ತೊಗರಿ ಖರೀದಿಗೆ ಆ್ಯಪ್ ಗೊಂದಲ
Team Udayavani, Jan 18, 2020, 3:03 PM IST
ಕುಷ್ಟಗಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬೆಂಬಲ ಬೆಲೆ ತೊಗರಿ ಕೇಂದ್ರದಲ್ಲಿ ಬೆಳೆಗಾರರ ನೋಂದಣಿಗೆ ಚಾಲನೆ ಸಿಕ್ಕಿದ್ದು, ನೋಂದಣಿ ಪ್ರಕ್ರಿಯೆಯಲ್ಲಿ ಆರಂಭಿಕ ಗೊಂದಲ ಶುರುವಾಗಿದೆ. ಕಳೆದ ಜ. 13ರಂದು ಮೆಣೇಧಾಳ ಗ್ರಾಮಕ್ಕೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಭೇಟಿ ನೀಡಿದ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಬೆಂಬಲ ಬೆಲೆ ತೊಗರಿ ಕೇಂದ್ರ ಆರಂಭಿಸುವಂತೆ ಮನವಿ ಸಲ್ಲಿಸಿದ್ದರು.
ರೈತರ ಮನವಿಗೆ ಸ್ಪಂದಿಸಿದ ಡಿಸಿಎಂ ಕಾರಜೋಳ ಅವರು, ಕೂಡಲೇ ತೊಗರಿ ಬೆಂಬಲ ಕೇಂದ್ರ ಆರಂಭಿಸುವಂತೆ ಜಿಲ್ಲಾಧಿ ಕಾರಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕುಷ್ಟಗಿ ತಾಲೂಕಿನಲ್ಲಿ ಜ. 17ರಿಂದ ಬೆಂಬಲ ಬೆಲೆ ತೊಗರಿ ಕೇಂದ್ರದ ಆನ್ ಲೈನ್ ನೋಂದಣಿ ಪ್ರಕಿಯೆಯನ್ನು ಕುಷ್ಟಗಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಆರಂಭಿಸಿದೆ. ಆದರೆ ಆರಂಭದಲ್ಲೇ ನೋಂದಣಿಗಾಗಿ ದಾಖಲೆಗಳೊಂದಿಗೆ ಆಗಮಿಸಿದ ರೈತರಿಗೆ ಖರೀ ದಿ ಪ್ರಕ್ರಿಯೆ ನಿಯಮಾವಳಿಯಂತೆ ದಾಖಲೆ ಇದ್ದರೂ ನೋಂದಣಿ ತಿರಸ್ಕರಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಆನ್ಲೈನ್ ನೋಂದಣಿಯ ವೇಳೆ ಜಮೀನಿನ ಪಹಣಿ, ಆಧಾರ ಲಿಂಕ್ ಬ್ಯಾಂಕ್ ಪಾಸ್ಬುಕ್, ರೈತರ ಐಡಿ ಸಂಖ್ಯೆ, ಆಧಾರ್ ಕಾರ್ಡ್ ಇತ್ಯಾದಿ ದಾಖಲೆಗಳನ್ನು ಸಲ್ಲಿಸಬೇಕು. ಬೆಳೆಯ ದೃಢೀಕರಣಕ್ಕೆ ಬೆಳೆದರ್ಶಕ ಆ್ಯಪ್ನಲ್ಲಿ ರೈತರು ತೊಗರಿ ಬೆಳೆ ಇದ್ದರು ಪರಿಷ್ಕೃತಗೊಳ್ಳದೇ ಮುಂಗಾರು ಬೆಳೆ ಹಾಗೆಯೇ ಇದೆ. ಹೀಗಾಗಿ ನೋಂದಣಿಯನ್ನು ತಿರಸ್ಕರಿಸುತ್ತಿರುವುದು ರೈತರನ್ನು ಕಂಗಾಲಾಗಿಸಿದೆ. ತೆಗ್ಗಿಹಾಳ ಗ್ರಾಮದ ರೈತ ನಡುಗಡ್ಡೆಪ್ಪ ಅವರ ಸ.ನಂ. 17/ಹಿಸ್ಸಾ 2 ಅ ದಲ್ಲಿ ತೊಗರಿ ಬೆಳೆಯಲಾಗಿದೆ, ಬೆಳೆ ದರ್ಶಕ ಆ್ಯಪ್ನಲ್ಲಿ ಸಜ್ಜೆ ಬೆಳೆ ದಾಖಲಾಗಿದೆ.
ತಳವಗೇರಾ ರೈತ ಮಹೇಶ ಕೊಪ್ಪದ ಅವರು ತೊಗರಿ ಬೆಳೆಯಲಾಗಿದ್ದರೂ. ಹುರಳಿ ಎಂದು ನಮೂದಾಗಿದೆ. ಬಹುತೇಕ ರೈತರ ಪಹಣಿಗೂ ಬೆಳೆದ ಬೆಳೆಗೂ ವ್ಯತ್ಯಾಸ ಕಂಡು ಬಂದಿದ್ದು ಸದರಿ ವ್ಯತ್ಯಾಸ ಸರಿಪಡಿಸದೇ ನೋಂದಣಿ ತಿರಸ್ಕರಿಸುತ್ತಿರುವುದು ಸರ್ಕಾರ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ