ತಮಿಳುನಾಡಿಗೆ ಸಾಗಿಸುತ್ತಿದ್ದ 300 ಕೆಜಿ ಬೆಳ್ಳಿ ವಶ
Team Udayavani, Feb 3, 2020, 3:05 AM IST
ಬೆಳಗಾವಿ: ಮಹಾರಾಷ್ಟ್ರದಿಂದ ತಮಿಳುನಾಡಿಗೆ ಅಕ್ರಮವಾಗಿ ಬೆಳ್ಳಿ ಗಟ್ಟಿ ಹಾಗೂ ಆಭರಣಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು, 63 ಲಕ್ಷ ರೂ. ಮೌಲ್ಯದ 300 ಕೆ.ಜಿ. ಬೆಳ್ಳಿ, 3 ಲಕ್ಷ ರೂ. ನಗದನ್ನು ಹುಕ್ಕೇರಿ ತಾಲೂಕಿನ ದಾದಬಾನಹಟ್ಟಿ ಬಳಿ ವಶಪಡಿಸಿಕೊಂಡಿದ್ದಾರೆ.
ತಮಿಳುನಾಡಿನ ಸವಾಪೇಟ ಸೇಲಂನ ವಿಜಯಕುಮಾರ ಆತ್ಮಾರಾಮ ಶಿಂಧೆ ಹಾಗೂ ಮಹಾ ರಾಷ್ಟ್ರದ ಸಾತಾರಾ ಜಿಲ್ಲೆಯ ಕಟಾವ್ ತಾಲೂಕಿನ ಬೆಳೆವಾಡಿಯ ರಿಯಾಜ್ ಶಾಕೀರ ಹುಸೇನ ಮುಲ್ಲಾನಿ ಎಂಬುವವರನ್ನು ಬಂಧಿಸಲಾಗಿದೆ. ಡಸ್ಟರ್ ಕಾರು, 300 ಕೆ.ಜಿ.ಬೆಳ್ಳಿ ಗಟ್ಟಿ, 3 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ಯಮಕನಮರಡಿ ಹಾಗೂ ಡಿಸಿಐಬಿ ಘಟಕ ಪೊಲೀಸರು, ಕಾರು ತಡೆದು ವಿಚಾರಣೆ ನಡೆಸಿದಾಗ ದೊಡ್ಡ ಪ್ರಮಾಣದಲ್ಲಿ ಬೆಳ್ಳಿ ಪತ್ತೆಯಾಗಿದೆ. ಡಿಸಿಐಬಿ ಘಟಕ ಇನ್ಸ್ಪೆಕ್ಟರ್ ನಿಂಗನಗೌಡ ಪಾಟೀಲ, ಯಮಕನಮರಡಿಯ ರಮೇಶ ಪಾಟೀಲ, ಡಿಸಿಐಬಿ ಎಎಸ್ ಐ ಡಿ.ಕೆ. ಪಾಟೀಲ, ಸಿಬ್ಬಂದಿಗಳಾದ ಟಿ.ಕೆ. ಕೊಳಚಿ, ಎಂ.ಜಿ. ಮುಜಾವರ, ಎಸ್.ಎಂ. ಮಂಗಣ್ಣವರ, ಎಂ.ಆರ್. ಪಠಾಣ, ವಿ.ಆರ್. ನಾಯಕ, ಆರ್.ಬಿ.ಕಲ್ಲೋಳ್ಳಿ ದಾಳಿ ನಡೆಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ