ಜಿಲ್ಲೆಗೂ ತಟ್ಟಿತು ಪೆಟ್ರೋಲ್‌-ಡೀಸೆಲ್‌ ಶಾಕ್‌

ಡೀಸೆಲ್‌ ಮಾರಾಟ, ಪೂರೈಕೆಯೂ ಕುಸಿತ

Team Udayavani, Jan 13, 2020, 6:39 AM IST

n-33

ಉಡುಪಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆಯ ಏರುಪೇರು ಹಾಗೂ ದೇಶದಲ್ಲಿ ಕುಂಠಿತಗೊಂಡಿರುವ ವ್ಯಾಪಾರ ವಹಿವಾಟುಗಳ ಪರಿಣಾಮ ಡೀಸೆಲ್‌, ಪೆಟ್ರೋಲ್‌ ಬೆಲೆಗಳ ಮೇಲಾಗುತ್ತಿದ್ದು ಜಿಲ್ಲೆಗೂ ಬಿಸಿ ತಟ್ಟಿದೆ.

ಜಿಲ್ಲೆಯಲ್ಲಿ ಅಕ್ಟೋಬರ್‌ ಅಂತ್ಯಕ್ಕೆ 75.14ರಷ್ಟಿದ್ದ ಪೆಟ್ರೋಲ್‌ ದರ ಡಿಸೆಂಬರ್‌ ಅಂತ್ಯಕ್ಕೆ 77.68ಕ್ಕೆ ತಲುಪಿದೆ. ಈ ಮೂಲಕ ಕಳೆದ ಮೂರು ತಿಂಗಳ ಅವಧಿಯಲ್ಲಿ 2.54 ರೂ.ಗಳಷ್ಟು ದರ ಹೆಚ್ಚಳವಾಗಿದೆ. ಡೀಸೆಲ್‌ ದರವೂ ಅಕ್ಟೋಬರ್‌ ಅಂತ್ಯಕ್ಕೆ 67.81 ರಷ್ಟಿತ್ತು. ಡಿಸೆಂಬರ್‌ ಅಂತ್ಯಕ್ಕೆ 69.81ಕ್ಕೆ ತಲುಪಿದೆ. ಅಂದರೆ ಮೂರು ತಿಂಗಳ ಅವಧಿಯಲ್ಲಿ ಹೆಚ್ಚಳವಾದ ದರ 2 ರೂ.ಗಳು.

ಡೀಸೆಲ್‌ಗೆ ಕುಸಿದ ಬೇಡಿಕೆ
ಸಾಮಾನ್ಯವಾಗಿ ದಿನನಿತ್ಯ ಬಳಕೆ ಮಾಡುವ ಪೆಟ್ರೋಲ್‌, ಡೀಸೆಲ್‌ಗ‌ಳ ದರದಲ್ಲಿ ಅದೆಷ್ಟೇ ಏರಿಕೆ ಕಂಡರೂ ಅದರ ಉಪಯೋಗ ಅನಿವಾರ್ಯವಾಗಿರುತ್ತದೆ. ಆದರೆ ಜಿಲ್ಲೆಯಲ್ಲಿ ಕುಂಠಿತಗೊಂಡಿರುವ ವ್ಯಾಪಾರ, ಮೀನುಗಾರಿಗೆ, ಕಟ್ಟಡಗಳ ನಿರ್ಮಾಣ ಕಾಮಗಾರಿಗಳು ವಿಳಂಬಗತಿಯಲ್ಲಿ ಸಾಗುತ್ತಿರುವುದರಿಂದ ಭಾರೀ ಗಾತ್ರದ ಡೀಸೆಲ್‌ ವಾಹನಗಳಿಗೆ ಕೆಲಸವಿಲ್ಲದೆ ನಿಲುಗಡೆಗೊಳಿಸುವ ಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ ನಿರ್ಮಾಣ ಕಾಮಗಾರಿಗಳ ಯಂತ್ರೋಪಕರಣಗಳು ಮತ್ತು ವಾಹನಗಳಲ್ಲಿ ಡೀಸೆಲ್‌ ಬಳಕೆ ಅಧಿಕ ಪ್ರಮಾಣದಲ್ಲಿದೆ. ಆರ್ಥಿಕ ಹಿಂಜರಿತದಿಂದ ನಿರ್ಮಾಣ ವಲಯದಲ್ಲೂ ಕಾಮಗಾರಿ ವಿರಳವಾಗಿರುವುದರಿಂದ ಡೀಸೆಲ್‌ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದೆ.

ಪೂರೈಕೆ ಪ್ರಮಾಣವೂ ಇಳಿಮುಖ
ಪೆಟ್ರೋಲ್‌ ಹಾಗೂ ಡೀಸೆಲ್‌ ಬಳಕೆ ಇಳಿಮುಖವಾದ ಕಾರಣ ಜಿಲ್ಲೆಗೆ ಪೂರೈಕೆಯೂ ಕಡಿಮೆಯಾಗುತ್ತಿದೆ. ಅಕ್ಟೋಬರ್‌ ತಿಂಗಳಲ್ಲಿ ಜಿಲ್ಲೆಗೆ ವಿವಿಧ ತೈಲ ಕಂಪೆನಿಗಳ ಮೂಲಕ 6,550 ಕಿಲೋ ಲೀ. ಪೆಟ್ರೋಲ್‌ ಪೂರೈಕೆಯಾಗುತ್ತಿತ್ತು. ನವೆಂಬರ್‌ನಲ್ಲಿ ಈ ಪ್ರಮಾಣ 5,980ಕ್ಕೆ ಇಳಿದರೆ ಡಿಸೆಂಬರ್‌ ವೇಳೆಗೆ 5,500 ಕ್ಕೆ ಇಳಿದಿದೆ. ಇನ್ನು ಡೀಸೆಲ್‌ ಕಥೆಯೂ ಇದೇ ರೀತಿಯಾಗಿದೆ. ಪೂರೈಕೆ ಪ್ರಮಾಣ ಅಕ್ಟೋಬರ್‌ನಲ್ಲಿ 23,510 ಕಿಲೋ ಲೀ.ರಷ್ಟಿತ್ತು. ನವೆಂಬರ್‌ನಲ್ಲಿ 18,100ಕ್ಕೆ ಇಳಿದರೆ ಡಿಸೆಂಬರ್‌ ವೇಳೆಗೆ 17,500ಕ್ಕೆ ಇಳಿದಿದೆ.

ಬೇಡಿಕೆ ಬಂದರಷ್ಟೇ ಪೂರೈಕೆ
ಇಂಧನಕ್ಕೆ ಜಿಲ್ಲೆಗಳಿಂದ ಬರುವ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲಾಗುತ್ತದೆ. ಈ ಹಿಂದೆ ಒಂದೆರಡು ಬಾರಿ ಪೂರೈಕೆ ಯಲ್ಲೂ ವ್ಯತ್ಯಯವುಂಟಾಗಿ ಜಿಲ್ಲೆಯ ಕೆಲವು ಪೆಟ್ರೋಲ್‌ ಬಂಕ್‌ಗಳಲ್ಲಿ ಇಂಧನ ಕೊರತೆ ಉಂಟಾಗಿತ್ತು. ಆದರೆ ಈಗ ಬೇಡಿಕೆ ಪ್ರಮಾಣವೇ ಕಡಿಮೆಯಾಗಿದೆ. ಪ್ರತೀ ಜಿಲ್ಲೆಯಲ್ಲೂ ಇಂಧನಕ್ಕೆ ಬೇಡಿಕೆ ಕಡಿಮೆಯಾಗುತ್ತಾ ಬಂದರೆ ದೇಶದ ಒಟ್ಟು ಆರ್ಥಿಕ ವ್ಯವಸ್ಥೆಯ ಮೇಲೆ ಇದು ನೇರ ಪರಿಣಾಮ ಬೀರಲಿದೆ ಎನ್ನುತ್ತಾರೆ ತೈಲ ಪೂರೈಕೆ ಕಂಪೆನಿಯ ಸಿಬಂದಿ.

ಇಂಧನ ಬೇಡಿಕೆ ಕುಸಿತ
ಜಿಲ್ಲೆಯ ಅಭಿವೃದ್ಧಿಯಲ್ಲಿ ಸಾರಿಗೆ, ಮೀನುಗಾರಿಕೆಗೆ ಬಹಳ ಪ್ರಾಮುಖ್ಯತೆಯಿದೆ. ಒಟ್ಟು ಆರ್ಥಿಕ ವ್ಯವಸ್ಥೆ ಇವೆರಡರ ಮೇಲೆ ನಿಂತಿದೆ. ಇಂಧನ ದರದಲ್ಲಿ ಏರುಪೇರು ಹಾಗೂ ಜನರಲ್ಲಿ ಹಣಕಾಸು ಇರದಿರುವುದು ಒಟ್ಟು ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ. ಸಾಕಷ್ಟು ಸಂಖ್ಯೆಯ ಘನ ವಾಹನಗಳು ಕೆಲಸವಿಲ್ಲದೆ ದಿನಕಳೆಯುತ್ತಿವೆ. ಪೈಸೆಯ ಲೆಕ್ಕದಲ್ಲಿ ಏರುಪೇರಾಗುವ ಇಂಧನ ದರ ತಿಂಗಳಾಂತ್ಯದ ವೇಳೆಗೆ ರೂ.ಗಳಲ್ಲಿರುತ್ತದೆ. ಬೇಡಿಕೆ ಕಡಿಮೆಯಾದ ಕಾರಣ ಜಿಲ್ಲೆಗೆ ಇಂಧನ ಪೂರೈಕೆಯೂ ಕಡಿಮೆಯಾಗುತ್ತಿದೆ.

ಜಿಲ್ಲೆಗೆ ತೈಲ ಪೂರೈಸುವ ಪ್ರಮುಖ 5 ಕಂಪೆನಿಗಳು
ಇಂಡಿಯನ್‌ ಆಯಿಲ್‌, ಭಾರತ್‌ ಪೆಟ್ರೋಲಿಯಂ, ಎಚ್‌ಪಿಸಿಎಲ್‌, ರಿಲಯನ್ಸ್‌, ಇಎಸ್‌ಎಸ್‌ಎಆರ್‌.

ವ್ಯಾಪಾರ ಕುಂಠಿತ ಕಾರಣ
ದೇಶಾದ್ಯಂತ ವ್ಯಾಪಾರ ವಹಿವಾಟು ಕುಂಠಿತವಾಗಿದೆ. ಈ ಕಾರಣಕ್ಕೆ ಉಡುಪಿ ಜಿಲ್ಲೆಯಲ್ಲೂ ಪೆಟ್ರೋಲ್‌, ಡೀಸೆಲ್‌ ಪೂರೈಕೆ ಪ್ರಮಾಣದಲ್ಲಿ ಶೇ.25ರಷ್ಟು ವ್ಯತ್ಯಯವುಂಟಾಗಿದೆ. ಮುಖ್ಯವಾಗಿ ಮೀನುಗಾರಿಗೆ, ಸಿವಿಲ್‌ ಕ್ಷೇತ್ರಗಳಲ್ಲಿ ಕೆಲಸಕಾರ್ಯಗಳು ನಿಧಾನಗತಿಯಲ್ಲಿ ನಡೆಯುತ್ತಿದೆ. ಇದರಿಂದಾಗಿ ಇಂಧನ ಬಳಸುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ.
-ಪ್ರಭಾಕರ ಶೆಟ್ಟಿ, ಅಧ್ಯಕ್ಷರು, ಕರಾವಳಿ ಪೆಟ್ರೋಲಿಯಂ ಡೀಲರ್ ಅಸೋಸಿಯೇಶನ್‌

ಉದ್ಯಮ ಕ್ಷೇತ್ರದಲ್ಲಿ ಕುಂಠಿತ
ಡೀಸೆಲ್‌ ದರ ಪ್ರತಿ ನಿತ್ಯ ಪೈಸೆಯ ಲೆಕ್ಕದಲ್ಲಿ ಹೆಚ್ಚಳವಾಗುತ್ತಿರುವುದರಿಂದ ಬಸ್ಸು ಮಾಲಕರು ಕೂಡ ಅತ್ತ ದರ ಏರಿಕೆ ಮಾಡಲಾಗದ ಸ್ಥಿತಿಯಲ್ಲಿದಾರೆ. ಒಂದೇ ಬಾರಿ ದರ ಏರಿಕೆಯಾದರೆ ಸುಲಭದಲ್ಲಿ ಬಸ್ಸು ದರ ಏರಿಕೆ ಮಾಡಬಹುದು. ಗುತ್ತಿಗೆದಾರರಿಗೆ ನೀಡುವ ವಿಳಂಬ ವೇತನ ಸಹಿತ ಹಲವಾರು ಕಾರಣಗಳಿಂದಾಗಿ ಸಾರಿಗೆ ಉದ್ಯಮ ನಿಧಾನಗತಿಯಲ್ಲಿದೆ.
-ಕೃಷ್ಣ ಬಿಲ್ಲವ, ಸಾರಿಗೆ ಉದ್ಯಮಿ

ಪುನೀತ್‌ ಸಾಲ್ಯಾನ್‌

ಟಾಪ್ ನ್ಯೂಸ್

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.