ಕೋವಿಡ್ 19; ಪೇರಲ ಬೆಳೆಗಾರರು ಸಂಕಷ್ಟಕ್ಕೆ
Team Udayavani, Apr 22, 2020, 1:07 PM IST
ಧಾರವಾಡ: ಕೋವಿಡ್ 19 ಲಾಕ್ಡೌನ್ ಹಿನ್ನೆಲೆಯಲ್ಲಿ ಪೇರಲ ಬೆಳೆದ ರೈತರು ಸಂಕಷ್ಟ ಅನುಭವಿಸುವಂತಾಗಿದೆ.
ನವಲಗುಂದ ತಾಲೂಕಿನ ಶಿರೂರ ಗ್ರಾಮದಲ್ಲಿ ಸುಮಾರು 200 ಎಕರೆಗೂ ಹೆಚ್ಚು ಪೇರಲ ತೋಟಗಳಿದ್ದು, ರೈತರು ಎಲ್-49 ತಳಿಯ ಗಿಡಗಳಿಂದ ಉತ್ತಮ ಫಸಲು ಪಡೆದಿದ್ದಾರೆ. ಪ್ರತಿ ವರ್ಷ ಎಕರೆಗೆ ಒಂದು ಲಕ್ಷ ರೂ.ದಂತೆ ರೈತರಿಗೆ ಗುತ್ತಿಗೆದಾರರು ಲಾವಣಿ ನೀಡುತ್ತಿದ್ದರು. ಈ ಹಣ್ಣು ಗೋವಾ ಸೇರಿದಂತೆ ಸುತ್ತಮುತ್ತಲಿನ ಮಾರುಕಟ್ಟೆಗಳಿಗೆ ಸರಬರಾಜು ಆಗುತ್ತಿತ್ತು. ಆದರೀಗ ಕೋವಿಡ್ 19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆಯೇ ಇಲ್ಲದಂತಾಗಿದೆ.
ಶಿರೂರ ಪೇರಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅತಿ ಬೇಡಿಕೆಯುಳ್ಳ ಹಣ್ಣು. ಆದರೆ ಈಗ ಪೇರಲ ತೋಟಗಳನ್ನು ಗುತ್ತಿಗೆ ಹಿಡಿಯುವವರೇ ಇಲ್ಲ. ಮಾರುಕಟ್ಟೆಯಲ್ಲಿ ಬೇಡಿಕೆಯಿಲ್ಲದೆ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿವೆ ಎಂದು ಹೇಳುತ್ತಾರೆ ಪೇರು ಬೆಳೆಗಾರ ಪ್ರಕಾಶ ಬಾಳನಗೌಡರ.
ವಿಜ್ಞಾನಿಗಳ ಭೇಟಿ: ನವಲಗುಂದ ತಾಲೂಕಿನ ಶಿರೂರ ಗ್ರಾಮಕ್ಕೆ ಮಂಗಳವಾರ ಕೃಷಿ ವಿವಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಿತು.ರೈತರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಆಲಿಸಿತು. ಪೇರಲ ಹಣ್ಣು ಮಾರಾಟಕ್ಕಾಗಿ ಧಾರವಾಡದ ಎಐತ ಉತ್ಪಾದಕ ಕಂಪನಿ ಹಾಗೂ ಬೆಂಗಳೂರು ಹಾಪ್ಕಾಮ್ಸ್ ಸಂಪರ್ಕಿಸಿ ರೈತರನ್ನು ಪರಿಚಯಿಸಲಾಗಿದೆ. ರೈತರಿಗೆ ಕೃಷಿ ವಿವಿಯ ಅಗ್ರಿವಾರ್ ರೂಮ್ (18004251150) ಟೋಲ್ ಪ್ರೀ ದೂರವಾಣಿ ಸಂಖ್ಯೆ ನೀಡಿ ಕೃಷಿ ಸಂಬಂಧಿತ ಮಾಹಿತಿ ಪಡೆಯಲು ತಿಳಿಸಿತು.
ಹಿರಿಯ ವಿಜ್ಞಾನಿ ಡಾ| ಶುಭಾ ಎಸ್., ಗೃಹ ವಿಜ್ಞಾನಿ ಡಾ| ಗೀತಾ ತಾಮಗಾಳೆ, ಕೀಟಶಾಸ್ತ್ರ ವಿಜ್ಞಾನಿ ಕಲಾವತಿ ಕಂಬಳಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ
Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್ ಸಲ್ಲಿಸಿಲ್ಲ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ