“ರಾಜ್ಯದಲ್ಲಿ ಬಲಪಂಥೀಯ ಸಂಘಟನೆಗಳನ್ನೂ ನಿಷೇಧಿಸಿ’
Team Udayavani, Jan 25, 2020, 3:03 AM IST
ಮೈಸೂರು: ಎಸ್ಡಿಪಿಐ, ಪಿಎಫ್ಐ ಸಂಘಟನೆ ನಿಷೇಧಿಸುವಂತೆ ಶಿಫಾರಸು ಮಾಡಿರುವ ರಾಜ್ಯ ಸರ್ಕಾರದ್ದು ದ್ವಂದ್ವ ನಿಲುವು. ನಿಷೇಧ ಮಾಡುವುದಾದರೆ ಬಲ ಪಂಥೀಯ ಸಂಘಟನೆಗಳಾದ ಆರೆಸ್ಸೆಸ್, ಭಜರಂಗದಳ, ಶ್ರೀರಾಮಸೇನೆಯನ್ನೂ ನಿಷೇಧಿಸಲಿ ಎಂದು ದಿನೇಶ್ ಗುಂಡೂರಾವ್ ಆಗ್ರಹಿಸಿದರು. ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ಕೇವಲ ಎಸ್ಡಿಪಿಐ ಅಥವಾ ಎಡಪಂಥೀಯ ಸಂಘಟನೆಗಳು ಮಾತ್ರ ಅಪರಾಧ ಕೃತ್ಯ ಮಾಡಿದ್ದಾವಾ?
ಬಲಪಂಥೀಯ ಸಂಘಟನೆಗಳಾದ ಆರೆಸ್ಸೆಸ್, ಭಜರಂಗದಳ, ಶ್ರೀರಾಮಸೇನೆ ಗಳವರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿಲ್ಲವೇ ಎಂದು ಪ್ರಶ್ನಿಸಿದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣದಲ್ಲಿ ನಿಮಗಿಷ್ಟವಾಗದ ಹೆಸರು ಕೇಳಿ ಬಂದಿದ್ದರಿಂದ ಮೌನವಾಗಿದ್ದೀರಿ, ನೀವು ಗುರಿಯಾಗಿಸಿ ಕೊಂಡಿರುವ ಅಲ್ಪಸಂಖ್ಯಾತರ ಹೆಸರು ಕೇಳಿ ಬಂದಿದ್ದರೆ ಸುಮ್ಮನಿರುತ್ತಿದ್ದಿರಾ ಎಂದು ಪ್ರಶ್ನಿಸಿದರು.
ಬಲಪಂಥೀಯ ಸಂಘಟನೆಗಳನ್ನೂ ನಿಷೇಧ ಮಾಡಬೇಕು ಎಂದಿರುವ ದಿನೇಶ್ ಗುಂಡೂರಾವ್ ಮಾತಿಗೆ ಅಷ್ಟು ಬೆಲೆಯೂ ಇಲ್ಲ. ಬೆಲೆ ಕೊಡಬೇಕಾದ ಅಗತ್ಯವೂ ಇಲ್ಲ. ನಿಮ್ಮನ್ನು ಜನ ಮೂಲೆಗೆ ಸೇರಿಸಿ ಆಗಿದೆ. ನಿಮ್ಮದೇ ಪಕ್ಷದ ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ನಡೆಸಿದ್ದು ಯಾರು? ಮೈಸೂರಿನಲ್ಲಿ ರಾಜು, ಬೆಂಗಳೂರಿನಲ್ಲಿ ರುದ್ರೇಶ್ ಕೊಲೆ ಮಾಡಿದ್ದು ಯಾರು?
-ಪ್ರತಾಪ್ ಸಿಂಹ, ಸಂಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ