ಮಾಲಿನ್ಯದಿಂದ ಆರೋಗ್ಯ ಸಮಸ್ಯೆಯಿಲ್ಲ: ಜಾವಡೇಕರ್
Team Udayavani, Dec 6, 2019, 9:56 PM IST
ನವದೆಹಲಿ: ಮಾಲಿನ್ಯ ಜನರ ಜೀವನ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಭಾರತದ ಯಾವ ಅಧ್ಯಯನವೂ ಸಾಬೀತುಪಡಿಸಿಲ್ಲ ಎಂಬ ಹೇಳಿಕೆ ನೀಡಿ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಟೀಕೆಗೆ ಗುರಿಯಾಗಿದ್ದಾರೆ. ಸಚಿವರ ಈ ಹೇಳಿಕೆ ದಡ್ಡತನದಿಂದ ಕೂಡಿದೆ ಎಂದು ಪರಿಸರ ವಿಜ್ಞಾನಿಗಳು ಟೀಕಿಸಿದ್ದಾರೆ.
ಶುಕ್ರವಾರ ಸದನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಾವಡೇಕರ್, ಮಾಲಿನ್ಯದ ಕುರಿತು ಜನರಲ್ಲಿ ನಾವು ಭೀತಿ ಹುಟ್ಟುಹಾಕುವುದು ಬೇಡ. ಮಾಲಿನ್ಯ ಆರೋಗ್ಯಕ್ಕೆ ಮಾರಕ, ಅದರಿಂದ ಜೀವಿತಾವಧಿ ಕುಂಠಿತವಾಗುತ್ತದೆ ಎಂದು ಯಾವುದೇ ಭಾರತೀಯ ಅಧ್ಯಯನಗಳೂ ಸಾಬೀತು ಮಾಡಿಲ್ಲ ಎಂದಿದ್ದರು.