ಮಾಳ ಬಸ್ ಧರೆಗೆ ಢಿಕ್ಕಿ: 9 ಸಾವು
Team Udayavani, Feb 15, 2020, 8:13 PM IST
ಕಾರ್ಕಳ: ಕಾರ್ಕಳ ತಾ| ಮಾಳ ಗ್ರಾಮದ ಮುಳ್ಳೂರು ಘಾಟ್ ಬಳಿ ಬಸ್ಸೊಂದು ಧರೆಗೆ ಢಿಕ್ಕಿ ಹೊಡದ ಪರಿಣಾಮ 9 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಸಂಜೆ 5:35ರ ವೇಳೆ ನಡೆದಿದೆ.
ಮೈಸೂರಿನ ಸೆಂಚುರಿ ವೈಟಲ್ ರೆಕಾರ್ಡ್ಸ್ ಕಂಪನಿಯ ಸುಮಾರು 35 ಮಂದಿ ಸಿಬ್ಬಂದಿ ಮೈಸೂರಿನಿಂದ ಹೊರನಾಡು, ಕುದುರೆಮುಖವಾಗಿ ಮಂಗಳೂರು ಸಾಗುತ್ತಿದ್ದ ಬಸ್ ಮಾಳ ಎಸ್ಕೆ ಬಾರ್ಡರ್ ಸಮೀಪದ ಮುಳ್ಳೂರು ಘಾಟ್ ಬಳಿ ಬಂಡೆ ಕಲ್ಲಿನಿಂದ ಆವೃತ್ತವಾಗಿದ್ದ ಧರೆಗೆ ಬಸ್(ಕೆಎ 01, ಎಸಿ 4960) ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ರಭಸಕ್ಕೆ 3 ಮಹಿಳೆಯರು ಸೇರಿದಂತೆ ಒಟ್ಟು 9 ಮಂದಿ ಮೃತಪಟ್ಟಿರುತ್ತಾರೆ.
ರಾಧರವಿ (22), ಯೋಗೀಂದ್ರ (21), ಪ್ರೀತಂ ಗೌಡ (21) ಬಸವರಾಜ್ (22), ಅನಘ್ನಾ (20), ಶರಿಲ್ (21), ರಂಜಿತಾ ಪಿ. (21) ಚಾಲಕ, ಅಡುಗೆ ಸಿಬ್ಬಂದಿ ಸೇರಿದಂತೆ ಒಟ್ಟು 9 ಮಂದಿ ಮೃತಪಟ್ಟಿರುತ್ತಾರೆ.
ಅನೇಕರು ಗಾಯಗೊಂಡಿದ್ದು, 12 ಮಂದಿ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ, 13 ಮಂದಿ ಕಾರ್ಕಳ ಸಿಟಿ ಆಸ್ಪತ್ರೆ ಹಾಗೂ 5 ಮಂದಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ