ಕೆಜಿಎಫ್-2ನಲ್ಲಿ ಯಶ್ ಸಿಕ್ಸ್ಪ್ಯಾಕ್?
ಎಂಟು ತಿಂಗಳಿನಿಂದ ವರ್ಕೌಟ್ ಮಾಡುತ್ತಿದ್ದೇನೆ
Team Udayavani, Mar 7, 2020, 7:03 AM IST
ಯಶ್ ಅವರ “ಕೆಜಿಎಫ್-2′ ಚಿತ್ರೀಕರಣ ಹೈದರಾಬಾದ್ನಲ್ಲಿ ನಡೆಯುತ್ತಿದೆ. ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಈಗ ಚಿತ್ರದ ನಿರೀಕ್ಷೆ ಮತ್ತಷ್ಟು ಹೆಚ್ಚಾಗುವಂತಹ ಸುದ್ದಿಯೊಂದು ಕೇಳಿಬರುತ್ತಿದೆ. ಅದು ಯಶ್ ಅವರ ಗೆಟಪ್ ಕುರಿತು. ಹೌದು, “ಕೆಜಿಎಫ್-2′ ಚಿತ್ರದ ದೃಶ್ಯವೊಂದರಲ್ಲಿ ಯಶ್ ಅವರು ಸಿಕ್ಸ್ಪ್ಯಾಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಂಬ ಸುದ್ದಿ ಓಡುತ್ತಿದೆ. ಅದಕ್ಕೆ ಪೂರಕವಾಗಿ ಇತ್ತೀಚೆಗೆ ಯಶ್ ಅವರ ಬಾಡಿ ಸ್ಟೈಲ್ ನೋಡಿದವರು ಕೂಡಾ ಯಶ್ ವರ್ಕೌಟ್ ಮಾಡಿ, ಬಾಡಿ ಶೇಪ್ ಮಾಡಿದ್ದಾರೆನ್ನುತ್ತಿದ್ದಾರೆ.
ಯಶ್ ಕೂಡಾ “ಕೆಜಿಎಫ್’ ಚಿತ್ರಕ್ಕಾಗಿ 8 ತಿಂಗಳಿನಿಂದ ವರ್ಕೌಟ್ ಮಾಡಿರೋದನ್ನು ಒಪ್ಪಿಕೊಳ್ಳುತ್ತಾರೆ. ಈ ಬಗ್ಗೆ ಮಾತನಾಡುವ ಯಶ್, “ಚಿತ್ರದಲ್ಲೊಂದು 1970ರ ದೃಶ್ಯವಿದೆ. ಫ್ಲಾಶ್ಬ್ಯಾಕ್ನಲ್ಲಿ ಬರುವ ಈ ದೃಶ್ಯಕ್ಕಾಗಿ ಎಂಟು ತಿಂಗಳಿನಿಂದ ವರ್ಕೌಟ್ ಮಾಡುತ್ತಿದ್ದೇನೆ’ ಎನ್ನುತ್ತಾರೆ. ಈ ಮೂಲಕ ಅಭಿಮಾನಿಗಳಲ್ಲಿ ಮತ್ತಷ್ಟು ನಿರೀಕ್ಷೆಗೆ ಕಾರಣರಾಗಿದ್ದಾರೆ. ಅಂದಹಾಗೆ, “ಕೆಜಿಎಫ್-2′ ಯಾವಾಗ ಬರುತ್ತದೆ ಎಂಬ ಪ್ರಶ್ನೆಗೆ ಉತ್ತರಿಸುವ ಯಶ್, “ಈ ವರ್ಷವೇ ಬರುತ್ತೇವೆ.
ಆದರೆ, ಯಾವಾಗ ಎಂದು ಇನ್ನೂ ಪಕ್ಕಾ ಆಗಿಲ್ಲ’ ಎನ್ನುತ್ತಾರೆ. ಇನ್ನು ರಾಜ್ಮೌಳಿ ನಿರ್ದೇಶನದ “ಆರ್ಆರ್ಆರ್’ ಹಾಗೂ “ಕೆಜಿಎಫ್-2′ ಜೊತೆ ಜೊತೆಗೆ ರಿಲೀಸ್ ಆಗುತ್ತದೆ ಎಂಬ ಸುದ್ದಿಯೂ ಹರಿದಾಡುತ್ತಿತ್ತು. ಆದರೆ, ಯಶ್ ಇದನ್ನು ಅಲ್ಲಗಳೆದಿದ್ದಾರೆ. “ಎರಡು ದೊಡ್ಡ ಸಿನಿಮಾಗಳು ಯಾವತ್ತಿಗೂ ಒಟ್ಟಿಗೆ ಬರೋದಿಲ್ಲ. ಅವರು ನಮ್ಮ ಜೊತೆ, ನಾವು ಅವರ ಜೊತೆ ಸಂಪರ್ಕದಲ್ಲಿದ್ದೇವೆ. ಅವರು ಸಂಕ್ರಾಂತಿಗೆ ಬರೋದು’ ಎನ್ನುವುದು ಯಶ್ ಮಾತು.
ಫಿಲಂ ಸಿಟಿ ಮೈಸೂರಲ್ಲಾದರೆ ಚೆಂದ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬಜೆಟ್ನಲ್ಲಿ ಫಿಲಂ ಸಿಟಿಗಾಗಿ 500 ಕೋಟಿ ರೂಪಾಯಿ ಅನುದಾನ ಘೋಷಿಸಿರುವ ಬಗ್ಗೆ ಖುಷಿಯಿಂದ ಮಾತನಾಡಿದ ಯಶ್, “ಮುಖ್ಯಮಂತ್ರಿಗಳು ಫಿಲಂ ಸಿಟಿಗಾಗಿ 500 ಕೋಟಿ ಘೋಷಿಸಿರೋದು ಖುಷಿ ವಿಚಾರ. ಈ ಮೂಲಕ ನಮ್ಮಲ್ಲೇ ಸಾಕಷ್ಟು ಸಿನಿಮಾ ಕೆಲಸಗಳು ಆಗಲಿದೆ. ಫಿಲಂ ಸಿಟಿ ಮೈಸೂರಿನಲ್ಲಾದರೆ ಚೆಂದ ಅನ್ನೋದು ನನ್ನ ಭಾವನೆ. ಎಲ್ಲಾ ವಿಚಾರಗಳಲ್ಲೂ ಮೈಸೂರು ಚಿತ್ರೀಕರಣಕ್ಕೆ ಪೂರಕವಾಗಿದೆ. ಆದರೆ, ಯಾವುದೂ ಅಂತಿಮವಾಗಿಲ್ಲ. ಎಲ್ಲಾದರೂ ಆಗಲಿ, ನಮ್ಮ ಚಿತ್ರರಂಗಕ್ಕೆ ಸಹಾಯಕವಾಗಿರಲಿ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಪ್ರೇಕ್ಷಕಳಾಗಿ ಕಾಂಗರೂ ನನಗೆ ಇಷ್ಟವಾಯಿತು..
Sandalwood: ಬಿಸಿಲ ಧಗೆ ಎಫೆಕ್ಟ್; ಔಟ್ಡೋರ್ ಶೂಟಿಂಗ್ನಿಂದ ಸಿನಿಮಂದಿ ದೂರ
Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
MUST WATCH
ಹೊಸ ಸೇರ್ಪಡೆ
Sandalwood: ಪ್ರೇಕ್ಷಕಳಾಗಿ ಕಾಂಗರೂ ನನಗೆ ಇಷ್ಟವಾಯಿತು..
ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ
ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್