ವಿವಿಧೆಡೆ ಮತದಾರರ ದಿನಾಚರಣೆ
Team Udayavani, Jan 25, 2020, 1:04 PM IST
ಬ್ಯಾಡಗಿ: ಮತದಾನ ಪ್ರಕ್ರಿಯೆಯಿಂದ ದೂರ ಉಳಿಯುವುದು ಆತ್ಮ ವಂಚನೆಗೆ ಸಮನಾದ ಕಾರ್ಯವಾಗಿದ್ದು, ಶೇ.62ರಷ್ಟು ಯುವಕರಿರುವ ದೇಶದಲ್ಲಿ ಶೇ.50ರಷ್ಟು ಮತದಾನ ನಡೆಯದಿರುವುದು ಖೇದಕರ ಎಂದು ಕಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ರಾಜೇಶ್ ಹೊಸ್ಮನೆ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಭವನದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಅಭ್ಯುದಯಕ್ಕಾಗಿ ಮತದಾನ ಶ್ರೇಷ್ಠವಾದದ್ದು. ಇಂತಹ ಸಾರ್ವತ್ರಿಕ ಸತ್ಯಕ್ಕೆ ಮತಗಟ್ಟೆಗಳಿಂದ ದೂರ ಉಳಿಯುವ ಮೂಲಕ ಮನಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳುವುದನ್ನು ನಿಲ್ಲಿಸಬೇಕು ಎಂದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪ್ರಕಾಶ ಬನ್ನಿಹಟ್ಟಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ರತಿಫವಿಲ್ಲದೆ ಮತದಾರರು ಮತದಾನಕ್ಕೆ ಮುಂದಾಗದಿರುವುದು ಖೇದಕರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಹತ್ವದ ಹಕ್ಕು. ಆದರೆ ಇಂದು ಮತದಾರ ಆಮಿಷಗಳಿಗೆ ಬಲಿಯಾಗಿ ಮಾರಾಟಕ್ಕಿಟ್ಟಿರುವುದು ದೇಶಕ್ಕೆ ಅಭಿವೃದ್ಧಿಗೆ ಮಾರಕ ಎಂದರು.
ದೇಶದ ಭವಿಷ್ಯ ನಿರ್ಧರಿಸುವ ಶಕ್ತಿ ಮತದಾನಕ್ಕಿದೆ. ಶೇ.62ರಷ್ಟು ಯುವ ಜನಾಂಗ ಹೊಂದಿರುವ ದೇಶದಲ್ಲಿ ಮತದಾರರು ಭ್ರಷ್ಟರಾಗುತ್ತಿರುವುದು ನೋವಿನ ಸಂಗತಿ. ಆದ್ದರಿಂದ ಪ್ರಬುದ್ಧರಾಗಿ ಮತ ಚಲಾಯಿಸುವ ಕಾರ್ಯಕ್ಕೆ ಮುಂದಾಗಿ ಎಂದರು. ತಾಪಂ ಕಾರ್ಯ ನಿರ್ವಾಹಕಾಧಿ ಕಾರಿ ಅಬಿದ್ ಗದ್ಯಾಳ ಪ್ರಾಸ್ತಾವಿಕ ಮಾತನಾಡಿ, ಯುವಕರನ್ನು ಉತ್ತೇಜನಗೊಳಿಸುವ ಮೂಲಕ ಮತದಾನಕ್ಕೆ ಸಿದ್ಧಗೊಳಿಸುವುದು ತನ್ಮೂಲಕ ಸುಭದ್ರ ಸರ್ಕಾರ ಆಡಳಿತಕ್ಕೆ ತರುವಂತಹ ಕೆಲಸಕ್ಕೆ ಎಲ್ಲರೂ ಮುಂದಾಬೇಕಿದೆ ಎಂದರು.
ಶಿಕ್ಷಕ ಜೀವರಾಜ ಛತ್ರದ ಉಪನ್ಯಾಸ ನೀಡಿ ಮಾತನಾಡಿ, ದೇಶದ ಪ್ರತಿ ಪ್ರಜೆಯು ಮತದಾನಕ್ಕಿರುವ ಶಕ್ತಿ-ಪ್ರಾಮುಖ್ಯತೆ ಅರಿಯಬೇಕು. ಮತದಾನಮಾಡುವುದು ಇನ್ನೊಬ್ಬರನ್ನು ಓಲೈಸುವುದಕ್ಕಾಗಲ್ಲ ಎಂದರು.
ಇದೇ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಅಡಿವೆಪ್ಪ ಕುರಿ ಜಾನಪದ ಗೀತೆಗಳ ಮೂಲಕ ಮತದಾನ ಜಾಗೃತಿ ಮೂಡಿಸಿದರು. ತಹಶೀಲ್ದಾರ್ ಶರಣಮ್ಮ, ಪುರಸಭೆ ಮುಖ್ಯಾ ಧಿಕಾರಿ ವಿ.ಎಂ. ಪೂಜಾರ, ನ್ಯಾಯವಾ ದಿಗಳಾದ ಎಚ್.ಎಸ್ . ಜಾಧವ ಎಂ.ಕೆ. ಕೋಡಿಹಳ್ಳಿ, ಭಾರತಿ ಕುಲಕರ್ಣಿ, ಸಿ.ಪಿ. ದೊಣ್ಣೇರ, ಸುರೇಶ ಕಾಟೇನಹಳ್ಳಿ, ವಿಜಯಕುಮಾರ ಪಾಟೀಲ ಇದ್ದರು. ಗುಂಡಪ್ಪ ಹುಬ್ಬಳ್ಳಿ ಸ್ವಾಗತಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ
ಹಾವೇರಿ: ಕಾಂಗ್ರೆಸ್ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ
ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ
MUST WATCH
ಹೊಸ ಸೇರ್ಪಡೆ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ