ರಾಮಣ್ಣನಿಗೆ ಅಕಾಡೆಮಿ ಪ್ರಶಸ್ತಿ ಗರಿ
ಹಗಲು ವೇಷಗಾರನ ಐದು ದಶಕಗಳ ಬಣ್ಣದ ಬದುಕಿಗೆ ಸಂದ ಗೌರವ
Team Udayavani, Feb 28, 2020, 1:03 PM IST
ಹರಪನಹಳ್ಳಿ: ಐದು ದಶಕಗಳಿಂದ ಹಗಲು ಹೊತ್ತಿನಲ್ಲಿ ವಿವಿಧ ವೇಷಗಳನ್ನು ಧರಿಸಿ ಮನೆಮನೆಗಳಿಗೆ ತೆರಳಿ ರಂಜನೆಯನ್ನೊದಗಿಸುವ ಕಾಯಕ ಮಾಡುತ್ತಿರುವ ಪಟ್ಟಣದ ಅಶ್ರಯ ಕಾಲೋನಿಯ ನಿವಾಸಿ ಹಗಲು ವೇಷಗಾರ ಮೋತಿ ರಾಮಣ್ಣ (65) ಅವರು 2019ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಗರಿಮೆಗೆ ಪಾತ್ರರಾಗಿದ್ದಾರೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ನಾಣ್ಯಪುರ ಗ್ರಾಮದವರಾದ ಮೋತಿ ರಾಮಣ್ಣನವರ ಕುಟುಂಬ ಕಳೆದ ಏಳು ದಶಕಗಳ ಹಿಂದೆಯೇ ಹರಪನಹಳ್ಳಿ ತಾಲೂಕಿಗೆ ವಲಸೆ ಬಂದಿದೆ. ತನ್ನ ಅಜ್ಜ ಮತ್ತು ತಂದೆ ಮೋತಿ ಶಂಕ್ರಪ್ಪ ಅವರಿಂದ ಬಳುವಳಿಯಾಗಿ ಬಂದಿರುವ ಕಲೆಯನ್ನು ಕಳೆದ ಐದು ದಶಕಗಳ ಕಾಲ ನಾಡಿನುದ್ದಗಲಕ್ಕೂ ಪರಿಚಯಿಸಿದ್ದಾರೆ.
ರಾಮಣ್ಣನವರಿಗೆ ಒಟ್ಟು 5 ಜನ ಮಕ್ಕಳಿದ್ದು, ಪುತ್ರರಾದ ವೇಷಗಾರ ಮೋತಿ ಮಾರುತಿ, ವೇಷಗಾರ ಚಂದ್ರಪ್ಪ, ವೇಷಗಾರ ಮಂಜುನಾಥ ಅವರು ಸಹ ವಂಶಪಾರಂಪರ್ಯ ಬಣದ ಬದುಕಿನ ಕುಲಕಸುಬು ಮಾಡುತ್ತಿದ್ದಾರೆ. ರಾಮಾಯಣದ ಪಾತ್ರಗಳಾದ ಹನುಮಂತ, ರಾಕ್ಷಿಸಿ, ಜಾಂಬವಂತ, ರಾಮ, ಸೀತೆ ಮುಂತಾದ ಪಾತ್ರಗಳನ್ನು ಮನೆ ಮನೆಗಳಿಗೆ ಸಜೀವವಾಗಿ ತೆರಳಿ ಪ್ರೇಕ್ಷಕರ ಮನ ತಣಿಸುವ ಕೆಲಸ ಮಾಡಿದ್ದಾರೆ. ರಾಮಣ್ಣ ಅವರು ಬಹುತೇಕ ಆಂಜನೇಯ ಪಾತ್ರ ಮಾಡಿದ್ದು, ಭೀಮ, ಅರ್ಜುನ್, ರಾಮ ಲಕ್ಷಣ, ಈಶ್ವರ ಪಾತ್ರಕ್ಕೂ ಬಣ್ಣ ಹಚ್ಚಿದ್ದಾರೆ. ವಂಶಪಾರಂಪರ್ಯವಾಗಿ ಹಗಲು ಹೊತ್ತಿನಲ್ಲಿ ವಿವಿಧ ವೇಷಗಳನ್ನು ಧರಿಸಿ ಮನೆಮನೆಗಳಿಗೆ ತೆರಳಿ ರಂಜನೆಯನ್ನೊದಗಿಸಿ ಹೊಟ್ಟೆ ಹೊರೆಯುವ ಕಾಯಕವನ್ನು ವೇಷಗಾರರ ಮೋತಿ ರಾಮಣ್ಣ ತಂಡ ಮಾಡಿದೆ.
ಯಾವುದೇ ರೀತಿಯ ವೇದಿಕೆ, ವಿದ್ಯುತ್, ಧ್ವನಿವರ್ಧಕದ ವ್ಯವಸ್ಥೆ ಬೇಕಾಗಿಲ್ಲ, ಬೀದಿಯಲ್ಲಿ, ಮನೆಗಳ ಮುಂದೆ ತಮ್ಮ ಕಲಾಪ್ರದರ್ಶನ ಮಾಡುತ್ತಿದ್ದಾರೆ. ವಿವಿಧ ವೇಷಗಳನ್ನು ಧರಿಸಿ ಪೌರಾಣಿಕ ಪಾತ್ರಗಳನ್ನು ಮನಮುಟ್ಟುವಂತೆ ಅಭಿನಯಿಸುತ್ತಾರೆ. ಪಾತ್ರಕ್ಕೆ ತಕ್ಕಂತೆ ವೇಷಭೂಷಣ, ಬಣ್ಣವನ್ನು ಹಚ್ಚಿಕೊಂಡು ಅದಕ್ಕೆ ತಕ್ಕಂತೆ ನೃತ್ಯ ಸಂಭಾಷಣೆಗಳನ್ನು ಹೇಳುವುದು ಇವರಿಗೆ ಕರಗತವಾಗಿದೆ. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿಯವರ ವಚನಗಳು, ಶಿಶುನಾಳ ಶರೀಫರ ತತ್ವಪದಗಳು, ದಾಸರ ಕೀರ್ತನೆಗಳನ್ನೂ ಸುಮಧುರವಾಗಿ ಹಾಡುತ್ತಾರೆ. ಇವರಿಗೆ ಪುತ್ರರಾದ ಮೋತಿ ಮಾರುತಿ ಹಾರ್ಮೋನಿಯಂ, ಮೋತಿ ಚಂದ್ರಪ್ಪ ತಬಲಾ ನುಡಿಸುವ ಮೂಲಕ ಬದುಕಿನ ಬಂಡಿ ಸಾಗಿಸಲು ಸಾಥ್ ನೀಡುತ್ತಿದ್ದಾರೆ.
ಜಾನಪದ ಅಕಾಡೆಮಿ ಅಧ್ಯಕ್ಷರಾದ ಜೋಗತಿ ಮಂಜಮ್ಮನವರು ಹಳ್ಳಿಗಾಡಿನಲ್ಲಿ ಎಲೆಮರಿಯ ಕಾಯಿಯಂತಿರುವ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ಕೊಡುತ್ತಿದ್ದಾರೆ. ನನ್ನ ಬಣ್ಣದ ಬದುಕಿನ ಕಲಾ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದಕ್ಕೆ ನಾನು ಅವರಿಗೆ ಚಿರಋಣಿಯಾಗಿದ್ದೇನೆ.
ಮೋತಿ ರಾಮಣ್ಣ,
ಪ್ರಶಸ್ತಿ ಪುರಸ್ಕೃತ
ಎಸ್.ಎನ್.ಕುಮಾರ್ ಪುಣಬಗಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
MUST WATCH
ಹೊಸ ಸೇರ್ಪಡೆ
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ