ಮಂಗಳೂರು: ಬಸ್ ನಿಲ್ದಾಣದಲ್ಲಿ ಪರದಾಡುತ್ತಿದ್ದ ಪ್ರಯಾಣಿಕರಿಗೆ ಊಟ ವಿತರಣೆ
Team Udayavani, Mar 22, 2020, 2:14 PM IST
ಮಂಗಳೂರು: ಜನತಾ ಕರ್ಫ್ಯೂಗೆ ದಕ್ಷಿಣ ಕನ್ನಡ ಜಿಲ್ಲೆ ಸ್ತಬ್ದವಾಗಿದೆ. ಮಂಗಳೂರು ನಗರದಿಂದ ಯಾವ ಕಡೆಗೂ ಸರ್ಕಾರಿ, ಖಾಸಗಿ ಬಸ್ ಸಂಚಾರ ಓಡಾಟ ಇಲ್ಲ. ಈ ಮಾಹಿತಿ ತಿಳಿಯದೇ ಮಂಗಳೂರಿನ ಲಾಲ್ ಬಾಗ್ ನಲ್ಲಿರೋ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಕೆಲ ಪ್ರಯಾಣಿಕರು ಪರದಾಡುತ್ತಿದ್ದರು.
ಇವರ ಪರಿಸ್ಥಿತಿಯನ್ನು ಕಂಡು ಮಂಗಳೂರಿನ ರೋಟರಿ ಕ್ಲಬ್ ನ ಸದಸ್ಯರು ಊಟದ ವ್ಯವಸ್ಥೆಯನ್ನು ಮಾಡಿ ವಿತರಿಸಿ ಮಾನವೀಯತೆ ಮೆರೆದರು. ಈ ಸಮಾಜಮುಖಿ ಕಾರ್ಯ ಜನಮೆಚ್ಚುಗೆಗೆ ಪಾತ್ರವಾಗಿದೆ.