ಕನಸಾಗೇ ಉಳಿದ ಮೆಗಾ ಮಾರ್ಕೆಟ್‌ ನಿರ್ಮಾಣ


Team Udayavani, Jan 11, 2020, 2:08 PM IST

11-January-8

ಇಂಡಿ: ಪಟ್ಟಣದ ಜನರ ಬಹು ದಿನಗಳ ಬೇಡಿಕೆಯಾದ ಮೆಗಾ ಮಾರ್ಕೆಟ್‌ ನಿರ್ಮಾಣಕ್ಕೆ ಸರಕಾರ ತಣ್ಣೀರೆರಚಿದೆ. ಸರಕಾರದಿಂದ ಮಂಜೂರಾದ 8 ಕೋಟಿ ರೂ. ಅನುದಾನವನ್ನು ನೆರೆ ಸಂಸ್ರಸ್ತರಿಗೆ ನೀಡಲು ಸರ್ಕಾರ ತಡೆ ಹಿಡಿದಿದ್ದು ಮೆಗಾ ಮಾರ್ಕೆಟ್‌ ನಿರ್ಮಾಣ ಕನಸಾಗೇ ಉಳಿದಿದೆ.

ಇದರಿಂದ ಇಂಡಿ ನಗರದ ವ್ಯಾಪಾರಸ್ಥರಿಗೆ ನಿರಾಸೆ ಮೂಡಿದ್ದು ಮತ್ತೆ ಅನುದಾನ ನೀಡಿ ಕಟ್ಟಡ ಪ್ರಾರಂಭಕ್ಕೆ ಅನುಕೂಲ ಮಾಡಿ ಕೊಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ನಗರಾಭಿವೃದ್ಧಿ ಇಲಾಖೆಯಿಂದ 8 ಕೋಟಿ ರೂ. ವಿಶೇಷ ಸಹಾಯಧನ ನೀಡಲು, ಕರ್ನಾಟಕ ನಗರ ಮೂಲಭೂತ ಸೌಕರ್ಯಗಳ ಹಣಕಾಸು ಸಂಸ್ಥೆಯಿಂದ ಪ್ರಥಮ ಹಂತ 8 ಕೋಟಿ ರೂ. ಮತ್ತು ದ್ವಿತೀಯ ಹಂತದಲ್ಲಿ 8 ಕೋಟಿ ರೂ. ಸಾಲ 6.75 ಪ್ರತಿಶತ ಬಡ್ಡಿದರದಲ್ಲಿ ನೀಡಬೇಕಿತ್ತು. ಇನ್ನು ಸ್ಥಳೀಯ ಸಂಸ್ಥೆಯಿಂದ 2 ಕೋಟಿ ರೂ. ಅನುದಾನ ಈ ಕಟ್ಟಡ ನಿಮಾಣಕ್ಕೆ ನೀಡಬೇಕಿದ್ದು ಒಟ್ಟು 26 ಕೋಟಿ ವೆಚ್ಚದಲ್ಲಿ ಈ ಭವ್ಯ ಮೆಗಾ ಮಾರ್ಕೆಟ್‌ ನಿರ್ಮಾಣವಾಗಬೇಕಿತ್ತು. ಪ್ರಥಮ ಅಂತಸ್ತಿನಲ್ಲಿ 237 ಅಂಗಡಿ ನಿರ್ಮಾಣ ಮಾಡಬೇಕಿದ್ದು, ದ್ವಿತೀಯ ಅಂತಸ್ತಿನಲ್ಲಿ ವ್ಯಾಪಾರಸ್ಥರ ಬೇಡಿಕೆಗೆ ಅನುಗುಣವಾಗಿ ಕಟ್ಟಡಗಳ ನಿರ್ಮಾಣ ಮಾಡಲಾಗುತ್ತದೆ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದರು.

ಜಿಲ್ಲಾ ಕೇಂದ್ರ ವಿಜಯಪುರದಲ್ಲಿ ಇಂತಹ ಕಟ್ಟಡ ಬಿಟ್ಟರೆ ಎರಡನೇ ಕಟ್ಟಡ ಇಂಡಿ ನಗರದ ಮೆಗಾ ಮಾರ್ಕೆಟ್‌ ಆಗಲಿದೆ. ವಿಜಯಪುರದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಮಾರ್ಕೆಟ್‌ನಲ್ಲಿ ಹೇಗೆ ಎಲ್ಲ ವಸ್ತುಗಳು ಒಂದೆಡೆ ಸಿಗುತ್ತವೆಯೋ ಹಾಗೆ ಎಲ್ಲ ವಸ್ತುಗಳು ಒಂದೇ ಕಡೆ ಸಿಗುವಂತೆ ಮಾಡಲು ಈ ಮೆಗಾ ಮಾರ್ಕೆಟ್‌ ನಿರ್ಮಾಣವಾಗುತ್ತದೆ ಎಂದು ಜನ ಖುಷಿ ಪಟ್ಟಿದ್ದರು ಆದರೆ ಈಗ ಇವೆಲ್ಲವುಗಳಿಗೆ ಸರಕಾರ ಅನುದಾನ ತಡೆ ಹಿಡಿದಿದ್ದರಿಂದ ಜನರಲ್ಲಿ ನಿರಾಸೆ ಮೂಡಿದೆ. ಇನ್ನು ಎರಡು ವರ್ಷಗಳ ಹಿಂದೆ ಪುರಸಭೆ ವತಿಯಿಂದ ರಸ್ತೆ ಅಗಲೀಕರಣ ಸಂದರ್ಭದಲ್ಲಿ 110 ಅಂಗಡಿ ಕೆಡವಲಾಗಿತ್ತು.

ಹೀಗಾಗಿ ಅಂಗಡಿಗಳನ್ನು ಕಳೆದುಕೊಂಡ 110 ಜನರಿಗೂ ಇಲ್ಲಿ ನ್ಯಾಯ ಸಿಗುವಂತೆ ಮಾಡುತ್ತೇನೆ ಎಂದು ಶಾಸಕ ವೈ.ವಿ. ಪಾಟೀಲ ಹೇಳಿದ್ದರು. ಈ ಕಟ್ಟಡ ನಿರ್ಮಾಣದ ನಂತರ ಕಟ್ಟಡ ಕಳೆದುಕೊಂಡ ಎಲ್ಲರಿಗೂ ಪ್ರಥಮ ಅದ್ಯತೆ ನೀಡಿ ಅವರಿಗೆ ಅಂಗಡಿ ಒದಗಿಸುವ ಕಾರ್ಯ ಪುರಸಭೆ ಮಾಡುತ್ತದೆ ಎಂದು ತಿಳಿದು ಅಂಗಡಿಕಾರರು ಸಹ ಖುಷಿಯಾಗಿದ್ದರು. ಆದರೆ ಅವೆಲ್ಲವುಗಳು ಈಗ ಹುಸಿಯಾಗಿವೆ.

26 ಕೋಟಿ ವೆಚ್ಚದಲ್ಲಿ 1.6 ಎಕರೆ ಜಮೀನಿನಲ್ಲಿ (ಹಳೆ ಗೋಡಾವನ
ಸ್ಥಳ) ಕಟ್ಟಡ ಮಾಡಲು ತೀರ್ಮಾನಿಸಲಾಗಿತ್ತು. ನೆರೆ ಸಂತ್ರಸ್ತರಿಗಾಗಿ ಮೆಗಾ ಮಾರ್ಕೆಟ್‌ ನಿರ್ಮಾಣಕ್ಕೆ ಮಂಜೂರಾದ 8 ಕೋಟಿ ರೂ.ಯನ್ನು ಸರ್ಕಾರ ತಡೆ ಹಿಡಿದಿದೆ. ಮತ್ತೆ ಡಿಸಿ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅನುದಾನ ಮಂಜೂರಾದ ಮೇಲೆ ಕಟ್ಟಡ ನಿರ್ಮಿಸಲಾಗುವುದು.
ಗಂಗಾಧರ ವಾಲಿ,
ಪುರಸಭೆ ಮುಖ್ಯಾಧಿಕಾರಿ

ಈಗಾಗಲೆ ಮೆಗಾ ಮಾರ್ಕೆಟ್‌ ನಿರ್ಮಾಣಕ್ಕೆ ಸ್ಥಳ ನಿಯೋಜನೆ
ಮಾಡಲಾಗಿದೆ. ಸರಕಾರದಿಂದ 8 ಕೋಟಿ ರೂ. ಅನುದಾನ ಸಹ ಮಂಜೂರಾಗಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದರಿಂದ ಮಂಜೂರಾದ ಹಣ ತಡೆ ಹಿಡಿದಿರಬಹುದು. ಮತ್ತೆ ಹಣ ಮಂಜೂರು ಮಾಡಲು ಸರಕಾರಕ್ಕೆ ಮನವಿ ಮಾಡಿದ್ದು ಶೀಘ್ರದಲ್ಲೇ ಮೆಗಾ ಮಾರ್ಕೆಟ್‌ ನಿರ್ಮಾಣಕ್ಕೆ ಚಾಲನೆ ನೀಡಲಿದ್ದೇವೆ.
ಯಶವಂತರಾಯಗೌಡ ಪಾಟೀಲ,
ಶಾಸಕ

ಉಮೇಶ ಬಳಬಟ್ಟಿ

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.