ಕಾಲುವೆ ಕೊನೆ ಭಾಗಕ್ಕೆ ನೀರು ಹರಿಸಿ
ಕೆನಾಲ್ಗೆ ಅಳವಡಿಸಿರುವ ಪಂಪಸೆಟ್ಗಳ ತೆರವಿಗೆ ಆಗ್ರಹ
Team Udayavani, Feb 26, 2020, 11:22 AM IST
ಮಲೇಬೆನ್ನೂರು: ಹರಿಹರ ತಾಲೂಕು ಕೊನೆಭಾಗದ ಜಮೀನುಗಳಿಗೆ ನೀರು ತಲುಪಿಸುವಂತೆ ರೈತರು ಪಟ್ಟಣದ ನೀರಾವರಿ ನಿಗಮದ ಇಂಜಿನಿಯರ್ಗಳಲ್ಲಿ ಒತ್ತಾಯಿಸಿದರು.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಎಚ್. ಓಂಕಾರಪ್ಪ ಮಾತನಾಡಿ, ಮೇಲ್ಭಾಗದಲ್ಲಿ ಕಾಲುವೆಗಳಿಗೆ ಅಳವಡಿಸಿರುವ ಅನಧಿಕೃತ ಪಂಪ್ಸೆಟ್ ಗಳನ್ನು ತೆರವುಗೊಳಿಸಿ ಕೊನೆಭಾಗದ ರೈತರ ಜಮೀನುಗಳಿಗೆ ನೀರು ತಲುಪಿಸುವಂತೆ ರಾಜ್ಯ ಹೈಕೋರ್ಟ್ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದರೂ, ಅದೇಶ ಕಾರ್ಯರೂಪಕ್ಕೆ ಬಾರದೆ ರೈತರ ಸ್ಥಿತಿ ಅತಂತ್ರವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೈಕೋರ್ಟ್ ಆದೇಶ ಬಂದಾಗ ಎರಡು ದಿನ ಅಧಿಕಾರಿಗಳು ಮೇಲ್ಭಾಗದಲ್ಲಿನ ಅನಧಿಕೃತ ಪಂಪಸೆಟ್ ತೆಗೆಸುವ ನಾಟಕವಾಡಿ ಸುಮ್ಮನಾಗಿದ್ದಾರೆ. ಈಗ ನಾವು ನೀರುಕೊಡಿ ಎಂದು ಕೇಳಲು ಬಂದಾಗ ನಿದ್ದೆಯಿಂದ ಎದ್ದಂತೆ ಓಡಾಡುತ್ತಿದ್ದಾರೆ. ಅನಧಿಕೃತ ಪಂಪಸೆಟ್ ತೆರವುಗೊಳಿಸುವಂತೆ ನಾವು ಹೈಕೋರ್ಟ್ಗೆ ಹೋಗಿ ಹಣ ಖರ್ಚು ಮಾಡಿಕೊಂಡು ಬಂದಿದ್ದು ವ್ಯರ್ಥವಾಗುತ್ತಿದೆ. ಅಧಿಕಾರಿಗಳು ಹೈಕೋರ್ಟ್ನ ಆದೇಶ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.
ಹೈಕೋರ್ಟ್ನ ಆದೇಶದಂತೆ ಮೇಲ್ಭಾಗದಲ್ಲಿ ಚಾನಲ್ಗೆ ಅಳವಡಿಸಿರುವ ಅನಧಿಕೃತ ಪಂಪಸೆಟ್ ತೆರವು ಮಾಡುವಂತೆ ಜಿಲ್ಲಾ ಧಿಕಾರಿಗಳು ವಿದ್ಯುತ್ ಇಲಾಖೆ, ಪೊಲೀಸರು ಮತ್ತು ನೀರಾವರಿ ಇಲಾಖೆ ಈ ಮೂರೂ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಆದೇಶ ನೀಡಿದ್ದರೂ ಕಾರ್ಯಾಚರಣೆ ಮಾತ್ರ ಸೊನ್ನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೆ ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಸಂಬಂಧಪಟ್ಟ ಇಲಾಖೆಗಳು ಕಾರ್ಯಪ್ರವೃತ್ತರಾಗುವಂತೆ ಮತ್ತೂಮ್ಮೆ ಆದೇಶಿಸಿ, ದೇಶದ ಬೆನ್ನೆಲುಬು ಎಂದು ಕರೆಸಿಕೊಳ್ಳುವ ರೈತರನ್ನು ಬದುಕಿಸಿಕೊಡಬೇಕು. ಇಲ್ಲವಾದಲ್ಲಿ ಹಂತ ಹಂತವಾಗಿ ನಮ್ಮ ಹೋರಾಟದ ರೂಪುರೇಷೆಗಳನ್ನು ಪರಿವರ್ತಿಸಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇಇ ರಾಜಶೇಖರ್ ಆಬಣ್ಣ ಇವರು ನಾನು ರಜೆಯ ಮೇಲೆ ಹೋಗಿದ್ದೆ ಎಂದು ಹೇಳಿದರೆ ಇನ್ನುಳಿದ ಇಬ್ಬರು ಎಕ್ಸಿಕ್ಯೂಟೀವ್ ಇಂಜಿನಿಯರ್ಗಳು ನಮಗೆ ಹುಶಾರಿರಲಿಲ್ಲ ಎಂದು ನುಡಿದರು.
ಆಕ್ರೋಶಭರಿತ ರೈತರು ನಾಲೆಯ ಯಾವ ಕಡೆ ನೀರು ಪೋಲಾಗುತ್ತಿದೆ ಎಂದು ನೋಡಿಕೊಂಡು ಬರಲು ತಮ್ಮೊಡನೆ ಇಂಜಿನಿಯರ್ಗಳನ್ನು ಕರೆದುಕೊಂಡು ಹೋದರು. ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಜಿ. ಪ್ರಭುಗೌಡ, ಎಂ.ಬಿ. ಪಾಟೀಲ್, ಪಾಲಾಕ್ಷಪ್ಪ, ವಸಂತಪ್ಪ, ಆರ್.ಟಿ. ಶೇಖರಪ್ಪ, ದೇವರಾಜಪ್ಪ, ರಾಜಪ್ಪ, ಕುಬೇರಗೌಡ, ಗದ್ದಿಗೆಪ್ಪ, ಭೀಮನಗೌಡ್ರು, ಮೇಸ್ಟ್ರೆ ರಾಜಪ್ಪ, ಎ.ಕೆ. ಬಸವರಾಜಪ್ಪ, ಎ.ಕೆ. ಮಂಜಪ್ಪ ಹಾಗೂ ಸಿರಿಗೆರೆ, ವಾಸನ, ಪಾಳ್ಯ, ಕೆ.ಎನ್.ಹಳ್ಳಿ ಗ್ರಾಮಗದ ರೈತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿಗಳಿಂದ ಮತಗಟ್ಟೆಯಲ್ಲಿ ಮೊದಲ ಮತದಾನ
Lok Sabha Election: ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು
LS Polls: “ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟಕೀಯ ಪ್ರೀತಿ’: ಗಾಯತ್ರಿ ಸಿದ್ದೇಶ್ವರ್
CT Ravi ಡಿಕೆಶಿಗೆ ಆಲೂ ಬಿತ್ತಿ ಬಂಗಾರ ಬೆಳೆಯುವ ವಿದ್ಯೆ ಕರಗತ
Davanagere; ಟೈರ್ ಸಿಡಿದು ಸೇತುವೆ ಮೇಲಿಂದ ಉರುಳಿದ ಕಾರು:ಇಬ್ಬರು ಮೃತ್ಯು
MUST WATCH
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?
ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ ಮಾಡಿದ ಡಿಕೆಶಿ;
ಹೊಸ ಸೇರ್ಪಡೆ
Shimoga: ಆಟೋಗೆ ಕ್ಯಾಂಟರ್ ಡಿಕ್ಕಿ, ವಿದ್ಯಾರ್ಥಿನಿ ಸಾವು; ಸಿಸಿಟಿವಿಯಲ್ಲಿ ದೃಶ್ಯ ಸೆರೆ
Lok Sabha Election: ಆಂಧ್ರಪ್ರದೇಶ, ಒಡಿಶಾ ವಿಧಾನಸಭೆಗೂ ಚುನಾವಣೆ, ತ್ರಿಕೋನ ಸ್ಪರ್ಧೆ
Bengaluru rain: ಮಳೆಗೆ ವಿದೇಶಿ ತಳಿ ಮರಗಳೇ ಹೆಚ್ಚು ಧರೆಗೆ
ದೇಶದಾದ್ಯಂತ 13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಬೆದರಿಕೆ… ಅಲರ್ಟ್ ಆದ ಪೊಲೀಸರು
Sandalwood: ನಿರುದ್ಯೋಗದ ಸುತ್ತ ಗಾಂಧಿನಗರ