ಕೊಂಕಣ ರೈಲ್ವೇ ರೂವಾರಿ ಜಾರ್ಜ್ ಫೆರ್ನಾಂಡಿಸ್ ಅವರಿಗೆ ಮರಣೋತ್ತರ ಪದ್ಮವಿಭೂಷಣ
Team Udayavani, Jan 26, 2020, 12:15 AM IST
ಆಪ್ತ ಗೆಳೆಯ ಅಮ್ಮೆಂಬಳ ಬಾಳಪ್ಪರ ಜತೆ ಬಂಟ್ವಾಳದಲ್ಲಿ ಜಾರ್ಜ್ ಫೆರ್ನಾಂಡಿಸ್.
ಮಂಗಳೂರು: ಮಾಜಿ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಘೋಷಣೆಯಾಗಿದ್ದು, ಆ ಮೂಲಕ ಕರಾವಳಿಯು ಫೆರ್ನಾಂಡಿಸ್ ಅವರ ದೇಶ ಸೇವೆಯನ್ನು ಮತ್ತೆ ಸ್ಮರಿಸು ವಂತಾಗಿದೆ. ಈ ನಾಡಿನ ಅಪ್ರತಿಮ ಹೋರಾಟಗಾರರಾಗಿದ್ದ ಫೆರ್ನಾಂಡಿಸ್ ಕೊಂಕಣ ರೈಲ್ವೇಯ ರೂವಾರಿ. ಕೇಂದ್ರ ರೈಲ್ವೇ ಇಲಾಖೆಯ ಸಚಿವರಾಗಿದ್ದಾಗ ಅವರ ಛಲದಿಂದಾಗಿ ಈ ಯೋಜನೆ ಸಾಕ್ಷಾತ್ಕಾರಗೊಂಡಿತ್ತು. ಇದಕ್ಕಾಗಿ ಪ್ರತ್ಯೇಕ ನಿಗಮ ಸ್ಥಾಪಿಸಿ, ಅನುದಾನ ಒದಗಿಸಿ, ಉದ್ಘಾಟಿಸಿದ್ದರಿಂದ ಅವರ ಹೆಸರು ಅಜರಾಮರ.
ಮಂಗಳೂರು- ಮುಂಬಯಿ
ಮಂಗಳೂರಿನಲ್ಲಿ ಜಾನ್ ಜೋಸೆಫ್ ಫೆರ್ನಾಂಡಿಸ್- ಎಲೀಸ್ ಮಾರ್ಥಾ ದಂಪತಿಯ ಪುತ್ರನಾಗಿ 1930ರ ಜೂ.3ರಂದು ಜನಿಸಿದರು. ಮುಂದೆ ಮುಂಬಯಿಗೆ ಪಯಣಿಸಿದರು. ಅಲ್ಲಿ ಟ್ರೇಡ್ ಯೂನಿಯನ್ ನಾಯಕನಾಗಿ ರೂಪುಗೊಂಡ ಜಾರ್ಜ್ ಒಂದು ಕರೆ ನೀಡಿದರೆ ಮುಂಬಯಿಗೆ ಮುಂಬಯಿಯೇ ಸ್ತಬ್ಧ ಎಂಬಷ್ಟರ ಮಟ್ಟಿನ ವರ್ಚಸ್ಸು ಬೆಳೆಸಿಕೊಂಡರು. ಕಾರ್ಮಿಕ ನಾಯಕ, ಕೃಷಿಕ, ರಾಜಕಾರಣಿ, ಸಚಿವ, ಆಡಳಿತಗಾರ… ಬಹುಮುಖೀ ವ್ಯಕ್ತಿತ್ವ ಅವರದಾಗಿತ್ತು.
ಜಾರ್ಜ್ ಕರಾವಳಿ ಭಾಗದಲ್ಲಿ ಜನಪ್ರಿಯರಾಗಲು ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯೂ ಕಾರಣವಾಗಿತ್ತು. 1977ರಲ್ಲಿ ಚುನಾವಣೆ ಘೋಷಣೆಯಾದಾಗ ಜಾರ್ಜ್ ಬಿಹಾರದ ಜೈಲಿನಲ್ಲಿ ಇದ್ದುಕೊಂಡೇ ಚುನಾವಣೆಗೆ ಸ್ಪರ್ಧಿಸಿ ಜನತಾ ಪಕ್ಷದಿಂದ ಗೆದ್ದರು. ಬಂಧಮುಕ್ತರಾದ ಬಳಿಕ ಮೊರಾರ್ಜಿ ಸಂಪುಟದಲ್ಲಿ ಸಚಿವರಾದರು. ರೈಲ್ವೇ, ರಕ್ಷಣಾ ಮುಂತಾದ ಮಹತ್ವದ ಖಾತೆಗಳನ್ನು ನಿರ್ವಹಿಸಿ ಪ್ರಸಿದ್ಧಿ ಪಡೆದರು.
ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಅವರು ಹಿರಿಯ ಪ್ರಾಥಮಿಕ ಶಾಲೆಯಲ್ಲಿದ್ದಾಗ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದರು. 9-9-1942ರಂದು ಬ್ರಿಟಿಷರ ವಿರುದ್ಧ ಮಂಗಳೂರಿನಲ್ಲಿ ವಿದ್ಯಾರ್ಥಿಗಳಿಂದ ನಡೆದ ಪ್ರತಿಭಟನೆಯಲ್ಲಿ ಅವರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Karnataka ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು
Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ