ಸಿಎಎ ಪ್ರತಿಭಟಿಸಿ ಮಹಾ ಮಾನವ ಸರಪಳಿ
Team Udayavani, Jan 27, 2020, 5:56 AM IST
ಕಾಸರಗೋಡು: ಕೇಂದ್ರ ಸರಕಾರದ ಪೌರತ್ವ ಮಸೂದೆ ತಿದ್ದುಪಡಿ ಪ್ರತಿಭಟಿಸಿ ಕೇರಳ ರಾಜ್ಯಾದ್ಯಂತ ಎಡರಂಗದ ವತಿಯಿಂದ ರವಿವಾರ ಸಂಜೆ ಮಾನವ ಮಹಾ ಸರಪಳಿ ನಡೆಯಿತು. ಮಹಿಳೆಯರ ಸಹಿತ ಲಕ್ಷಾಂತರ ಮಂದಿ ಭಾಗವಹಿಸಿದರು.
ಕಾಸರಗೋಡು ಜಲ್ಲಾ ಮಟ್ಟದಲ್ಲಿ ಹೊಸ ಬಸ್ ನಿಲ್ದಾಣ ಪರಿಸರದಿಂದ ಆರಂಭಿಸಿದ ಮಾನವ ಮಹಾ ಸರಪಳಿ ಚಂದ್ರಗಿರಿ ದಾರಿಯಾಗಿ ಕಾಲಿಕ್ಕಡವ್ವರೆಗಿನ 45 ಕಿ.ಮೀ. ದೂರ ರಚಿಸಲಾಯಿತು. ಕಾರ್ಯಕರ್ತರು ಮೊದಲೇ ನಿರ್ಧರಿಸಿದ ಸ್ಥಳಗಳಲ್ಲಿ ಮಾನವ ಮಹಾ ಸರಪಳಿಗೆ ಕೈಜೋಡಿಸಿದರು. ಸಿಎಎ ವಿರುದ್ಧ ಪ್ರತಿಜ್ಞೆ ಸ್ವೀಕರಿಸಲಾಯಿತು. ಪ್ರಮುಖ ಕೇಂದ್ರಗಳಲ್ಲಿ ಸಾರ್ವಜನಿಕ ಸಭೆಗಳೂ ಜರಗಿದವು.
ಕಾಸರಗೋಡಿನಲ್ಲಿ ಕಂದಾಯ ಸಚಿವ ಇ. ಚಂದ್ರಶೇಖರನ್, ಸಿ.ಪಿ.ಎಂ. ಕೇಂದ್ರ ಸಮಿತಿ ಸದಸ್ಯ ಎಂ.ವಿ. ಗೋವಿಂದನ್, ಮಾನವ ಮಹಾ ಸರಪಳಿ ಸಂಚಾಲಕ ಕೆ.ಪಿ.ಸತೀಶ್ಚಂದ್ರನ್, ಎಡರಂಗ ನೇತಾರರಾದ ಟಿ.ಕೃಷ್ಣನ್, ಅಸೀಸ್ ಕಡಪ್ಪುರ, ಅಹಮ್ಮದಲಿ ಕುಂಬಳೆ, ಕೆ.ಎ.ಮುಹಮ್ಮದ್ ಹನೀಫ್, ರತೀಶ್ ಪುದಿಯಪುರಂ, ಪಿ.ಪಿ.ರಾಜು, ಸಿ.ಎಚ್.ಕುಂಞಂಬು, ಮಾಜಿ ಸಂಸದ ಪಿ.ಕರುಣಾಕರನ್, ಟಿ.ಕೆ.ರವಿ, ಕೆ.ವಿ.ದಾಮೋದರನ್, ಕೊಟ್ಟರ ವಾಸುದೇವನ್, ವಿ.ಕೆ.ರಾಜನ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Crime: ರಸ್ತೆಯಲ್ಲಿ ಅಟ್ಟಾಡಿಸಿ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆಗೈದ ದುಷ್ಕರ್ಮಿಗಳು ಪರಾರಿ
Arrested: 95 ಲಕ್ಷ ರೂ. ನಕಲಿ ಉತ್ಪನ್ನ ವಶ, ಮೂವರ ಸೆರೆ
Telangana; ಮಳೆ ಅಬ್ಬರಕ್ಕೆ ತತ್ತರ: ಮಗು ಸೇರಿ 13 ಮಂದಿ ಮೃತ್ಯು!
Air India: ಪೈಲಟ್ ಗಳ ಸಾಮೂಹಿಕ ರಜೆ-70ಕ್ಕೂ ಅಧಿಕ ಏರ್ ಇಂಡಿಯಾ ವಿಮಾನ ಸಂಚಾರ ರದ್ದು
Malpe: ತೊಟ್ಟಂ ಬೀಚ್ನಲ್ಲಿ ಮುಳುಗುತ್ತಿದ್ದವರ ರಕ್ಷಣೆ