ಕಂಡ್ಲೂರು ಪಿಎಚ್ಸಿಗೆ ಕಾಯಕಲ್ಪ ಪ್ರಶಸ್ತಿ
Team Udayavani, Apr 6, 2020, 12:40 PM IST
ಬಸ್ರೂರು: ಟೆಲಿ ಸೈಕ್ಯಾಟ್ರಿಕ್ ಕ್ಲಿನಿಕ್ನಂತಹ ಆತ್ಯಾಧುನಿಕ ವೈದ್ಯಕೀಯ ಚಿಕಿತ್ಸೆಯಿಂದ ಈಗಾಗಲೇ ರಾಜ್ಯದ ಗಮನ ಸೆಳೆದಿರುವ ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್ಸಿ)ವು ಆರೋಗ್ಯ ಇಲಾಖೆ ನೀಡುವ 2020ನೇ ಸಾಲಿನ ಕಾಯಕಲ್ಪ ಪ್ರಶಸ್ತಿಗೆ ಪಾತ್ರವಾಗಿದೆ.
2018 ಮತ್ತು 2019ನೇ ಸಾಲಿ ನಲ್ಲಿಯೂ ರಾಜ್ಯ ಮಟ್ಟದ ಕಾಯಕಲ್ಪ ಪ್ರಶಸ್ತಿಗೆ ಪಾತ್ರರಾದ ಹೆಗ್ಗಳಿಕೆ ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ್ದು.ಕೋವಿಡ್ 19 ವಿರುದ್ಧದ ಹೋರಾಟದಲ್ಲಿಯೂ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿರುವ ಇಲ್ಲಿನ ವೈದ್ಯರು, ಆರೋಗ್ಯ ಸಹಾಯಕಿಯರು, ಸಿಬಂದಿಯ ಕರ್ತವ್ಯ ನಿಷ್ಠೆಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ಈ ಸಾಧನೆ ನನ್ನೊಬ್ಬಳದಲ್ಲ; ಕಂಡ್ಲೂರು ಪ್ರಾಥಮಿಕ ಆರೋಗ್ಯದಲ್ಲಿರುವ ಎಲ್ಲರ ಸಹಕಾರ ಹಾಗೂ ನಿಸ್ವಾರ್ಥ ಸೇವೆಯಿಂದ ಇದು ಸಾಧ್ಯವಾಗಿದೆ.
– ಡಾ| ಲತಾ ನಾಯಕ್,
ಕಂಡ್ಲೂರು ಪ್ರಾ.ಆ. ಕೇಂದ್ರದ ವೈದ್ಯಾಧಿಕಾರಿ