ಧರ್ಮದ ಧ್ವಜ ಬಿಟ್ಟು ಜನರಿಗೆ ಕಾಯಕದ ಧ್ವಜ ಕೊಡಿ


Team Udayavani, Nov 27, 2019, 3:00 AM IST

dharmada

ಮೈಸೂರು: ಮಾನವನಿಗೆ ಉಡಲು ಬಟ್ಟೆ, ತಿನ್ನಲು ಆಹಾರ, ಬದುಕಲು ಸೂರು, ಕೈಗೆ ಉದ್ಯೋಗ, ಆರೋಗ್ಯಕ್ಕೆ ಔಷಧ ಕೊಡಬೇಕು. ಬದಲಿಗೆ ರಾಜಕಾರಣಿಗಳು ಜಾತಿ-ಜಾತಿ, ಧರ್ಮ-ಧರ್ಮದ ನಡುವೆ ತಿಕ್ಕಾಟ-ಹೊಡೆದಾಟ ತಂದಿಡುತ್ತಿದ್ದಾರೆ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಾಪ್ರಭು ತೋಂಟದಾರ್ಯ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಆಯೋಜಿಸಿದ್ದ ಲಾ ಗೈಡ್‌ ಕನ್ನಡ ಕಾನೂನು ಮಾಸಪತ್ರಿಕೆಯ ಕ್ಯಾಲೆಂಡರ್‌-ಡೈರಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಆತ್ಮ ವಂಚನೆ ಮಾಡಿಕೊಳ್ಳಬಾರದು: ನಾವು ಪ್ರಾಮಾಣಿಕವಾಗಿ ಸತ್ಯವನ್ನು ಹೇಳಬೇಕು, ಹೊರತು ಆತ್ಮ ವಂಚನೆ ಮಾಡಿಕೊಳ್ಳಬಾರದು. ಸತ್ಯ ಹೇಳುವ ಕಾರಣಕ್ಕಾಗಿ ನನ್ನನ್ನು ಕೆಲವರು ಟಾರ್ಗೆಟ್‌ ಮಾಡುತ್ತಾರೆ. ನಾನು ಮಠ ಬಿಟ್ಟಾಗ ವಾಪಸ್‌ ಬರುತ್ತೇನೋ-ಇಲ್ಲವೋ ಎಂದು ಹೇಳಿ ಬರುತ್ತೇನೆ ಎಂದರು.

ಸ್ವಾಮೀಜಿ ಅಸಮಾಧಾನ: ಧರ್ಮ ನಿಂದನೆ, ಅಶಾಂತಿಯ ಕಾಲದಲ್ಲಿ ನಾವಿಂದು ಸಿಕ್ಕಿ ನರಳುತ್ತಿದ್ದೇವೆ. ಜನರಿಗೆ ಕಾಯಕ ಧ್ವಜದ ಬದಲು ಧರ್ಮದ ಧ್ವಜಗಳನ್ನು ಕೊಟ್ಟು ಕೂರಿಸುತ್ತಿದ್ದೇವೆ. ಅಂದು ಬಸವಣ್ಣ ಕಾಯಕದ ಮೂಲಕ ಜಾತಿ ವ್ಯವಸ್ಥೆ ಧಿಕ್ಕರಿಸಿ ಸಮ-ಸಮಾಜ ನಿರ್ಮಾಣಕ್ಕೆ ಯತ್ನಿಸಿದ್ದರು. ಆದರೆ, ಇಂದು ಕುಟುಂಬ ವ್ಯವಸ್ಥೆ ಹೋಗಿ ಸಾವಿರಾರು ವೃದ್ಧಾಶ್ರಮ ತಲೆ ಎತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಧರ್ಮ ಹೇರಲ್ಪಡುವುದಲ್ಲ, ಜನರಿಗೆ ತಿಳಿಸಲ್ಪಡುವುದು. ನಾವು ಯಾವುದೋ ಒಂದು ರೀತಿ ಕೈಗೊಂಬೆಗಳಾಗಿದ್ದೇವೆ. ಮತೀಯ, ಜಾತೀವಾದ, ಧರ್ಮ ವಾದದಕಡೆಗೆ ನೋಡುತ್ತಾ ಭವಿಷ್ಯಕ್ಕೆ ಕೈಯನ್ನು ಕೊಟ್ಟು ಕೈಕಟ್ಟಿ ನಿಂತಿದ್ದೇವೆ ಎಂದು ಹೇಳಿದರು.

ಸಂವಿಧಾನವೇ ದೊಡ್ಡ ಧರ್ಮಗ್ರಂಥ: ಸಾವಿರಾರು ವರ್ಷಗಳ ಇತಿಹಾಸ,ಪರಂಪರೆ, ಸಾಧನೆಯ ಬೆಳಕು ಹೊಂದಿರುವ ಈ ದೇಶದಲ್ಲಿ ಕೇವಲ ಐದು,ಹತ್ತು ವರ್ಷದ ಆಡಳಿತಕ್ಕಾಗಿ ಧರ್ಮವನ್ನು ಹಾಳು ಮಾಡಬಾರದು. ಯುವಕರಿಗೆ ಮತೀಯ ಔಷಧ ನೀಡಿ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ನಮಗೆ ಗೊತ್ತಿಲ್ಲದಂತೆ ಅದರೊಳಗೆ ಸಿಲುಕಿ ಮಾಯವಾಗಿ ಬಿಟ್ಟಿದ್ದೇವೆ.

ರಾಜಕಾರಣದಲ್ಲಿ ವ್ಯಕ್ತಿ ನಿಷ್ಠೆಯ ಪರಾಕಾಷ್ಠೆ ನಮಗೆ ಗೊತ್ತಿಲ್ಲದಂತೆ ನಮ್ಮನ್ನು ಆವರಿಸಿಕೊಂಡಿದೆ.ಇದನ್ನು ಹೋಗಲಾಡಿಸುವ ಕೆಲಸ ಆಗಬೇಕಿದೆ ಎಂದರು. ದೇಶ ಉಳಿದರೆ ಮಾತ್ರ ಧರ್ಮ ಉಳಿಯಲಿದೆ. ನಮಗೆ ಸಂವಿಧಾನವೇ ದೊಡ್ಡ ಧರ್ಮಗ್ರಂಥವಾಗಿದೆ. ಹಾಗಾಗಿ,ನಾವು ನಮ್ಮ ಯುವ ಜನರ ಕೈಗೆ ಧರ್ಮ ಧ್ವಜದ ಬದಲು ಕಾಯಕ ಧ್ವಜ ಕೊಡಬೇಕಾಗಿದೆ ಎಂದು ಹೇಳಿದರು.

ಕಕ್ಷಿದಾರರಿಗೆ ನ್ಯಾಯ ಒದಗಿಸಿ: ಮಾಜಿ ಸಚಿವ ಎ.ಮಂಜು ಮಾತನಾಡಿ, ಸಮಾಜದಲ್ಲಿ ಇಂದಿಗೂ ವಕೀಲರ ಬಗ್ಗೆ ಅಪಾರ ನಂಬಿಕೆ-ಗೌರವವಿದ್ದು, ನ್ಯಾಯ ಕೇಳಿಬರುವ ಕಕ್ಷಿಗಾರರಿಗೆ ನ್ಯಾಯ ಒದಗಿಸುವುದು ವಕೀಲರ ಪ್ರಮುಖ ಕರ್ತವ್ಯವಾಗಿದೆ ಎಂದು ಹೇಳಿದರು. ಕಕ್ಷಿಗಾರರು ವಕೀಲರ ಮೇಲೆ ನಂಬಿಕೆ ಇಟ್ಟು ಬರುತ್ತಾರೆ. ಅಂಥವರನ್ನು ಅಲೆಸದೆ ಪ್ರಾಮಾಣಿಕವಾಗಿ ಸಲಹೆ ನೀಡಬೇಕು. ಸುಮ್ಮನೆ ಅಲೆಸಿ ಕಾಲಹರಣ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಮಾನವ ಹಕ್ಕುಗಳ ಆಯೋಗದ ಮಾಜಿ ಸದಸ್ಯ ಸಿ.ಜಿ.ಹುನಗುಂದ ಮಾತನಾಡಿ, ವೈದ್ಯರು ಇಂದು ಸೆತೋಸ್ಕೋಪ್‌ ಹಿಡಿಯೋದನ್ನು ಬಿಟ್ಟಿದ್ದಾರೆ. ಕಂಪ್ಯೂಟರ್‌ ನೋಡಿ ಸಲಹೆ ಕೊಟ್ಟು ಕಳುಹಿಸುತ್ತಾರೆ.ಆದರೆ, ವಕೀಲರು ಡೈರಿ,ಕ್ಯಾಲೆಂಡರ್‌ ನೋಡದೆ ಇರಲು ಸಾಧ್ಯವಾಗಲ್ಲ ಎಂದರು. ಲಾಗೈಡ್‌ನ‌ ಸಂಪಾದಕ ಎಚ್‌.ಎನ್‌.ವೆಂಕಟೇಶ್‌, ಹಿರಿಯ ವಕೀಲ ಎಂ.ಡಿ.ಹರೀಶ್‌ಕುಮಾರ್‌ ಹೆಗ್ಡೆ ಇದ್ದರು.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.