ನಿಂಬೆ ಬೆಳೆಗಾರನಿಗೆ ಕೋವಿಡ್-19 ಕಂಟಕ
Team Udayavani, Apr 9, 2020, 7:15 PM IST
ಚಡಚಣ: ಪಟ್ಟಣದ ಗೋಡಿಹಾಳ ರಸ್ತೆಯ ತೋಟದಲ್ಲಿ ಬೆಳೆದಿರುವ ನಿಂಬೆ ಹಣ್ಣು ತೋರಿಸುತ್ತಿರುವ ರೈತ ಚನ್ನಪ್ಪ ಕರಜಗಿ.
ಚಡಚಣ: ಈ ಸಲ ಮುಂಗಾರು ಹಿಂಗಾರು ಬೆಳೆಗಳು ಸಂಪೂರ್ಣವಿದ್ದು, ಖುಷಿಯಲ್ಲಿ ರೈತ ಕಾಲ ಕಳೆಯಲು ಕನಸು ಕಂಡಿದ್ದ. ಆದರೆ, ಕೊರೊನಾದಿಂದ ದೇಶವೇ ಲಾಕ್ ಡೌನ್ ಮಾಡಿದ್ದರಿಂದ ಎಲ್ಲ ವ್ಯಾಪಾರ ವಹಿವಾಟುಗಳು ಬಂದ್ ಆಗಿರುವ ಪರಿಣಾಮ ರೈತ ಕಂಗಾಲಾಗಿ ಸಾಲದಲ್ಲಿಯೇ ಜೀವನ ಸಾಗಿಸುವಂತಾಗಿದೆ. ಗೋಡಿಹಾಳ ರಸ್ತೆಯಲ್ಲಿರುವ ತೋಟದಲ್ಲಿ ರೈತ ಚನ್ನಪ್ಪ ಕರಜಗಿ 10 ವರ್ಷಗಳ ಹಿಂದೆ 100 ನಿಂಬೆ ಸಸಿಗಳನ್ನು ನೆಟ್ಟು ಪೋಷಿಸಿದ್ದು, 4 ವರ್ಷಗಳಿಂದ ಅವನಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಕ್ಕು ಸಾಲದಿಂದ ಮುಕ್ತನಾಗಿ ಬದುಕು ನಡೆಸುತ್ತಿದ್ದನು. ಆದರೆ, ಈ ಸಲ ಕೊರೊನಾ ಹೊಡೆತಕ್ಕೆ ಸಿಕ್ಕು ವ್ಯಾಪಾರ ಸ್ಥಗಿತಗೊಂಡು ನಿಂಬೆ ಹಣ್ಣುಗಳು ಮಾರಾಟವಾಗದೇ ಮಾರುಕಟ್ಟೆಗೆ ನಿಂಬೆ ಸಾಗಿಸಲಾಗದೇ ಸಂಕಟದಲ್ಲಿ ಸಿಲುಕೊದ್ದಾನೆ.
ಗಿಡಗಳಲ್ಲಿ ಸಾಕಷ್ಟು ಹಣ್ಣುಗಳು ಫಲ ಕೊಡುತ್ತಿದ್ದು, ಅವು ಅಲ್ಲಿಯೇ ಹಣ್ಣಾಗಿ ನಾಶವಾಗುತ್ತಿವೆ. ಎರಡು ಕೊಳವೆಬಾವಿಗಳ ಮೂಲಕ ಹನಿ ನೀರಾವರಿಯೊಂದಿಗೆ ರಸಗೊಬ್ಬರ ಸಿಂಪಡಿಸಿ, ಸಮಯಕ್ಕೆ ಸರಿಯಾಗಿ ಕಳೆ ತೆಗೆದು, ಇವು ಬೆಳೆಸುವಲ್ಲಿ ಮತ್ತೂಬ್ಬ ರೈತನಿಗೆ ಮಾದರಿಯಾಗಿರುವನು. ಅಲ್ಲಿ ಇಲ್ಲಿ ಬಡವರಿಗೆ ಕೊಟ್ಟು ನಾಶವಾಗದಂತೆ ಮಾಡುವ ಕರ್ತವ್ಯ ಇವನದಾಗಿದೆ. ರೈತರ ಸಂಕಷ್ಟಗಳಿಗೆ ಸ್ಪಂದಿಸಿ ಪರಿಹಾರ ಧನ ನೀಡಿದರೆ ರೈತರಿಗೆ ಅನುಕೂಲವಾಗುವುದು. ಇಲ್ಲವಾದರೆ ಅನ್ನದಾತ ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಸಾಲ ಮಾಡಿ ನಿಂಬೆ ಗಿಡ ಹಚ್ಚಿದ್ದು, ಮಕ್ಕಳಂತೆ ಪೋಷಿಸುತ್ತ ಬಂದಿರುವೆ. ಇತ್ತೀಚಿನ ದಿನಗಳಲ್ಲಿ ಉತ್ತಮ ಬೆಲೆ ಬರುತ್ತಿತ್ತು. ಆದರೆ, ಲಾಕ್ಡೌನ್ ಪರಿಣಾಮ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಇದರಿಂದ ನನಗೆ ಸುಮಾರು 2 ಲಕ್ಷದಷ್ಟು ಹಾನಿಯಾಗಿದೆ. ದಿನಂಪ್ರತಿ ಸಾವಿರಾರು ಹಣ್ಣುಗಳು ನಾಶವಾಗುತ್ತಿವೆ. ಭರಪೂರ ಕಾಯಿ ಇದ್ದರೂ ಸಿಕ್ಕ ಬೆಲೆಗೆ ಮಾರುವ ಪ್ರಸಂಗ ಬಂದಿದೆ. ಸರಕಾರ ರೈತರ ಸಮಸ್ಯೆ ಗುರುತಿಸಿ ಸೂಕ್ತ ಪರಿಹಾರ ನೀಡಿದರೆ ನೆಮ್ಮದಿ ದೊರೆಯಬಹುದು.
ಚನ್ನಪ್ಪ ಕರಜಗಿ,
ನಿಂಬೆ ಬೆಳೆದ ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್