ಮುಂದಿನ ವರ್ಷದಿಂದ ಜೀವವಿಮೆ ಪಾಲಿಸಿಗಳಲ್ಲಿ ಬದಲಾವಣೆ

2020 ಫೆ.1ರಿಂದ ಅನ್ವಯ; ಬದಲಾವಣೆಗಳು ಏನೇನು?

Team Udayavani, Dec 14, 2019, 7:23 PM IST

LIFE

ಜೀವವಿಮೆ ಪಾಲಿಸಿಗಳಲ್ಲಿ ಪ್ರಮುಖ ಬದಲಾವಣೆಗೆ ಅಖೀಲ ಭಾರತ ವಿಮಾ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಉದ್ದೇಶಿದ್ದು 2020 ಫೆ.1ರಿಂದ ಜಾರಿಗೆ ಬರಲಿದೆ. ಈ ಬದಲಾವಣೆಗಳು ಹೀಗಿವೆ.

1. ಒಂದು ವೇಳೆ ಯುನಿಟ್‌ ಲಿಂಕ್‌ ಆದ ಪಾಲಿಸಿಗಳಾದರೆ ಅವುಗಳ ಪುನರುಜ್ಜೀವಿತ ಅವಧಿಯನ್ನು ಮೂರು ವರ್ಷಗಳವರೆಗೆ ವಿಸ್ತರಿಸಲಾಗುತ್ತದೆ. ಯುನಿಟ್‌ ಲಿಂಕೇತರ ಪಾಲಿಸಿಗಳಾದರೆ ಅವುಗಳ ಪುನರುಜ್ಜೀವಿತ ಅವಧಿಯನ್ನು ಐದು ವರ್ಷಗಳ ವರೆಗೆ ವಿಸ್ತರಿಸಲಾಗುತ್ತದೆ. ಈ ಮೊದಲು ಇದು ಎರಡು ವರ್ಷಗಳಾಗಿತ್ತು. ಪುನರುಜ್ಜೀವಿತ ಅವಧಿ ಎಂದರೆ, ಮೊದಲ ಬಾರಿಗೆ ಪಾಲಿಸಿದಾರನು ಕಟ್ಟದೇ ಇರುವ ಪ್ರೀಮಿಯಂ ದಿನಾಂಕದಿಂದ ಮತ್ತೆ ಆತ ಸ್ಥಗಿತಗೊಂಡ ಪಾಲಿಸಿಯನ್ನು ಚಾಲನೆಗೊಳಿಸಲು ಮುಂದಾದ ಅವಧಿಯಾಗಿದೆ.

2. ಫೆಬ್ರವರಿಯಿಂದ ನಿವೃತ್ತಿ ಪ್ಲ್ರಾನ್‌ಗಳ ವಿತ್‌ಡ್ರಾವಲ್‌ ಮಿತಿ ಏರಿಕೆಯಾಗಲಿದೆ. ಗರಿಷ್ಠ ವಿತ್‌ಡ್ರಾವಲ್‌ ಮಿತಿಯು ಈಗಿರುವ ಮೂರನೇ ಒಂದು ಭಾಗದ ಬದಲಾಗಿ ಮೆಚೂÂರಿಟಿಯ ಶೇ.60ರಷ್ಟು ಆಗಲಿದೆ. ಆದರೆ ನಿವೃತ್ತಿ ಪ್ಲ್ರಾನ್‌ಗಳಲ್ಲಿ ಮೂರನೇ ಒಂದು ಭಾಗದಷ್ಟಕ್ಕೆ ಮಾತ್ರ ತೆರಿಗೆ ವಿನಾಯಿತಿ ಇರಲಿದ್ದು, ಎಲ್ಲ ಶೇ.60ರಷ್ಟಕ್ಕೆ ತೆರಿಗೆ ವಿನಾಯಿತಿ ಇರುವುದಿಲ್ಲ.

3. ಪಾಲಿಸಿಗಳ ಮೇಲಿನ ಐದು ವರ್ಷಗಳ ಲಾಕ್‌ ಅವಧಿ ಮುಗಿದ ಬಳಿಕ ಶೇ.25ರಷ್ಟು ವಿತ್‌ಡ್ರಾವಲ್‌ಗೆ ಅನುಮತಿ ನೀಡುವ ಬಗ್ಗೆಯೂ ಐಆರ್‌ಡಿಎಐ ಆಲೋಚನೆ ನಡೆಸುತ್ತಿದೆ. ಭಾಗಶಃ ವಿತ್‌ಡ್ರಾವಲ್‌ ಅನ್ನು ಉನ್ನತ ವ್ಯಾಸಂಗಕ್ಕಾಗಿ, ಮಕ್ಕಳ ವಿವಾಹ, ಗಂಭೀರ ಕಾಯಿಲೆಗಳು, ಆಸ್ತಿ ನಿವೇಶನ ಖರೀದಿ ಅಥವಾ ಮನೆಕಟ್ಟುವ ಉದ್ದೇಶಕ್ಕೆ ನೀಡಲು ಯೋಜಿಸಲಾಗುತ್ತಿದೆ.

4. 45 ವರ್ಷಕ್ಕಿಂತ ಕಡಿಮೆಯಿದ್ದ ಪಕ್ಷದಲ್ಲಿ ಯುನಿಟ್‌ ಲಿಂಕ್‌ ಪಾಲಿಸಿಗಳಲ್ಲಿ ಕನಿಷ್ಠ ಜೀವವಿಮೆ ಈಗಿರುವ 10 ಪಟ್ಟಿಗಿಂತ 7 ಪಟ್ಟು ಆಗಲಿದೆ. ಇದು ಪಾಲಿಸಿದಾರ ನಿಧನವಾಗಿದ್ದಲ್ಲಿ ನೀಡುವ ಹಣವಾಗಿರುತ್ತದೆ.

5. ಯುನಿಟ್‌ ಲಿಂಕ್ಡ್ ಪಾಲಿಸಿಗಳಿಗಳಿದ್ದ ಕಡ್ಡಾಯ ಗ್ಯಾರೆಂಟಿಯು ಇನ್ನು ಐಚ್ಛಿಕವಾಗಲಿದೆ. ಇದು ಫೆ.1ರಿಂದ ಅನ್ವಯವಾಗಲಿದೆ. ಈ ಮೊದಲು ಐಆರ್‌ಡಿಎಐಯು ನಿವೃತ್ತಿ ಯುನಿಟ್‌ ಲಿಂಕ್ಡ್ ಪಾಲಿಸಿಗಳಲ್ಲಿ ಗ್ಯಾರೆಂಟಿಯನ್ನು ಕಡ್ಡಾಯವನ್ನಾಗಿ ಮಾಡಿತ್ತು. ಈಗ ಹೊಸ ಕ್ರಮದಿಂದಾಗಿ ಪಾಲಿಸಿದಾರರಿಗೆ ರಿಲೀಫ್ ಸಿಕ್ಕಿದ್ದು ಗ್ಯಾರೆಂಟಿಯನ್ನು ಆಯ್ಕೆ ಮಾಡಬಹುದು ಅಥವಾ ಮಾಡದೇ ಇರಬಹುದಾಗಿದೆ.

ಟಾಪ್ ನ್ಯೂಸ್

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.