ನಂಜನಗೂಡು: ಅರೆಸೇನಾ ಪಡೆಯ ತರಬೇತಿ ವಾಹನಕ್ಕೆ ಕಾರು ಢಿಕ್ಕಿ, ಚಾಲಕ ಗಂಭೀರ
Team Udayavani, Feb 24, 2020, 11:40 AM IST
ಮೈಸೂರು: ಖಾಸಗಿ ಕಾರು ಮತ್ತು ಅರೆಸೇನಾ ಪಡೆಯ ತರಬೇತಿ ವಾಹನದ ನಡುವೆ ಢಿಕ್ಕಿಯಾಗಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿರುವ ಸೋಮವಾರ ಘಟನೆ ನಡೆದಿದೆ.
ನಂಜನಗೂಡು ತಾಲೂಕಿನ ದೊಡ್ಡ ಕವಲಂದೆ ಕೆಆರ್ ಪುರ ವೃತ್ತದ ಬಳಿ ಘಟನೆ ನಡೆದಿದ್ದು, ಖಾಸಗಿ ಕಾರಿನಲ್ಲಿದ್ದ ಮೂರು ಜನರ ಪೈಕಿ ಚಾಲಕನ ಸ್ಥಿತಿ ಗಂಭೀರವಾಗಿದೆ. ಉಳಿದ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ.
ಖಾಸಗಿ ಕಾರು ಚಾಲಕನ ಅಜಾಗರುಕತೆಯಿಂದ ಕಾರಿನ ಮುಂಭಾಗ ಜಖಂ ಆಗಿದೆ.
ಖಾಸಗಿ ಕಾರಿನಲ್ಲಿದ್ದ ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಿದ್ದಾರೆ.
ಅರೆಸೇನಾ ಪಡೆಯ ತರಬೇತಿ ವಾಹನ ಮತ್ತು ಖಾಸಗಿ ವಾಹನವನ್ನು ದೊಡ್ಡ ಕವಲಂದೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.