾಡ್ತೀನಿ. ಕಾಂಗ್ರೆಸ್ ನಾಯಕರಿಗೂ ನನ್ನ ಪರಿಸ್ಥಿತಿ ಗೊತ್ತಿದೆ. ಹಾಗಾಗಿ ಅವರು ಎಲ್ಲವನ್ನೂ ಮಾಡ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತನಾಗಿ ಏನೆಲ್ಲ ಸಾಧ್ಯವೋ ಶಕ್ತಿ ಮೀರಿ ಮಾಡುತ್ತೇನೆ. ನನ್ನ ಪರಿಸ್ಥಿತಿ ಅನುಗುಣವಾಗಿ ನಾನು ಕೆಲಸ ಮಾಡುತ್ತೇನೆ ಎಂದರು.
ಬೆಳಗಾವಿ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ಹಸ್ತಕ್ಷೇಪ ಮಾಡಿದ್ದರು ಎಂದು ರಮೇಶ್ ಜಾರಕಿಹೋಳಿ ಮಾಡಿರುವ ಆರೋಪ ವಿಚಾರವಾಗಿ ಮಾತನಾಡಿದ ಡಿಕೆಶಿ, ಅವರೆಲ್ಲ ದೊಡ್ಡವರು, ಅವರ ಸುದ್ದಿ ನನಗೆ ಬೇಡ. ಅವರೆಲ್ಲ ದೊಡ್ಡ ಜನ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್ ತೀರ್ಪು