ಕಣ್ಮನ ಸೆಳೆಯುತ್ತಿರುವ ಫಲ ಪುಷ್ಪಪ್ರದರ್ಶನ
Team Udayavani, Jan 27, 2020, 4:24 PM IST
ಕೋಲಾರ: ನಗರದಲ್ಲಿ ಜಿಲ್ಲಾಡಳಿತ, ಜಿಪಂ, ತೋಟಗಾರಿಕೆ ಇಲಾಖೆ ಹಾಗೂ ಕೈಷಿ ಇಲಾಖೆ ಹಮ್ಮಿಕೊಂಡಿದ್ದ ಫಲ-ಪುಷ್ಪ ಪ್ರದರ್ಶನ ನೋಡಿಗರ ಕಣ್ಮನ ಸೆಳೆಯುತ್ತಿದೆ. ಗಣರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ಈ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್ .ನಾಗೇಶ್ ಚಾಲನೆ ನೀಡಿದರು.
ಹೂ ಮತ್ತು ತರಕಾರಿಗಳಿಂದ ಅಲಂಕರಿಸಿದ ವಿವಿಧ ಸ್ತಬ್ಧಚಿತ್ರಗಳು, ಡಾ.ಎಂ.ಮರೀಗೌಡರ ಮರಳಿನ ಕೆತ್ತನೆ, ದೊಣ್ಣೆ ಮೆಣಸಿನಕಾಯಿ, ಮನೆ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಇಲಾಖೆ ಹಾಗೂ ವಿವಿಧ ಇಲಾಖಾ ಮಳಿಗೆಗೆಳು, ಸಮಗ್ರ ಪೀಡೆ ನಿರ್ವಹಣೆ ಪ್ರಾತ್ಯಕ್ಷಿಕೆ, ಆಧುನಿಕ ಪದ್ಧತಿಯಲ್ಲಿ ಬೆಳೆಗಳ ಪ್ರಾತ್ಯಕ್ಷಿಕೆ, ಹಸಿರು ಮನೆಯಲ್ಲಿ ಇಂಗ್ಲಿಷ್ ಸೌತೆ ಕಾಯಿ, ಕೈತೋಟ ಮತ್ತು ತಾರಸಿ ತೋಟ, ಜೇನು ಸಾಕಣೆ ಪ್ರಾತ್ಯಕ್ಷಿಕೆ, ಹೈಡ್ರೋಪೋನಿಕ್ಸ್ ಮಾದರಿ ಪ್ರದರ್ಶನ, ಹಣ್ಣು ಮತ್ತು ತರಕಾರಿಗಳಲ್ಲಿ ಕೆತ್ತನೆ ಮಾಡಿದ್ದ ಕಲಾಕೃತಿಗಳು ವೀಕ್ಷಕರ ಗಮನ ಸೆಳೆದವು.
ಮಾರಾಟ ಮಳಿಗೆ: ಈ ಪ್ರದರ್ಶನದಲ್ಲಿ ತೋಟಗಾರಿಕೆ ಬೆಳೆಗಳ ಸಸ್ಯ ಸಂತೆ ಸಹ ಆಯೋಜನೆ ಮಾಡಲಾಗಿದ್ದು, ಮಾವು, ಸೀಬೆ, ನೇರಳೆ, ಗೋಡಂಬಿ, ದಾಳಿಂಬೆ, ಅಂಜೂರ, ವಾಟರ್ ಆ್ಯಪಲ್, ನುಗ್ಗೆ, ಕರಿಬೇವು, ಸೀತಾಫಲ, ಬೆಣ್ಣೆ ಹಣ್ಣು, ಬೆಟ್ಟದ ನೆಲ್ಲಿ, ನಿಂಬೆ, ಆರೆಂಜ್ ಹುಣಸೆ, ಚಕೋತ, ಹಲಸು ಹಾಗೂ ಅಲಂಕಾರಿಕ ಗಿಡಗಳು, ಕೈತೋಟಕ್ಕೆ ಬೀಜದ ಕಿಟ್, ರಿಯಾಯ್ತಿ ದರದಲ್ಲಿ ಮಾರಾಟಕ್ಕೆ ದೊರೆಯುತ್ತಿದ್ದು, ವಿವಿಧ ಇಲಾಖೆಗಳಿಂದ ಮಾರಾಟ ಮಳಿಗೆಗಳನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಇವುಗಳ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.
ಜಿಲ್ಲೆ ಮಟ್ಟದ 10 ಪ್ರಗತಿಪರ ರೈತರಿಗೆ 25,000 ರೂ. ನಗದು, ತಾಲೂಕು ಮಟ್ಟದಿಂದ ಆಯ್ಕೆಯಾದ ತಲಾ 5 ರೈತರಿಗೆ 10,000 ರೂ. ಪ್ರೋತ್ಸಾಹಧನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.
ಬಹುಮಾನ ಪಡೆದ ಸಾಧಕ ಅನ್ನದಾತರು: ಕೋಲಾರದ ಕೃಷ್ಣಾಪುರದ ಕೆ.ಎಂ.ರಾಜಣ್ಣ, ಹೊಳಲಿಯ ಡಿ.ಗೋವಿಂದಪ್ಪ, ಮಾಲೂರಿನ ಕುಪ್ಪೂರು ಗ್ರಾಮದ ಕೆ.ಎನ್. ಮುನಿಯಪ್ಪ, ಯಶವಂತಪುರದ ವೈ. ಆರ್.ಅಶೋಕ್, ಬಂಗಾರಪೇಟೆಯ ಹೊಸಕೋಟೆ ವಿ.ರಮೇಶ, ಕರಡಗೂರಿನ ಗೌರಮ್ಮ, ಮುಳಬಾಗಿಲು ತಾಲೂಕಿನ ಪೆರುಮಾಕನಹಳ್ಳಿ ಎನ್.ಧರ್ಮಲಿಂಗಂ, ಮೋತಕಪಲ್ಲಿಯ ಎಂ.ವಿ.ಸುಭಾಷ್ಕುಮಾರ್, ಶ್ರೀನಿವಾಸಪುರದ ಶೆಟ್ಟಿಹಳ್ಳಿ ವಿ.ಮುರಳಿ, ಆಲವಟ್ಟದ ಎ.ಆನಂದರೆಡ್ಡಿ ಅವರನ್ನು ಸನ್ಮಾನಿಸಲಾಯಿತು.
ತಾಲೂಕು ಮಟ್ಟದಲ್ಲಿ ಕೋಲಾರದ ಮೈಲಾಂಡಹಳ್ಳಿಯ ಎ.ಸಿ.ಎತ್ನಮ್ಮ, ಕಲ್ವ ಕೆ.ಎಸ್.ಮಂಜುನಾಥ್, ಯಡಹಳ್ಳಿಯ ವಿ.ರಘು, ಕಲ್ಲೂರು ಕೆ.ಎನ್.ಬಸವರಾಜ, ಶಿಳ್ಳಂಗೆರೆ ವಿ.ನಾರಾಯಣಸ್ವಾಮಿ, ಮುಳಬಾಗಿಲಿನ ಊರುಕುಂಟೆ ಮಿಟ್ಟೂರು ಕೆ.ಎಂ.ಸಾವಿತ್ರಮ್ಮ, ಮಂಡಿಕಲ್ನ ಎಂ.ವಿ.ನೇತಾಜಿ, ಯಚ್ಚನಹಳ್ಳಿ ವನಜಾಕ್ಷಮ್ಮ, ಮರಳಮೇಡು ಡಿ. ರಾಮಚಂದ್ರ, ಎಚ್ ಕೋಡಿಹಳ್ಳಿ ರಾಧಾಕೃಷ್ಣ, ಶ್ರೀನಿವಾಸಪುರದ ಗೆಂಟರನ್ನಗಾರಪಲ್ಲಿ ಆರ್.ರೆಡ್ಡಪ್ಪ, ಜೋಡಿಕೊತ್ತಪಲ್ಲಿ ಕೆ.ಎಸ್.ಮಂಜುನಾಥ್, ಪುಲಗುಟ್ಲಪಲ್ಲಿ ಸುಧಾಕರ, ದಿಂಬಾಲ ಕೆ.ಎನ್. ಶಿವಮ್ಮ, ಲಕ್ಷ್ಮಣಪುರ ಜಿ.ರಾಮಾಂಜಿರನ್ನು ಆಯ್ಕೆ ಮಾಡಲಾಗಿದೆ.
ಮಾಲೂರು ತಾಲೂಕಿನ ಎಂ.ಹೊಸಹಳ್ಳಿ ವೆಂಕಟೇಗೌಡ, ಪುರ ಆರ್. ನಾಗರಾಜ್, ರಾಜೇನಹಳ್ಳಿಯ ಎ.ಎನ್.ಅಬ್ಬಯ್ಯ, ನೆಲ್ಲಹಳ್ಳಿಯ ಆರ್. ವೆಂಕಟೇಶ್, ದ್ಯಾಪಸಂದ್ರದ ಡಿ.ಕೆ.ಮುನಿಶಾಮಿಗೌಡ, ಬಂಗಾರ ಪೇಟೆಯ ಕಾಮಾಂಡಹಳ್ಳಿ ಶಿವಣ್ಣ, ಕ್ಯಾಸಂಬಳ್ಳಿಯ ಸರಸ್ವತಮ್ಮ, ಅಕ್ಕಮ್ಮನದಿನ್ನೆ ವಿ.ರಾಮಕೃಷ್ಣಪ್ಪ, ಹೊಸಕೋಟೆಯ ಸಿ.ಕೃಷ್ಣಪ್ಪ, ಕಾರಮಾನಹಳ್ಳಿಯ ಪದ್ಮಾವತಿರನ್ನು ಸಚಿವರು ಸನ್ಮಾನಿಸಿದರು. ಸಂಸದ ಎಸ್ ಮುನಿಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ, ಜಿಪಂ ಅಧ್ಯಕ್ಷ ಸಿ.ಎಸ್ ವೆಂಕಟೇಶ್, ಉಪಾಧ್ಯಕ್ಷರಾದ ಯಶೋದಾ ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಜೆ.ಮಂಜುನಾಥ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್