“ಆಸನಕ್ಕಾಗಿ’ಸಾಧ್ವಿ ಪ್ರಜ್ಞಾ ಸಿಂಗ್-ಸ್ಪೈಸ್ಜೆಟ್ ನಡುವೆ ಚಕಮಕಿ
ಸುರಕ್ಷತಾ ಕಾರಣಕ್ಕಾಗಿ ಬಿಜೆಪಿ ಸಂಸದೆ ಕಾಯ್ದಿರಿಸಿದ್ದ ಆಸನ ನೀಡಲು ಸ್ಪೈಸ್ಜೆಟ್ ನಿರಾಕರಣೆ
Team Udayavani, Dec 22, 2019, 8:59 PM IST
ನವದೆಹಲಿ: ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ನಡುವೆ ಶನಿವಾರ ಚಕಮಕಿ ನಡೆದಿದೆ. ಪರಿಣಾಮ ವಿಮಾನದ ಸಂಚಾರ 45 ನಿಮಿಷ ತಡವಾಗಿದೆ. ತಾನು ಮುಂಚೆಯೇ ನಿಗದಿಪಡಿಸಿದ್ದ ಆಸನವನ್ನು ಸ್ಪೈಸ್ಜೆಟ್ ಸಿಬ್ಬಂದಿ ನೀಡಿಲ್ಲ ಎಂದು ಸಾಧ್ವಿ ದೂರು ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಂಸ್ಥೆ, ಸಾಧ್ವಿ ಗಾಲಿಕುರ್ಚಿಯಲ್ಲಿದ್ದರು. ಅಂತಹ ಪ್ರಯಾಣಿಕರಿಗೆ ತುರ್ತು ವಿಭಾಗಕ್ಕೆ ಬರುವ ಮೊದಲನೇ ಆಸನವನ್ನು ನೀಡುವುದು ಅಸಾಧ್ಯ ಎಂದು ಸ್ಪಷ್ಟೀಕರಣ ನೀಡಿದೆ.
ಆಗಿದ್ದೇನು?:
ಸಾಧ್ವಿ ಪ್ರಜ್ಞಾ ಸಿಂಗ್, ದೆಹಲಿಯಿಂದ ಮಧ್ಯಪ್ರದೇಶ ರಾಜಧಾನಿ ಭೋಪಾಲ್ಗೆ ಸ್ಪೈಸ್ಜೆಟ್ ವಿಮಾನದಲ್ಲಿ ಶನಿವಾರ ಪ್ರಯಾಣಿಸಿದ್ದರು. ಈ ವೇಳೆ ತುರ್ತು ವಿಭಾಗದಲ್ಲಿ ಬರುವ, ಮೊದಲನೇ ಸಾಲಿನ 1ಎ ಆಸನವನ್ನು ನಿಗದಿಪಡಿಸಿದ್ದರು. ಆದರೆ ಸಾಧ್ವಿ ತಮ್ಮದೇ ಖಾಸಗಿ ಗಾಲಿಕುರ್ಚಿಯಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಇದು ತಿಳಿಯುತ್ತಿದ್ದಂತೆ ಸಾಧ್ವಿಗೆ ಸುರಕ್ಷತಾ ಕಾರಣಕ್ಕೆ ತುರ್ತು ಸಾಲಿನ ಆಸನವನ್ನು ನಿರಾಕರಿಸಲಾಯಿತು. ಅದಕ್ಕೆ ಸಂಸದೆ ಒಪ್ಪಲಿಲ್ಲ. ಈ ಹಂತದಲ್ಲಿ ನಿಯಮಗಳನ್ನು ತೋರಿಸಿದ ನಂತರ ಸಾಧ್ವಿ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ. ನಂತರ ಅವರಿಗೆ 2ಎ/ಬಿ ಆಸನ ನೀಡಲಾಗಿದೆ. ಈ ಗಲಾಟೆಯ ಕಾರಣ ಬೇಸತ್ತ ಪ್ರಯಾಣಿಕರು, ಪ್ರಜ್ಞಾ ಸಿಂಗ್ರನ್ನು ವಿಮಾನದಿಂದ ಕೆಳಕ್ಕಿಳಿಸುವಂತೆ ಮನವಿ ಮಾಡಿದ್ದಾರೆ ಎಂದು ಸ್ಪೈಸ್ಜೆಟ್ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
MUST WATCH
ಹೊಸ ಸೇರ್ಪಡೆ
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!
T20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ