ಬೆಳ್ತಂಗಡಿ ಆಸ್ಪತ್ರೆಗೆ ಗಂಟಲ ದ್ರವ ಮಾದರಿ ಸಂಗ್ರಹ ಕೇಂದ್ರ
Team Udayavani, Apr 23, 2020, 5:09 AM IST
ಬೆಳ್ತಂಗಡಿ: ಜಿಲ್ಲಾ ನಿರ್ಮಿತಿ ಕೇಂದ್ರದಿಂದ ತಾಲೂಕು ಆಸ್ಪತ್ರೆಗೆ ಕೊಡಮಾಡಲ್ಪಟ್ಟ ಕೋವಿಡ್-19 ಶಂಕಿತರ ಗಂಟಲ ದ್ರವದ ಮಾದರಿಗಳನ್ನು ಸಂಗ್ರಹಿಸಲು ಅನುಕೂಲವಾಗುವ ವಾಕ್ ಇನ್ ಸ್ಯಾಂಪಲ್ ಕಲೆಕ್ಷನ್ ಕಿಯೋಸ್ಕ್ಸ್ (ವಿಸ್ಕ್) ಅನ್ನು ಶಾಸಕ ಹರೀಶ್ ಪೂಂಜ ಬುಧವಾರ ಆಸ್ಪತ್ರೆಗೆ ಹಸ್ತಾಂತರಿಸಿ ಚಾಲನೆ ನೀಡಿದರು.
ಸುಮಾರು 35 ಸಾವಿರ ರೂ. ವೆಚ್ಚದಿಂದ ನಿರ್ಮಾಣಗೊಂಡಿದ್ದು ಜಿಲ್ಲಾಡಳಿತದ ಆದೇಶದ ಮೇರೆಗೆ ಪ್ರತಿ ತಾಲೂಕಿಗೆ ಒಂದು ಬೂತ್ ನೀಡಲಾಗುತ್ತಿದೆ. ಬೆಳ್ತಂಗಡಿ ಸಾರ್ವ ಜನಿಕ ಆಸ್ಪತ್ರೆಯಲ್ಲೂ ಕೋವಿಡ್-19 ಸೋಂಕಿತ ವ್ಯಕ್ತಿಯ ಗಂಟಲು ದ್ರವ ಸಂಗ್ರಹ (ಕಿಯೋಸ್ಕ್) ನಾಳೆಯಿಂದಲೇ ಆರಂಭವಾಗಲಿದೆ. ಸೋಂಕಿತ ವ್ಯಕ್ತಿ ಮತ್ತು ವೈದ್ಯರ ನೇರ ಸಂಪರ್ಕ ತಡೆಯಲು ಉತ್ತಮ ವಿಧಾನವಾಗಿದೆ ಎಂದು ನಿರ್ಮಿತಿ ಕೇಂದ್ರದ ನಿರ್ದೇಶಕ ರಾಜೇಂದ್ರ ಕಲಾºವಿ ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ| ವಿದ್ಯಾವತಿ, ಡಾ| ಆದಂ, ಸಹಾಯಕ ಆಡಳಿತಾಧಿ ಕಾರಿ ಶ್ರೀಕಾಂತ ಹೆಗ್ಡೆ, ಅಧೀಕ್ಷಕ ಲೋಕೇಶ್, ಪ್ರಯೋಗಾಲಯ ಸಿಬಂದಿ ಕಿರಣ್ ಪಂಡಿತ್, ಬಿಜೆಪಿ ಮಂಡಲ ನಿಯೋಜಿತ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಗೌಡ ಕೆ.ಆರ್. ಉಪಸ್ಥಿತರಿದ್ದರು.
ಪುತ್ತೂರಿಗೂ ಬಂತು ವಿಸ್ಕ್
ಪುತ್ತೂರು ಸರಕಾರಿ ಆಸ್ಪತ್ರೆಗೂ ವಾಕ್ ಇನ್ ಸ್ಯಾಂಪಲ್ ಕಲೆಕ್ಷನ್ ಕಿಯೋಸ್ಕ್ಸ್ (ವಿಸ್ಕ್) ಟೆಸ್ಟಿಂಗ್ ಮೆಷಿನ್ ಲಭಿಸಿದ್ದು, ಗುರುವಾರದಿಂದ ಇಲ್ಲಿ ಪರೀಕ್ಷೆ ಆರಂಭಗೊಳ್ಳಲಿದೆ. ಕೋವಿಡ್-19 ಸೋಂಕು ಶಂಕಿತ ವ್ಯಕ್ತಿಯ ಗಂಟಲ ದ್ರವವನ್ನು ಸಂಗ್ರಹಿಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
MUST WATCH
ಹೊಸ ಸೇರ್ಪಡೆ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
Desi Swara: ದುಬೈ ವರ್ಲ್ಡ್ ಕಪ್ 2024- ಗೆಲ್ಲುವ ಅರಬ್ ಕುದುರೆಗಳ ನಾಗಾಲೋಟ!
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ