ಋತುಮತಿಯರ ಮನೆಗೆ ಸೇರಿಸಿದ ಶಾಸಕಿ ಪೂರ್ಣಿಮಾ
Team Udayavani, Jan 9, 2020, 3:00 AM IST
ಚನ್ನಗಿರಿ: ತಾಲೂಕಿನ ಚಿಕ್ಕಗಂಗೂರು ಸಮೀಪದ ಗೊಲ್ಲರಹಟ್ಟಿಯಲ್ಲಿ ಋತುಮತಿ ಆದವರನ್ನು ಹೊರಗಿಡುವ ಪದ್ಧತಿ ಬೆಳಕಿಗೆ ಬಂದಿದ್ದು, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಗ್ರಾಮದ ಜನರ ಮನವೊಲಿಸಿ ಆ ಮಹಿಳೆಯರನ್ನು ಮನೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೊಲ್ಲರಹಟ್ಟಿಯಲ್ಲಿನ ದೇವಾಲಯದ ಕಾರ್ಯಕ್ರವåಕ್ಕೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ.
ಶಾಸಕಿ ಪೂರ್ಣಿಮಾ ದೇವಾಲಯದ ಕಾರ್ಯಕ್ರಮ ಮುಗಿಸಿ ಹೊರಡುವಾಗ ನಾಲ್ವರು ಮಹಿಳೆಯರು ಗ್ರಾಮದ ಹೊರಗಿನ ಒಂದು ಕಟ್ಟಡದಲ್ಲಿ ಇರುವುದನ್ನು ಗಮನಿಸಿದ್ದಾರೆ. ಅವರನ್ನು ಕರೆದು ಊರ ಹೊರಗಿರುವ ಬಗ್ಗೆ ವಿಚಾರಿಸಿದ್ದಾರೆ. ಆಗ ಮಹಿಳೆಯರು ಗ್ರಾಮದ ಸಂಪ್ರದಾಯದ ಬಗ್ಗೆ ಹೇಳಿದ್ದಾರೆ. ಋತುಮತಿಯರಾದ ತಾವೆಲ್ಲ ಮನೆಯಿಂದ ಹೊರಗುಳಿದು ಮೂರು ದಿನ ಊರ ಹೊರಗೇ ಇರುತ್ತೇವೆ ಎಂದಿದ್ದಾರೆ.
ತಕ್ಷಣ ಶಾಸಕಿ ಗ್ರಾಮದ ಹಿರಿಯರು ಹಾಗೂ ಜನರನ್ನು ಕರೆಸಿ ಇವೆಲ್ಲ ಮೌಢಾಚರಣೆಯಾಗಿದ್ದು, ಋತುಮತಿ ಆದವರನ್ನು ಊರ ಹೊರಗಡೆ ಕಳುಹಿಸುವುದು ತಪ್ಪು. ಮಹಿಳೆಯರಲ್ಲಿ ಇವೆಲ್ಲ ಸಹಜ ಎಂದು ತಿಳಿಹೇಳಿ ನಾಲ್ವರು ಮಹಿಳೆಯರನ್ನು ಅವರ ಮನೆಗೆ ಸೇರಿಸಿದ್ದಾರೆ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಜಿಪಂ ಅಧ್ಯಕ್ಷೆ ಯಶೋಧಮ್ಮ, ಜಿಪಂ ಸದಸ್ಯೆ ಶಾಂತ ಕುಮಾರಿ ಶಶಿಧರ್, ಪಿ.ವಾಗೀಶ್, ತಾಪಂ ಅಧ್ಯಕ್ಷೆ ಉಷಾ ಹಾಗೂ ಗ್ರಾಮದ ಮಹಿಳೆಯರು ಮತ್ತು ಮುಖಂಡರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ
MUST WATCH
ಹೊಸ ಸೇರ್ಪಡೆ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ