ಮೊದಲ ಪರ್ಯಾಯಕ್ಕೆ 2 ಲಕ್ಷ ರೂಪಾಯಿ ಸಾಲ!


Team Udayavani, Dec 30, 2019, 6:06 AM IST

modala-parya

1950ರ ದಶಕದಲ್ಲಿ ಶ್ರೀಕೃಷ್ಣ ಮಠ – ಅಷ್ಟಮಠಗಳ ಸ್ಥಿತಿ ಹೇಗಿತ್ತು ಎನ್ನುವುದನ್ನು ಪೇಜಾವರ ಶ್ರೀಗಳ ಮಾತಿನಲ್ಲಿ ಅರಿಯಬಹುದು. ಶ್ರೀಪಾದರ ಮೊದಲ ಪರ್ಯಾಯದ ಅವಧಿ 1952-53. ಅದಕ್ಕೂ ಹಿಂದಿನ ವರ್ಷಗಳಲ್ಲಿ ರೇಶನ್‌ ಇತ್ತು. ಅಂದರೆ ಊಟಕ್ಕೆ ಬೇಕಾದ ಅಕ್ಕಿಯ ಸರಬರಾಜು- ವಿತರಣೆಗೂ ನಿಯಂತ್ರಣವಿತ್ತು. ಆಹಾರ ಧಾನ್ಯದ ಪೂರೈಕೆ ಇರಲಿಲ್ಲ.

ಶ್ರೀಗಳ ಮೊದಲ ಪರ್ಯಾಯದ ಅವಧಿಯಲ್ಲಿ ಆ ನಿರ್ಬಂಧ ಹೋಯಿತು. ಆಗ ಈಗಿನಂತೆ ಹೊರಗಿನ ಯಾತ್ರಿಕರು ಬರುತ್ತಿರಲಿಲ್ಲ. ಬಂದವರಿಗೆ ಊಟ ಒದಗಿಸುವುದೇ ಆ ಕಾಲದಲ್ಲಿ ಮಠಕ್ಕೆ ಬಹಳ ದೊಡ್ಡ ಖರ್ಚು. ಊಟಕ್ಕೆ ಬರುವವರಿಗೂ ಹಾಗೆಯೇ, ಒಂದು ಹೊತ್ತಿನ ಊಟ ಮಠದಲ್ಲಿ ಆದರೆ ಉಳಿತಾಯ.

ಆದರೆ ಮಠದ ಆಡಳಿತದ ದೃಷ್ಟಿಯಿಂದ ಇದೊಂದು ಕೇವಲ ಖರ್ಚಿನ ಬಾಬ್ತು ಎಂದಿತ್ತು. ಆಗ ಪರ್ಯಾಯ ಪೀಠವೇರುವ ಮಠದ ಯೋಜನೆಗಳೆಂದರೆ ಕಟ್ಟಡಗಳನ್ನು ಕಟ್ಟುವುದು ಇರಲಿಲ್ಲ. ಯಾತ್ರಿಕರು, ಭಕ್ತರಿಗೆ ಅನ್ನಪ್ರಸಾದ ನೀಡುವುದೇ ದೊಡ್ಡ ಯೋಜನೆ.

ಪ್ರಥಮ ಪರ್ಯಾಯ ಕಾಲದಲ್ಲಿ ಪೇಜಾವರ ಶ್ರೀಗಳು ಆಗುಂಬೆಯಿಂದ ಕಷ್ಟಪಟ್ಟು ಅಕ್ಕಿ ತರಿಸಬೇಕಾಯಿತು. ಪೀಠದಿಂದ ನಿರ್ಗಮಿಸುವಾಗ ಶ್ರೀಮಠಕ್ಕೆ 2 ಲಕ್ಷ ರೂ. ಗಳಷ್ಟು ಸಾಲವಾಯಿತು. ಇದು ಆ ಕಾಲದಲ್ಲಿ ದೊಡ್ಡ ಮೊತ್ತದ ಸಾಲ. ಆಗ ಮಠಗಳ ಮೇಲೆ ಸರಕಾರದ್ದೂ ನಿಯಂತ್ರಣವಿತ್ತು.

ಈಗ ಯಾತ್ರಿಕರು, ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ. ಕೆಲವು ಬಾರಿ 25 ಸಾವಿರ ಜನರು ಊಟ ಮಾಡುವುದಿದೆ. ಈಗ ಸಾಲ ಇಲ್ಲ. ಬಂದ ಹಣ ಅಲ್ಲಿಂದಲ್ಲಿಗೆ ಸರಿಯಾಗುತ್ತದೆ. ಸಾಲ ಮಾಡಬೇಕಾದ ಪರಿಸ್ಥಿತಿ ಇಲ್ಲ. ಶ್ರೀಕೃಷ್ಣ ಮಠಕ್ಕೆ ಬಂದ ಹಣದಿಂದಲೇ ಮೂಲ ಸೌಕರ್ಯ, ಅಭಿವೃದ್ಧಿಗಳನ್ನು ಮಾಡಬಹುದಾಗಿದೆ.

ಇದೇ ವೇಳೆಗೆ ಆಗಿನ ಆಸ್ತಿಪಾಸ್ತಿ ಈಗ ಯಾವುದೂ ಇಲ್ಲ. ಆಗ ಒಂದೊಂದು ಮಠಕ್ಕೆ ಮೂರ್‍ನಾಲ್ಕು ಸಾವಿರ ಅಕ್ಕಿ ಮುಡಿ ಬರುವಷ್ಟು ಆಸ್ತಿಗಳಿದ್ದವು. ಈಗ ಇವು ಯಾವುದೂ ಇಲ್ಲ. ಆಗ ಅಕ್ಕಿಯ ಸಾಮರ್ಥ್ಯವಿದ್ದರೂ ಅದಕ್ಕೆ ಪೂರಕವಾಗಿ ಬೇಕಾದ ಹಣಕಾಸು ಸಾಮರ್ಥ್ಯವಿರಲಿಲ್ಲ.

ಆಗ ಪೇಜಾವರ ಮಠಕ್ಕೆ 3,000 ಅಕ್ಕಿ ಮುಡಿ ಬರುತ್ತಿತ್ತು. ಆಗ ಸೇವೆ ಈಗಿನಂತೆ ಬರುತ್ತಿರಲಿಲ್ಲ. 3,000 ಅಕ್ಕಿ ಮುಡಿಯಿಂದ ಪೇಜಾವರ ಮಠದ ಖರ್ಚು ನಡೆಯುತ್ತಿತ್ತೇ ವಿನಾ ಶ್ರೀಕೃಷ್ಣಮಠದ ಖರ್ಚಿಗೆ ಸಾಕಾಗುತ್ತಿರಲಿಲ್ಲ. ಸಾಲ ಮಾಡಬೇಕಾಗುತ್ತಿತ್ತು ಎಂದು ಶ್ರೀಗಳು ಹೇಳುತ್ತಿದ್ದರು.

ಟಾಪ್ ನ್ಯೂಸ್

ಬಸವರಾಜ ಬೊಮ್ಮಾಯಿ

Gadag; ಕಾನೂನು ಸುವ್ಯವಸ್ಥೆ ಹದಗೆಡಲು ಸರ್ಕಾರದ ವ್ಯವಸ್ಥೆಯೇ ಕಾರಣ: ಬಸವರಾಜ ಬೊಮ್ಮಾಯಿ

1

Tollywood: ಬಹುನಿರೀಕ್ಷಿತ ʼಪುಷ್ಪ-2ʼ ರಿಲೀಸ್‌ ಡೇಟ್‌ ಮುಂದೂಡಿಕೆ?

ಮಗುವನ್ನು ಕಾರಿನಲ್ಲಿ ಬಿಟ್ಟು ಮದುವೆಗೆ ಹೋದ ಕುಟುಂಬ… ನೆನಪಾಗುವಷ್ಟರಲ್ಲಿ ಮಿಂಚಿತ್ತು ಕಾಲ

ಮಗುವನ್ನು ಕಾರಿನಲ್ಲಿ ಬಿಟ್ಟು ಮದುವೆಗೆ ಹೋದ ಕುಟುಂಬ… ನೆನಪಾಗುವಷ್ಟರಲ್ಲಿ ಮಿಂಚಿತ್ತು ಕಾಲ

Hassan; ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾದ ನಾಲ್ವರು ಮಕ್ಕಳು

Hassan; ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾದ ನಾಲ್ವರು ಮಕ್ಕಳು

ಈಶ್ವರ್ ಖಂಡ್ರೆ

Bidar; ಯುವಕರ‌ ಬದುಕು‌ ಹಾಳು ಮಾಡಿದ‌ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ: ಈಶ್ವರ್ ಖಂಡ್ರೆ

ಜಮ್ಮು – ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್‌… ಇಬ್ಬರು ಉಗ್ರರು ಹತ

ಜಮ್ಮು – ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್‌… ಇಬ್ಬರು ಉಗ್ರರು ಹತ

Virat kohli spoke about his post-retirement life

Virat Kohli; ನಿವೃತ್ತಿಯ ಬಗ್ಗೆ ಮಾತನಾಡಿದ ವಿರಾಟ್..; ಫ್ಯಾನ್ಸ್ ಗೆ ಆತಂಕತಂದ ಕೊಹ್ಲಿ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ve-46

ರಾಜಕಾರಣ- ಭ್ರಷ್ಟಾಚಾರ- ಸ್ವರ್ಗ- ಪರಿಸರ- ಪುಣ್ಯ…

ve-44

ರಥಬೀದಿ, ಪೇಜಾವರ ಮಠದಲ್ಲಿ ನೀರವ ಮೌನ

ve-47

ರಾಮ-ವಿಠಲ, ಶ್ರೀಕೃಷ್ಣ, ರಾಮಲಲ್ಲಾ…

bg-68

ಪೇಜಾವರ ಶ್ರೀ ಬದುಕಿನ ಸಾರ

kolar-tdy-1

ದಲಿತ ಕೇರಿಗೆ ಭೇಟಿ ನೀಡಿದ್ದ ಪೇಜಾವರ ಶ್ರೀ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Nutrition Stewardship Program at KMC

Manipal: ಕೆಎಂಸಿಯಲ್ಲಿ ನ್ಯೂಟ್ರಿಷನ್ ಸ್ಟೀವರ್ಡ್‌ಶಿಪ್ ಕಾರ್ಯಕ್ರಮ

Sandalwood: ‘ಇದು ನಮ್‌ ಶಾಲೆ’ಯ ಹಾಡುಗಳು ಬಂತು

Sandalwood: ‘ಇದು ನಮ್‌ ಶಾಲೆ’ಯ ಹಾಡುಗಳು ಬಂತು

ಬಸವರಾಜ ಬೊಮ್ಮಾಯಿ

Gadag; ಕಾನೂನು ಸುವ್ಯವಸ್ಥೆ ಹದಗೆಡಲು ಸರ್ಕಾರದ ವ್ಯವಸ್ಥೆಯೇ ಕಾರಣ: ಬಸವರಾಜ ಬೊಮ್ಮಾಯಿ

8-bng

17 ಕೋಟಿ ರೂ. ವಿದ್ಯುತ್‌ ಬಿಲ್‌ ಕಂಡು ಮನೆ ಮಾಲೀಕನಿಗೆ ಶಾಕ್‌!

1

Tollywood: ಬಹುನಿರೀಕ್ಷಿತ ʼಪುಷ್ಪ-2ʼ ರಿಲೀಸ್‌ ಡೇಟ್‌ ಮುಂದೂಡಿಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.