ದೇಶಕ್ಕಾಗಿ 102 ಟ್ರೊಫಿಗಳನ್ನು ಮಾರಿದ 15 ವರ್ಷದ ಗಾಲ್ಫರ್ ಅರ್ಜುನ್‌ ಭಾಟಿ


Team Udayavani, Apr 9, 2020, 3:22 PM IST

ದೇಶಕ್ಕಾಗಿ 102 ಟ್ರೊಫಿಗಳನ್ನು ಮಾರಿದ 15 ವರ್ಷದ ಗಾಲ್ಫರ್ ಅರ್ಜುನ್‌ ಭಾಟಿ

ನವದೆಹಲಿ: ಕೊರೊನಾ ವೈರಸ್‌ ಅನ್ನು ಮಣಿಸಲು ಭಾರತೀಯ ಕ್ರೀಡಾಪಟುಗಳು ತಮ್ಮ ಕೈಲಾದ ಎಲ್ಲ ರೀತಿಯ ನೆರವನ್ನು ನೀಡುತ್ತಿದ್ದಾರೆ. ಹಣ ಕೊಡುವುದು, ಜನರಿಗೆ ಸಂದೇಶ ನೀಡುವುದು, ಬೀದಿಗಿಳಿದು ಸೇವೆ ಮಾಡುವುದು ಎಲ್ಲವನ್ನೂ ಮಾಡುತ್ತಿದ್ದಾರೆ. ಇವೆಲ್ಲ ಶ್ರೀಮಂತ ಆಟಗಾರರ ಮಾತಾಯಿತು. ಆದರೆ ಇನ್ನೂ ಎಳೆಯ, ಕೈಯಲ್ಲಿ ಹಣವಿಲ್ಲದ ಕ್ರೀಡಾಪಟುಗಳು ಏನು ಮಾಡಬಹುದು? ಅದಕ್ಕೆ ಇಲ್ಲೊಂದು ಉತ್ತರವಿದೆ. ಈ ಹೃದಯಸ್ಪರ್ಶಿ ಕಥೆ ನಮ್ಮ ಕಣ್ಣಂಚಲ್ಲಿ ನೀರು ಜಿನುಗಿಸಿ ನಮ್ಮನ್ನು ಭಾವುಕರನ್ನಾಗಿಸದಿದ್ದರೆ ಕೇಳಿ.

ಈಗಿನ್ನೂ 15 ವರ್ಷದ ಬಾಲಕ ಅರ್ಜುನ್‌ ಭಾಟಿ. ಈತ ಉತ್ತರಪ್ರದೇಶದ ಗ್ರೇಟರ್‌ ನೋಯ್ಡಾಕ್ಕೆ ಸೇರಿದ್ದಾರೆ. ಈ ಪ್ರದೇಶ ದೆಹಲಿಗೆ ಅಂಟಿಕೊಂಡಿದೆ.ಸದ್ಯ 10ನೇ ವರ್ಷ ಓದುತ್ತಿರುವ ಅರ್ಜುನ್‌ ಕಳೆದ 8 ವರ್ಷಗಳಿಂದ ಗಾಲ್ಫ್ ಆಡುತ್ತಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ 102 ಟ್ರೋಫಿ ಗೆದ್ದಿದ್ದಾರೆ. ದೇಶಕ್ಕೆ ತುರ್ತು ಪರಿಸ್ಥಿತಿ ಬಂದಿರುವ ಈ ಹೊತ್ತಿನಲ್ಲಿ ಅದಷ್ಟನ್ನೂ ತಮ್ಮ ಗೆಳೆಯರಿಗೆ, ಸಂಬಂಧಿಕರಿಗೆ, ಪೋಷಕರಿಗೆ ಮಾರಿ ಅದರಿಂದ ಬಂದ 4.30 ಲಕ್ಷ ರೂ. ಪ್ರಧಾನಮಂತ್ರಿ ಪರಿಹಾರ ನಿಧಿಗೆ ಕಳುಹಿಸಿದ್ದಾರೆ!

ಈತ ಮೂರು ಬಾರಿ ಗಾಲ್ಫ್ ವಿಶ್ವಚಾಂಪಿಯನ್‌ ಶಿಪ್‌ ಗೆದ್ದಿದ್ದಾರೆ. ಹಲವು ರಾಷ್ಟ್ರೀಯ ಕೂಟಗಳಲಿ ಚಾಂಪಿಯನ್‌. ಒಬ್ಬ ಕ್ರೀಡಾಪಟುವಿಗೆ ತಾನು ಗೆದ್ದಿರುವ ಟ್ರೋಫಿ ಎಷ್ಟು ಮೌಲ್ಯಯುತ ಎನ್ನುವುದು ಎಲ್ಲರಿಗೂ ಗೊತ್ತಿರುತ್ತದೆ. ಅದನ್ನು ಗೆಲ್ಲಲು ಅವರು ಪಟ್ಟಿರುವ ಪಾಡು, ಅದರ ಹಿಂದಿನ ನೋವು, ಒಂದೊಂದು ಟ್ರೋಫಿಯೂ ಹೇಳುವ ಒಂದೊಂದು ಕಥೆ.. ಆಟಗಾರರು ಅದನ್ನು ಮಾರುತ್ತಾರೆಂದರೆ ಅವರು ಸಂಪೂರ್ಣ ದಿವಾಳಿಯಾಗದ ಹೊರತು ಸಾಧ್ಯವಿಲ್ಲ. ಆದರೆ ಈ ಹುಡುಗ ತನ್ನ ದೇಶ ಕಷ್ಟದಲ್ಲಿದೆ ಎಂದು ಅಷ್ಟೂ ಟ್ರೋಫಿಗಳನ್ನು ಮಾರಿದ್ದಾರೆ.

ಟ್ರೋಫಿಗಳನ್ನು ಬೇಕಾದರೆ ಮತ್ತೆ ಗೆಲ್ಲಬಹುದು. ಆದರೆ ದೇಶ ಇಂತಹ ಸ್ಥಿತಿಯಲ್ಲಿರುವಾಗ ತಾನು ಸೋಮಾರಿಯಂತೆ ಸುಮ್ಮನಿರಲು ಸಾಧ್ಯವಿಲ್ಲ. ಆದ್ದರಿಂದಲೇ ಅಷ್ಟನ್ನೂ ನಾನು ಮಾರಿದ್ದೇನೆ. ದಯವಿಟ್ಟು ನೀವೂ ಕೂಡ ಈ ಸಮಯದಲ್ಲಿ ಯಾವುದೇ ರೀತಿಯಲ್ಲಾದರೂ ದೇಶದ ನೆರವಿಗೆ ನಿಲ್ಲಿ ಎಂದು ಅರ್ಜುನ್‌ ಕೇಳಿಕೊಂಡಿದ್ದಾರೆ.

ಜಾರ್ಖಂಡ್‌ ಕ್ರಿಕೆಟಿಗ ಶಹಬಾಜ್‌ ನದೀಂ ಮನೆಮನೆಗೆ ಆಹಾರ ಪದಾರ್ಥ ಹಂಚಿರುವುದು, ಸೌರವ್‌ ಗಂಗೂಲಿ ಸಾವಿರಾರು ಕುಟುಂಬಗಳ ಊಟದ ಜವಾಬ್ದಾರಿಯನ್ನು ಹೊತ್ತಿರುವುದು. ಗೌತಮ್‌ ಗಂಭೀರ್‌ ತನ್ನ 2 ವರ್ಷದ ವೇತನ, ಸಂಸದರ ನಿಧಿ ಸೇರಿ ಹೆಚ್ಚುಕಡಿಮೆ 2.50 ಕೋಟಿ ರೂ. ನೀಡಿರುವುದನ್ನೆಲ್ಲ ಇಲ್ಲಿ ನೆನಪಿಸಿಕೊಳ್ಳಬಹುದು.

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.