ಗೇರು ಬೆಳೆಗೆ ಚಹಾ ಸೊಳ್ಳೆ ಕಾಟ

ಭಾರೀ ಪ್ರಮಾಣದಲ್ಲಿ ಸಾಯುತ್ತಿರುವ ಗೇರು ಮರಗಳು | ಬೆಳೆ ಇಲ್ಲದೆ ಕಂಗಾಲಾದ ಕೃಷಿಕರು

Team Udayavani, Feb 27, 2020, 5:59 AM IST

2502PALLI01

ಪಳ್ಳಿ: ಕಾರ್ಕಳ ತಾಲೂಕಿನಾದ್ಯಂತ ಹವಾಮಾನ ವೈಪರೀತ್ಯದಿಂದಾಗಿ ಗೇರು ಕೃಷಿಕರು ಕಂಗಾಲಾಗಿರುವ ಮಧ್ಯೆ, ಇದೀಗ ಚಹಾ ಸೊಳ್ಳೆ ಕಾಟದಿಂದಾಗಿ ಕೃಷಿಕರು ತತ್ತರಿಸಿದ್ದಾರೆ.

ಸುಮಾರು 15 ರಿಂದ 20 ವರ್ಷಗಳಲ್ಲೇ ಗೇರು ಕೃಷಿಗೆ ಗರಿಷ್ಠ ಪ್ರಮಾಣದಲ್ಲಿ ಚಹಾ ಸೊಳ್ಳೆ ಕಾಟ ಬಾಧಿಸಿದ್ದು ನಷ್ಟ ಭೀತಿ ಕಾಡಿದೆ. ಗೇರು ಮರಗಳಲ್ಲಿ ಹೂವು ಕರಟಿ ಹೋಗಿದೆ. ಕೆಲವೆಡೆ ಈಗಷ್ಟೇ ಹೂವು ಬಿಡುತ್ತಿದೆ.

ಹವಾಮಾನ ವೈಪರೀತ್ಯ
ವಾತಾವರಣದಲ್ಲಾದ ಬದಲಾವಣೆಯೇ ಚಹಾ ಕೀಟ ಬಾಧೆ ಹೆಚ್ಚಳಕ್ಕೆ ಕಾರಣ ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ. ಚಳಿ, ಮಳೆ, ಬಿಸಿಲು ಸಮಯಕ್ಕೆ ಸರಿಯಾಗಿ ಬರದೇ ಇರುವುದರಿಂದ ಗೇರು, ಹಲಸು, ಮಾವು, ಕೊಕ್ಕೋ ಬೆಳೆಗಳಲ್ಲಿ ಹೂ-ಕಾಯಿ, ಹಣ್ಣಾಗುವ ಸಹಜ ಪ್ರಕ್ರಿಯೆಗೆ ಅಡ್ಡಿಯಾಗಿದೆ. ಆರಂಭದಲ್ಲಿ ಚಳಿ, ಬಳಿಕ ಸೆಕೆ ವಾತಾವರಣ ಗೇರು ಫ‌ಸಲಿಗೆ ಪೂರಕ. ಆದರೆ ಈಗ ಚಳಿ-ಸೆಕೆ, ನಡುವೆ ಮೋಡದ ವಾತಾವರಣ ಇರುವುದು ಬೆಳೆಗಳಲ್ಲಿ ಹೊಸ ರೋಗ, ಕೀಟ ಬಾಧೆಗೆ ಕಾರಣವಾಗುತ್ತಿದೆ.

ಚಹಾ ಸೊಳ್ಳೆ ಎಂದರೆ ಏನು?
ಚಹಾ ಸೊಳ್ಳೆ ಬಹುತೇಕ ತೋಟಗಾರಿಕಾ ಬೆಳೆಗೆ ಹಾನಿ ಉಂಟು ಮಾಡುವ ಕೀಟ. ಇದು ಗೇರು ಮರದ ಎಲೆಗಳಲ್ಲಿ ಗೂಡನ್ನು ಕಟ್ಟಿ ಮರದ ಎಲೆಯ ರಸವನ್ನು ಹೀರುವ ಜತೆಗೆ ಹೂವಿನಲ್ಲಿರುವ ಚಿಗುರು ಮತ್ತು ಹೂಗೊಂಚಲನ್ನು ಹೀರುತ್ತದೆ. ಇದರಿಂದ ಮರ ಒಣಗುತ್ತದೆ. ಕೀಟಬಾಧೆಯಾದರೆ ಕಾಯಿ ಬೆಳೆಯುವ ಮೊದಲೇ ಉದುರುತ್ತದೆ.

ನಿಯಂತ್ರಣ ಹೇಗೆ?
ಚಹಾ ಸೊಳ್ಳೆ ಕೀಟ ಬಾಧಿತ ಮರಕ್ಕೆ ಮೂರು ಹಂತಗಳಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡಬೇಕು. ಪ್ರಥಮ ಹಂತದಲ್ಲಿ ಬೇವಿನ ಎಣ್ಣೆಯನ್ನು 5 ಎಂ.ಎಲ್‌. ಅನ್ನು 1 ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಬೇಕು. ದ್ವಿತೀಯ ಹಂತವಾಗಿ 2 ಗ್ರಾಂ ಕಾರ್ಬರಿಲ್‌ ಅನ್ನು 1 ಲೀಟರ್‌ ನೀರು ಬೆರೆಸಿ ಸಿಂಪಡಿಸಬೇಕು.ಮೂರನೇ ಹಂತವಾಗಿ ಮೊನೋಕ್ರೊಟೊಫಾಸ್‌ 2 ಗ್ರಾಂ ಅನ್ನು 1 ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಯಾವ ಹಂತದಲ್ಲಿ ಸಿಂಪಡಣೆ?
ಸಣ್ಣ ಎಲೆಗಳ ಹಂತದಲ್ಲಿ, ಹೂ ಬಿಡುವ ಹಂತದಲ್ಲಿ, ಹಾಗೂ ಕಾಯಿ ಕಟ್ಟುವ ಹಂತದಲ್ಲಿ ಸಿಂಪಡಿಸಬೇಕು. ಅಲ್ಲದೆ ಒಂದೇ ಕೀಟನಾಶಕವನ್ನು ಮೂರು ಬಾರಿ ಬಳಸಿದಲ್ಲಿ ಸೊಳ್ಳೆ ನಾಶವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ನೆಡು ತೋಪು ವಹಿಸಿಕೊಂಡವರಿಗೆ ಸಂಕಷ್ಟ
ಅರಣ್ಯ, ಪಂಚಾಯತ್‌, ಗೇರು ಅಭಿವೃದ್ಧಿ ನಿಗಮದ ಹಲವಾರು ನೆಡುತೋಪುಗಳು ತಾಲೂಕಿನಾದ್ಯಂತವಿದ್ದು, ಇದರ ಗುತ್ತಿಗೆಯ ಟೆಂಡರ್‌ ಅಕ್ಟೋಬರ್‌, ನವೆಂಬರ್‌ ತಿಂಗಳಲ್ಲಿ ನಡೆಯುತ್ತದೆ. ಟೆಂಡರ್‌ನಲ್ಲಿ ನೆಡುತೋಪು ವಹಿಸಿಕೊಂಡ ಗುತ್ತಿಗೆದಾರರರಿಗೆ ಹವಾಮಾನ ವೈಪರೀತ್ಯದಿಂದ ನಿರೀಕ್ಷಿತ ಬೆಳೆಯಿಲ್ಲದೆ ನಷ್ಟದ ಜತೆಗೆ ಚಹಾ ಸೊಳ್ಳೆ ಬಾಧೆಯಿಂದ ನಷ್ಟ ಸಂಭವಿಸುವಂತಾಗಿದೆ. ಈ ಬಾರಿ ತಾಲೂಕಿನ ಹೆಬ್ರಿ, ಚಾರ, ಬೇಳಂಜೆ, ಶಿವಪುರ, ಬೆಳ್ಮಣ್‌, ಪಳ್ಳಿ, ಬೈಲೂರು ಭಾಗಗಳಲ್ಲಿ ಅತೀ ಹೆಚ್ಚು ಗೇರು ಮರಗಳಿಗೆ ಹಾನಿಯಾಗಿದೆ.

ಗೇರು ಕೃಷಿಗೆ ಪೂರಕ ವಾತಾವರಣ ಇಲ್ಲ. ಇದರ ಜತೆಗೆ ಚಹಾ ಸೊಳ್ಳೆಯ ಕಾಟವೂ ಗಾಯದ ಮೇಲೆ ಬರೆ ಎಂಬಂತಾಗಿದೆ. ಕೃಷಿಕರು, ಗೇರು ನೆಡುತೋಪು ಗುತ್ತಿಗೆ ವಹಿಸಿಕೊಂಡವರಿಗೆ ಇದು ದೊಡ್ಡ ಹೊಡೆತ ನೀಡಿದೆ.

ಬೆಳೆ ಇಲ್ಲ; ಧಾರಣೆಯಿದೆ
ತಾಲೂಕಿನಲ್ಲಿ ಸುಮಾರು 4,000 ಎಕರೆ ಪ್ರದೇಶದಲ್ಲಿ ಗೇರು ಕೃಷಿ ತೋಟವಿದೆ. 2015ನೇ ಸಾಲಿನಲ್ಲಿ 90 ರಿಂದ 100 ರೂ. ಗೆ ಖರೀದಿಯಾಗಿದ್ದ ಗೇರು ಬೀಜ, 2016ರಲ್ಲಿ ಕಳೆದ ಬಾರಿ 120 ರಿಂದ 130 ರೂ., 2017ರಿಂದ 2019ರ ಸಾಲಿನಲ್ಲಿ 130 ರಿಂದ 150 ರೂ. ರವರೆಗೆ ಖರೀದಿಯಾಗಿದೆ. ಈ ಬಾರಿ ಧಾರಣೆ ಏರಿಕೆ ನಿರೀಕ್ಷೆ ಇತ್ತಾದರೂ ಸಮಸ್ಯೆಗಳಿಂದಾಗಿ ಫ‌ಸಲು ಇಲ್ಲದಂತಾಗಿದೆ.

ಚಹಾ ಸೊಳ್ಳೆ, ಹವಾಮಾನದಲ್ಲಿನ ಏರಿಳಿತ
ಗೇರು ಬೆಳೆಗೆ ಬಾಧಿಸುವ ಕೀಟಗಳಲ್ಲಿ ಚಹಾ ಸೊಳ್ಳೆ ಪ್ರಮುಖ. ಹವಾಮಾನದಲ್ಲಿನ ಏರಿಳಿತ ಹಾಗೂ ನಿರ್ವಹಣೆ ಕೊರತೆಯಿಂದಾಗಿ ಹೆಚ್ಚಿನ ಬೆಳೆ ನಷ್ಟವಾಗುತ್ತಿದೆ. ಈ ಋತುವಿನಲ್ಲಿ ಕಂಡು ಬಂದ ವಾತಾವರಣ ಅಸಮತೋಲನದಿಂದಾಗಿ ಹೆಚ್ಚಿನ ಬಾಧೆ ಕಂಡುಬಂದಿದೆ.
-ಶ್ರೀನಿವಾಸ್‌ ಬಿ.ವಿ., ಹಿರಿಯ ಸಹಾಯಕ ನಿರ್ದೇಶಕರು,
ತೋಟಗಾರಿಕೆ ಇಲಾಖೆ ಕಾರ್ಕಳ

ಪ್ರಾಕೃತಿಕ ಅಸಮತೋಲನ
ಪ್ರಾಕೃತಿಕ ಅಸಮತೋಲನದಿಂದಾಗಿ ರೈತರ ಉಪ ಬೆಳೆಯಾದ ಗೇರು ಕೃಷಿಗೆ ಅಪಾರ ನಷ್ಟ ಉಂಟಾಗಿದ್ದು, ಕೃಷಿಕರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಈ ಬಾರಿ ಉತ್ತಮ ಧಾರಣೆಯಿದ್ದರೂ ಗೇರು ಬೀಜ ಇಲ್ಲದಂತಾಗಿದೆ.
-ಜಯ ಎಸ್‌. ಕೋಟ್ಯಾನ್‌, ಪ್ರಗತಿಪರ ಕೃಷಿಕರು

ಅಪಾರ ನಷ್ಟ
ಗೇರು ಕೃಷಿಯನ್ನೇ ನಂಬಿ ನೆಡು ತೋಪು ಗುತ್ತಿಗೆ ಆಧಾರದಲ್ಲಿ ವಹಿಸಿಕೊಂಡಿದ್ದು ಈ ಬಾರಿ ನಿರೀಕ್ಷಿತ ಫ‌ಸಲು ಇಲ್ಲದೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
-ಜಗದೀಶ್‌, ನೆಡುತೋಪು ಗುತ್ತಿಗೆದಾರರು

ಸಂದೇಶ್‌ ಕುಮಾರ್‌ ನಿಟ್ಟೆ

ಟಾಪ್ ನ್ಯೂಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.