ಮತ್ತೆ ಕ್ರಿಕೆಟಿಗೆ ಮರಳುವೆ: ಶ್ರೀಶಾಂತ್
Team Udayavani, Apr 19, 2020, 6:15 AM IST
ಕೊಚ್ಚಿ: ಇದೇ ವರ್ಷ ಸ್ಪರ್ಧಾತ್ಮಕ ಕ್ರಿಕೆಟಿಗೆ ಮತ್ತೆ ಮರಳುವೆ ಎಂದು ವೇಗಿ ಶ್ರೀಶಾಂತ್ ಹೇಳಿದ್ದಾರೆ. ಹೆಲೋ ಆ್ಯಪ್ ಎನ್ನುವ ಸಾಮಾಜಿಕ ಜಾಲತಾಣದಲ್ಲಿ ಲೈವ್ ವೀಡಿಯೊ ಮೂಲಕ ಈ ವಿಚಾರವನ್ನು ಶ್ರೀಶಾಂತ್ ಘೋಷಿಸಿದ್ದು, ನಾಯಕ ವಿರಾಟ್ ಕೊಹ್ಲಿ ಮತ್ತು ಸುರೇಶ್ ರೈನಾ ಅವರಂತೆ ತಾವೂ ಕೂಡ ಫಿಟ್ ಆಗಿರಬೇಕು. ಮುಂದಿನ ದಿನಗಳಲ್ಲಿ ಮತ್ತಷ್ಟು ಫಿಟ್ನೆಸ್ ಕಾಯ್ದುಕೊಂಡು ವೃತಿಪರ ಕ್ರಿಕೆಟಿಗೆ ಮರಳುವೆ ಎಂದರು.
ಮಾತ್ರವಲ್ಲದೇ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತದ ಪರ ಆಡುವ ಬಯಕೆಯಿದೆ. ವಿರಾಟ್ ಕೊಹ್ಲಿ ಸಾರಥ್ಯದ ಟೀಮ್ ಇಂಡಿಯಾದಲ್ಲಿ ಆಡೋದು ನನ್ನ ಬಹುದೊಡ್ಡ ಕನಸು. ಈ ಬಗ್ಗೆ ಸೌರವ್ ಗಂಗೂಲಿ ಅವರಲ್ಲಿ ಸಲಹೆ ಪಡೆಯುತ್ತೇನೆ ಎಂದಿದ್ದಾರೆ.
ಕ್ರಿಕೆಟ್ಗಿಂತ ದೇಶ ಮೊದಲು
ಕೋವಿಡ್-19 ವೈರಸ್ ವಿರುದ್ಧದ ಹೋರಾಟಕ್ಕೆ ನೆರವಾಗಲು ಭಾರತ-ಪಾಕಿಸ್ಥಾನ ನಡುವೆ ದುಬಾೖಯಲ್ಲಿ 3 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿ ಆಯೋಜಿಸಬೇಕು ಎಂಬ ಶೋಯಿಬ್ ಅಖ್ತರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಶ್ರೀಶಾಂತ್, “ನಮಗೆ ಕ್ರಿಕೆಟ್ಗಿಂತ ದೇಶ ಮೊದಲು. ರಾಜಕೀಯ ಸ್ಥಿತಿಗತಿಗಳು ಮೊದಲು ಸುಧಾರಿಸಲಿ, ಆಮೇಲೆ ಕ್ರಿಕೆಟ್ ಬಗ್ಗೆ ನೋಡೋಣ. ಸದ್ಯಕ್ಕೆ ಭಾರತ-ಪಾಕ್ ಸರಣಿ ಅಸಾಧ್ಯ. ನಮಗೆ ದೇಶ ಮತ್ತು ದೇಶದವರ ಭಾವನೆಗಳೇ ಮುಖ್ಯ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ