ಸಂಕಷ್ಟದಲ್ಲಿದ್ದ ಕಲ್ಲಂಗಡಿ ಬೆಳೆಗಾರನ ಕೈ ಹಿಡಿಯಿತು

ಉದಯವಾಣಿ ರೈತ ಸೇತು 

Team Udayavani, Apr 8, 2020, 5:45 AM IST

ಸಂಕಷ್ಟದಲ್ಲಿದ್ದ ಕಲ್ಲಂಗಡಿ ಬೆಳೆಗಾರನ ಕೈ ಹಿಡಿಯಿತು

ಕೋಟ: ಲಾಕ್‌ಡೌನ್‌ನಿಂದಾಗಿ ರೈತರು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಸಿಗದೆ ಗದ್ದೆಯಲ್ಲೇ ಕೊಳೆಯುವ ಸಂಕಷ್ಟ ಎದುರಾಗಿದೆ. ಗ್ರಾಹಕರನ್ನು ಸಂಪರ್ಕಿ ಸುವ ಎಲ್ಲ ಮಾರ್ಗಗಳೂ ಬಂದ್‌ ಆಗಿದೆ. ಈ ಸಂದಿಗ್ಧ ಕಾಲಘಟ್ಟದಲ್ಲಿ ರೈತ/ಬೆಳೆಗಾರರು ಹಾಗೂ ಗ್ರಾಹಕರಿಗೆ ಸಂಪರ್ಕ ಕಲ್ಪಿಸಲು ಉದಯವಾಣಿ ರೈತ ಸೇತು ಅಂಕಣವನ್ನು ಆರಂಭಿಸಿದೆ.

ರೈತರು ಅತ್ಯುತ್ತಮವಾಗಿ ಪ್ರತಿಕ್ರಿಯಿ ಸಿದ್ದು, ಮಂದಿ ತಮ್ಮ ಬೆಳೆ ಹಾಗೂ ಇತ್ಯಾದಿ ವಿವರಗಳನ್ನು ಕಳಿಸಿದ್ದರು. ಅದನ್ನು ಪ್ರಕಟಿಸಿದ ಮೊದಲ ದಿನವೇ ಹಲವು ಗ್ರಾಹಕರು ಬೆಳೆಗಾರರನ್ನು ಸಂಪರ್ಕಿಸಿದ್ದಾರೆ. ಕೆಲವರಲ್ಲಿ ಸಾಮಗ್ರಿ ಕುರಿತು ವಿಚಾರಣೆ ಮಾಡಿದ್ದರೆ, ಇನ್ನು ಕೆಲವರಿಂದ ಖರೀದಿಯೂ ನಡೆದಿದೆ.

ಹನ್ನೆರಡು ಟನ್‌ ಮಾರಾಟ
ಟನ್‌ಗಟ್ಟಲೆ ಕಲ್ಲಂಗಡಿ ಬೆಳೆದು ಸಂಕಷ್ಟಕ್ಕೆ ಸಿಲುಕಿದ್ದ ಬನ್ನಾಡಿ ಸಮೀಪ ಉಪ್ಲಾಡಿಯ ರೈತ ಸದಾನಂದ ಪೂಜಾರಿಯವರ ಪಾಲಿಗೆ ಈ ಅಂಕಣ ಸಂಜೀವಿನಿಯಾಗಿದೆ.

ಪ್ರಗತಿಪರ ಕೃಷಿಕರಾದ ಸದಾನಂದ ಪೂಜಾರಿಯವರು ತಮ್ಮ ಸ್ನೇಹಿತ ರಮೇಶ್‌ ಪೂಜಾರಿ ಅವರೊಂದಿಗೆ ಸೇರಿ ಉಪ್ಲಾಡಿ ಯಲ್ಲಿ ಪ್ರತಿ ವರ್ಷ ಟನ್‌ಗಟ್ಟಲೆ ಕಲ್ಲಂಗಡಿ ಬೆಳೆಯುತ್ತಿದ್ದರು. ಬಾಡಿ ಗೆಗೂ ಗದ್ದೆ ವಹಿಸಿಕೊಂಡು ಬೆಳೆಯುತ್ತಿದ್ದರು. ಜಿಲ್ಲೆ, ಹೊರರಾಜ್ಯ ಗಳಿಗೂ ಕಲ್ಲಂಗಡಿಯನ್ನು ಮಾರ ಲಾಗುತ್ತಿತ್ತು. ಅದೇ ರೀತಿ ಈ ಬಾರಿ ಕಷ್ಟಪಟ್ಟು ಕಪ್ಪು ಕಲ್ಲಂಗಡಿ ಬೆಳೆದಿದ್ದು,10 ಎಕರೆ ಪ್ರದೇಶ ಕೊಯ್ಲಿಗೆ ಸಿದ್ಧವಾಗಿತ್ತು. ಫ‌ಸಲೂ ಉತ್ತಮವಾಗಿತ್ತು ಅಷ್ಟರಲ್ಲೇ ಕೋವಿಡ್‌-19 ಉಪಟಳದಿಂದ ದೇಶ ವ್ಯಾಪಿ ಲಾಕ್‌ಡೌನ್‌ ಘೋಷಣೆಯಾಯಿತು. ಹಬ್ಬ ಜಾತ್ರೆ, ಸಂತೆಗಳು ಸ್ಥಗಿತಗೊಂಡ ಪರಿಣಾಮ ಹಣ್ಣಿಗೆ ಇದ್ದಕ್ಕಿದ್ದಂತೆ ಬೇಡಿಕೆ ಕುಸಿಯಿತು. ಹೊರ ರಾಜ್ಯಕ್ಕೆ ರಫ್ತು ಮಾಡುವ ಆಸೆಯಂತೂ ಕೈ ಬಿಟ್ಟಿತು. ಕಳೆದ ಬಾರಿ ಕೆ.ಜಿ.ಗೆ 12-18 ರೂ. ಇದ್ದ ಧಾರಣೆ ಈ ಬಾರಿ 3-4 ರೂ.ಗೂ ಕೇಳುವವರಿಲ್ಲ. ಸ್ಥಳೀಯ ಹಲವು ವರ್ತಕ ರನ್ನು ಸಂಪರ್ಕಿಸಿದರೂ ಮಾರುಕಟ್ಟೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಅಸಹಾ ಯಕರಾಗಿ ಹಣ್ಣನ್ನು ಕಟಾವು ಮಾಡದೆ ಗದ್ದೆ ಯಲ್ಲೇ ಬಿಟ್ಟಿದ್ದರು.

ಉದಯವಾಣಿ ರೈತ ಸೇತು
ಈ ಸಂದರ್ಭದಲ್ಲಿ ಉದಯವಾಣಿಯ ರೈತ ಸೇತು ಪ್ರಕಟನೆಯನ್ನು ಕಂಡು, ತಮ್ಮ ಕಲ್ಲಂಗಡಿ ಬೆಳೆಯ ವಿವರವನ್ನು ಕಳುಹಿಸಿದರು. ಮಂಗಳವಾರದ ರೈತ ಸೇತು ಅಂಕಣದಲ್ಲಿ (ಸುದಿನ ಪುಟ 2) ಬೆಳೆಯ ವಿವರ ಪ್ರಕಟವಾಯಿತು.ಬೆಳಗ್ಗೆಯಿಂದಲೇ ಬ್ರಹ್ಮಾವರ, ಉಡುಪಿ, ಹಿರಿಯಡ್ಕ, ಕುಂದಾಪುರ ಮತ್ತಿತರ ಕಡೆಗಳಿಂದ 20ಕ್ಕೂ ಹೆಚ್ಚು ಗ್ರಾಹಕರು ಸದಾನಂದರಿಗೆ ಕರೆ ಮಾಡಿ, ಬೆಳೆ ಕುರಿತು ವಿಚಾರಿಸಿದರು. ಕೆಲವರು ಜಮೀನಿಗೂ ಭೇಟಿ ನೀಡಿ ಪರಿಶೀಲಿಸಿದರು.ಇದರ ಪರಿಣಾಮ ಪ್ರಥಮ ದಿನವೇ 12 ಟನ್‌ ಕಲ್ಲಂಗಡಿ ಹಣ್ಣು ಮಾರಾಟವಾಗಿದೆ.

ನಿಮ್ಮ ಬೆಳೆ ಮಾಹಿತಿ ನೀಡಿ
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಾವಿರಾರು ರೈತರು ತಾವು ಬೆಳೆದ ತರಕಾರಿ, ಹಣ್ಣು ಹಾಗೂ ಆಹಾರ ಬೆಳೆಗಳನ್ನು ಮಾರಲಾಗದೇ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಉದಯವಾಣಿಯು ಗ್ರಾಹಕರೊಂದಿಗೆ ಸಂಪರ್ಕ ಕಲ್ಪಿಸಲು ಮುಂದಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ರೈತರು, ತರಕಾರಿ ಬೆಳೆಗಾರರು ಈ ಅಂಕಣದ ಪ್ರಯೋಜನ ಪಡೆಯಬಹುದು. ತಮ್ಮ ಬೆಳೆ ಹಾಗೂ ಸಂಪರ್ಕ ಸಂಖ್ಯೆಯನ್ನು ನಮ್ಮ ವಾಟ್ಸಾಪ್‌ಗೆ ಕಳಿಸಿದರೆ ಪ್ರಕಟಿಸಲಾಗುವುದು. ನೀಡಬೇಕಾದ ಮಾಹಿತಿ: ಹೆಸರು, ಉತ್ಪನ್ನದ ಹೆಸರು, ಲಭ್ಯವಿರುವ ಬೆಳೆ ಪ್ರಮಾಣ, ಊರಿನ ಹೆಸರು, ಸಂಪರ್ಕ ಸಂಖ್ಯೆ, ಉತ್ಪನ್ನದ ಬೆಲೆ.

ರೈತಸೇತುವಿಗೆ ಚಿರಋಣಿ
ನಾನು ಬೆಳೆದ ಕಪ್ಪು ಕಲ್ಲಂಗಡಿಗೆ ಮಾರುಕಟ್ಟೆ ಇಲ್ಲದೇ ಸಂಕಷ್ಟದಲ್ಲಿದ್ದೆ. ಕೊನೆಯ ಪ್ರಯತ್ನ ಎನ್ನುವಂತೆ ಉದಯವಾಣಿಯ ರೈತಸೇತು ಅಂಕಣಕ್ಕೆ ವಿವರ ಕಳುಹಿಸಿದೆ. ಬೆಳಗ್ಗೆಯಿಂದಲೇ ಸಾಕಷ್ಟು ಮಂದಿ ಕರೆ ಮಾಡಿ ಬೆಳೆ ಕುರಿತು ಕೇಳಿದರು. ಈಗಾಗಲೇ 12 ಟನ್‌ ಮಾರಾಟವಾಗಿದ್ದು, 10ಟನ್‌ಗೆ ಮಾತುಕತೆಯೂ ನಡೆದಿದೆ. ಉಳಿದ ಹಣ್ಣಿಗೂ ಬೇಡಿಕೆ ಬಂದಿದೆ. ಸಂಕಷ್ಟ ಕಾಲದಲ್ಲಿ ಕೈ ಹಿಡಿದ ಉದಯವಾಣಿಗೆ ಚಿರಋಣಿ.
– ಸದಾನಂದ ಪೂಜಾರಿ, ಕಲ್ಲಂಗಡಿ ಬೆಳೆಗಾರ

ಟಾಪ್ ನ್ಯೂಸ್

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.