ರಜನಿಕಾಂತ್‌ ಜೊತೆ ನಟಿಸುವ ಅವಕಾಶ ಬಿಟ್ಟ ರಕ್ಷಿತ್‌ ಶೆಟ್ಟಿ


Team Udayavani, Dec 2, 2019, 10:25 AM IST

film-tdy-2

ರಕ್ಷಿತ್‌ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣಚಿತ್ರದ ಟ್ರೇಲರ್‌ಗೆ ಎಲ್ಲೆಡೆಯಿಂದ ಭರಪೂರ ಮೆಚ್ಚುಗೆ ಸಿಗುತ್ತಿರುವುದು ಗೊತ್ತೇ ಇದೆ. ಇದರ ಬೆನ್ನಲ್ಲೇ, ತಮಿಳಿನ ಸೂಪರ್‌ ಹಿಟ್‌ ಸಿನಿಮಾ ಪೆಟ್ಟಾಚಿತ್ರದ ನಿರ್ದೇಶಕಕಾರ್ತಿಕ್‌ ಸುಬ್ಬರಾಜು ಕೂಡ ಚಿತ್ರದ ಟ್ರೇಲರ್‌ ವೀಕ್ಷಿಸಿ, “ಅದ್ಭುತ ಸಿನಿಮೇಕರ್‌, ಬರಹಗಾರ ನಟ ರಕ್ಷಿತ್‌ ಶೆಟ್ಟಿಅವರಿಗೆ ತಮಿಳು ಇಂಡಸ್ಟ್ರಿಗೆ ಸ್ವಾಗತ. ಇಡೀ ಚಿತ್ರತಂಡಕ್ಕೆ ಆಲ್‌ ದಿ ಬೆಸ್ಟ್‌. ಆದಷ್ಟು ಬೇಗ ಚಿತ್ರವನ್ನು ನೋಡಲು ಕಾಯುತ್ತಿದ್ದೇನೆಎಂದು ಟ್ವೀಟ್‌ ಮೂಲಕ ಶುಭ ಹಾರೈಸಿದ್ದಾರೆ.

ಇಷ್ಟೇ ಆಗಿದ್ದರೆ, ಹೇಳುವಂತಹ ಸುದ್ದಿಯೇನೂ ಅಲ್ಲ. ಆದರೆ, ರಕ್ಷಿತ್‌ಶೆಟ್ಟಿ ಅವರಿಗೆ ರಜನಿಕಾಂತ್‌ ಅವರ ಜೊತೆ ನಟಿಸುವ ಅವಕಾಶ ಬಂದಿದ್ದರೂ, ಅದನ್ನು ನಿರಾಕರಿಸಿದ್ದರು ಎಂದರೆ ನಂಬಲೇಬೇಕು. ಹೌದು, ಇದುಸತ್ಯ. “ಪೆಟ್ಟಾಚಿತ್ರದಲ್ಲಿ ನಟಿಸುವ ಅವಕಾಶ ರಕ್ಷಿತ್‌ ಶೆಟ್ಟಿ ಅವರನ್ನು ಹುಡುಕಿ ಬಂದಿತ್ತು. ಆದರೆ, ರಕ್ಷಿತ್‌ ಶೆಟ್ಟಿ ಮಾತ್ರ, ನಟಿಸಲು ಸಾಧ್ಯವಾಗಲಿಲ್ಲ. “ಪೆಟ್ಟಾಚಿತ್ರದ ನಿರ್ದೇಶಕ ಕಾರ್ತಿಕ್‌ ಸುಬ್ಬರಾಜು ಮತ್ತು ರಕ್ಷಿತ್‌ ಶೆಟ್ಟಿ ಗೆಳೆಯರು. ಹಾಗಾಗಿ ಚಿತ್ರದ ಒಂದು ಪಾತ್ರಕ್ಕೆ ರಕ್ಷಿತ್‌ ಶೆಟ್ಟಿ ಅವರನ್ನು ಕಾರ್ತಿಕ್‌ ಸುಬ್ಬರಾಜು ಸಂಪರ್ಕಿಸಿದ್ದರು. ಆದರೆ, ರಕ್ಷಿತ್‌ ಶೆಟ್ಟಿ ಆ ಅವಕಾಶವನ್ನು ನಿರಾಕರಿಸಿದ್ದರು. ಅದಕ್ಕೆ ಕಾರಣವೇನು ಗೊತ್ತಾ? ಆ ಸಂದರ್ಭದಲ್ಲಿ ರಕ್ಷಿತ್‌ ಶೆಟ್ಟಿ ಅವರು ಅವನೇ ಶ್ರೀಮನ್ನಾರಾಯಣಚಿತ್ರದ ಚಿತ್ರೀಕರಣದಲ್ಲಿ ಬಿಝಿಯಾಗಿದ್ದರು. ಆ ಸಿನಿಮಾಗೆ ಹೆಚ್ಚು ಆದ್ಯತೆ ಕೊಟ್ಟಿದ್ದರಿಂದ ರಕ್ಷಿತ್‌ ಶೆಟ್ಟಿ ಪೆಟ್ಟಾಚಿತ್ರದಲ್ಲಿ ರಜನಿಕಾಂತ್‌ ಅವರ ಜೊತೆ ನಟಿಸುವ ಅವಕಾಶ ಮಿಸ್‌ಮಾಡಿಕೊಂಡಿದ್ದರು.

ಆ ಬಳಿಕ ರಕ್ಷಿತ್‌ಗೆ ಬಂದ ಅವಕಾಶ, ವಿಜಯ್‌ ಸೇತುಪತಿ ಅವರಿಗೆ ಹೋಯಿತು. ಆ ಚಿತ್ರದಲ್ಲಿ ವಿಜಯ್‌ ಸೇತುಪತಿ ನೆಗೆಟಿವ್‌ ಶೇಡ್‌ನ‌ಲ್ಲಿ ಕಾಣಿಸಿಕೊಂಡರು. ಆ ಚಿತ್ರ ಯಶಸ್ವಿಯೂ ಆಯ್ತು. ಅದೇನೆ ಇರಲಿ, ರಜನಿಕಾಂತ್‌ ಅವರ

ಸಿನಿಮಾದಲ್ಲಿ ನಟಿಸುವ ಅವಕಾಶ ಬಂದರೆ, ಯಾರು ತಾನೆ ಬಿಡುತ್ತಾರೆ? ಆದರೆ, ರಕ್ಷಿತ್‌ ಮಾತ್ರ, ಆ ಚಿತ್ರ ಒಪ್ಪಿದ್ದರೆ, “ಅವನೇ ಶ್ರೀಮನ್ನಾರಾಯಣಚಿತ್ರ ಲೇಟ್‌ ಆಗುತ್ತಿತ್ತು. ಅಭಿಮಾನಿ ಗಳಿಗೆ ಹೆಚ್ಚು ಕಾಯಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ಅವರು, ಆ ಅವಕಾಶ ಬಿಟ್ಟಿದ್ದಾರೆ. ಮುಂದೊಂದು ದಿನ ಒಳ್ಳೆಯ ಅವಕಾಶ ಸಿಗಬಹುದು ಎಂಬ ಆಶಯದಲ್ಲಿದ್ದಾರೆ ರಕ್ಷಿತ್‌ ಶೆಟ್ಟಿ. ಸ್ವತಃ ರಕ್ಷಿತ್‌ ಶೆಟ್ಟಿ ತಮಗೆ ಅವಕಾಶ ಬಂದಿದ್ದನ್ನು ಒಪ್ಪಿಕೊಳ್ಳುತ್ತಾರೆ. “ಪೆಟ್ಟಾ ಸಿನಿಮಾದಿಂದ ನನಗೆ ಅವಕಾಶ ಬಂದಿದ್ದು ನಿಜ. ಆದರೆ, ನಾನು ಚಿತ್ರೀಕರಣದಲ್ಲಿದ್ದ ಕಾರಣ ಮಾಡಲಾಗಲಿಲ್ಲಎನ್ನುತ್ತಾರೆ.

ಟಾಪ್ ನ್ಯೂಸ್

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.