ನೆರೆ ಪರಿಹಾರ ನೀಡಲು ಆಗ್ರಹ
Team Udayavani, Feb 5, 2020, 11:55 AM IST
ಗುಳೇದಗುಡ್ಡ: ಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ತಾಲೂಕು ರೈತ ಸಂಘದವರು ತಹಶೀಲ್ದಾರ್ ಜಿ.ಎಂ. ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.
ಪ್ರವಾಹದಿಂದ ಬೆಳೆ ಹಾನಿಯಾಗಿ 7ತಿಂಗಳು ಕಳೆದರೂ ಕೇಂದ್ರ ಮತ್ತು ರಾಜ್ಯ ಸರಕಾರ ಬೆಳೆ ಹಾನಿಯಾದ ರೈತರಿಗೆ ಸಮರ್ಪಕವಾಗಿ ಪರಿಹಾರ ನೀಡುತ್ತಿಲ್ಲ. ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಮಹದಾಯಿ ಯೋಜನೆ ಜಾರಿಗೊಳಿಸುವುದು, ನಂಜುಂಡಸ್ವಾಮಿ ವರದಿ ಜಾರಿ ಹಾಗೂ ರೈತರ ಸಂಪೂರ್ಣ ಸಾಲ ಮನ್ನಾ, 1977ರಲ್ಲಿ ರೈತರು ಮಾಡಿರುವ ಸಾಲದ ಬಾಕಿ ಹಣ ಮನ್ನಾ ಮಾಡಬೇಕು. ಬಗರಹುಕುಂ ಸಾಗುವಳಿ ಸಕ್ರಮಗೊಳಿಸುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.
ರೈತ ಮುಖಂಡ ಮಧುಸೂಧನ ತಿವಾರಿ, ವಿ.ಜಿ.ಮ್ಯಾಗಿನಹಳ್ಳಿ, ಹನಮಂತ ಕಳ್ಳಿಗುಡ್ಡ, ಎಸ್.ಡಿ. ಜೋಗಿನ, ಅಶೋಕ ಲಮಾಣಿ, ವಸಂತ ಬದಾಮಿ, ಶೇಖರ ಲಮಾಣಿ, ಹನಮಂತ ಮಡಿವಾಳರ, ಪ್ರಕಾಶ ಗಾಯದ ಪಾಲ್ಗೊಂಡಿದ್ದರು