ಮಹಾರಾಷ್ಟ್ರದ ಸಮುದ್ರ ತೀರಗಳು ಹೆಚ್ಚು ಮಲಿನ
ನೆರೆ ರಾಜ್ಯಕ್ಕಿಂತ ಕರ್ನಾಟಕ, ಗೋವಾದಲ್ಲಿ ಪ್ಲಾಸ್ಟಿಕ್ ಮಾಲಿನ್ಯ ಕಡಿಮೆ
Team Udayavani, Dec 22, 2019, 7:46 PM IST
ಪಣಜಿ: ಮಹಾರಾಷ್ಟ್ರದ ಸಾಗರ ಕಿನಾರೆಗಳು ಮೈಕ್ರೋಪ್ಲಾಸ್ಟಿಕ್ ಹಾಗೂ ಮ್ಯಾಕ್ರೋ ಪ್ಲಾಸ್ಟಿಕ್ಗಳ ಆಗರವಾಗಿದ್ದು, ಅವು ಕರ್ನಾಟಕ, ಗೋವಾದ ಸಮುದ್ರ ಕಿನಾರೆಗಳಿಗಿಂತ ಹೆಚ್ಚು ಮಲಿನಗೊಂಡಿವೆ ಎಂದು ಗೋವಾ ಮೂಲದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಶಿಯಾನೊಗ್ರಫಿ (ಎನ್ಐಒ) ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.
ಸಂಶೋಧನಾ ವರದಿಯ ಆಧಾರದಲ್ಲಿ ನೆದರ್ಲೆಂಡ್ ಮೂಲದ “ಕೆಮೋಸ್ಪಿಯರ್’ ಎಂಬ ನಿಯತಕಾಲಿಕೆ ಲೇಖನ ಪ್ರಕಟವಾಗಿದೆ. “”ಮಹಾರಾಷ್ಟ್ರದ ಬೀಚ್ಗಳಲ್ಲಿ ಅಪಾರ ಪ್ರಮಾಣದ ಪ್ಲಾಸ್ಟಿಕ್ ಸಂಗ್ರಹಣೆಯಾಗಿದೆ. ಸಮುದ್ರಕ್ಕೆ ಹತ್ತಿರದ ಭೂಮಿಯಲ್ಲಿ ಪ್ಲಾಸ್ಟಿಕ್ ಕಾರ್ಖಾನೆಗಳು, ಬಂದರುಗಳು ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಕಾರ್ಖಾನೆಗಳು ಇರುವುದೇ ಈ ಮಾಲಿನ್ಯಕ್ಕೆ ಕಾರಣ” ಎಂದು ಲೇಖನದಲ್ಲಿ ಹೇಳಲಾಗಿದೆ.
ಪತ್ತೆಯಾದ ಪ್ಲಾಸ್ಟಿಕ್ನಲ್ಲಿ ಪಾಲಿಮರ್ ಮಾದರಿಯ ಪ್ಲಾಸ್ಟಿಕ್ ಹೆಚ್ಚಾಗಿದೆ. ಇದರಿಂದ, ಮಹಾರಾಷ್ಟ್ರದ 10ಕ್ಕಿಂತಲೂ ಹೆಚ್ಚು ಬೀಚ್ಗಳು ಕಳೆದೆರಡು ವರ್ಷಗಳಲ್ಲಿ ಅಧ್ವಾನಗೊಂಡಿವೆ. ಪ್ಲಾಸ್ಟಿಕ್ನ ವಿಷವು ಸಾಗರ ತೀರದ ಜೀವಿಗಳ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಹೇಳಲಾಗಿದೆ.
ಪ್ಲಾಸ್ಟಿಕ್ ಮಾಲಿನ್ಯದ ನಿರ್ಮೂಲನೆಗೆ ಏಕಬಳಕೆಯ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಮರುಬಳಕೆಯ ಪ್ಲಾಸ್ಟಿಕ್ ಉದ್ಯಮ ಹಾಗೂ ಬಳಕೆಗೆ ಉತ್ತೇಜನ ನೀಡಬೇಕು ಎಂದು ಎನ್ಐಒ ವಿಜ್ಞಾನಿಗಳಾದ ಡಾ. ಮಹುವಾ ಹಾಗೂ ಡಾ. ದುಷ್ಯಂತ್ ಮಹಾರಾಣಾ ನೇತೃತ್ವದ ಸಂಶೋಧಕರ ತಂಡ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
MUST WATCH
ಹೊಸ ಸೇರ್ಪಡೆ
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ