ಕಲ್ಯಾಣಿ, ಕೆರೆಗಳ ಅಭಿವೃದ್ಧಿಗೆ ಜಲಾಭಿಷೇಕ ಯೋಜನೆ
Team Udayavani, Jan 25, 2020, 3:03 AM IST
ಮಂಗಳೂರು: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಸೇರಿದ ದೇವಾಲಯಗಳ ಕಲ್ಯಾಣಿ, ಕೊಳ, ಕೆರೆ, ಸರೋವರಗಳನ್ನು ಅಭಿವೃದ್ಧಿಪಡಿಸಲು ಜಲಾಭಿಷೇಕ ಯೋಜನೆ ರೂಪಿಸಲಾ ಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಈ ಯೋಜನೆಗೆ ತಗಲುವ ವೆಚ್ಚಗಳನ್ನು ಆಯಾಯ ದೇವಾಲಯಗಳ ನಿಧಿ ಮತ್ತು ವಿವಿಧ ಖಾಸಗಿ ಉದ್ದಿಮೆಗಳ ಸಿಎಸ್ಆರ್ ನಿಧಿಯಡಿ, ಸಾರ್ವಜನಿಕರ ದೇಣಿಗೆ, ಶ್ರಮದಾನದ ಮೂಲಕ ಭರಿಸಲಾಗುವುದು ಎಂದರು.
ಮದ್ಯದಂಗಡಿಗಳಿಗೆ ದೇವರ ಹೆಸರಿಡದಂತೆ ಮನವಿ: ಬಾರ್, ಮದ್ಯದಂಗಡಿಗಳಿಗೆ ದೇವರ ಹೆಸರನ್ನು ಇಡುವುದಕ್ಕೆ ಅವಕಾಶ ನೀಡಬಾರದೆಂದು ಕೆಲವರು ಮನವಿ ಮಾಡಿಕೊಂಡಿ ರುವ ಹಿನ್ನಲೆಯಲ್ಲಿ ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಅಬಕಾರಿ-ಕಾನೂನು ಇಲಾಖೆಗೆ ಸೂಚಿಸಿದ್ದೆ.
ಅದು ಪರಿಶೀಲನೆಯಲ್ಲಿದೆ. ಬಾರ್, ಮದ್ಯದಂಗಡಿಗಳಿಗೆ ದೇವರ ಹೆಸರು ಇಡಬಾರದು ಹಾಗೂ ಅಂತಹ ಹೆಸರುಗಳಿದ್ದರೆ ಸ್ವಯಂಪ್ರೇರಿತವಾಗಿ ತೆರವುಗೊಳಿಸಬೇಕು ಎಂದು ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು.