ಮನೆಯಲ್ಲೇ ಪ್ರಾರ್ಥನೆ ಮಾಡಿ: ಯಾಳಗಿ
ರಾಜ್ಯ ಸರಕಾರದ ನಿಯಮ ಉಲ್ಲಂಘನೆಯಾಗದಂತೆ ರಂಜಾನ್ ಉಪವಾಸ ಮಾಡಿ
Team Udayavani, Apr 25, 2020, 1:28 PM IST
ದೇವದುರ್ಗ: ರಂಜಾನ್ ಹಬ್ಬದ ಪ್ರಯುಕ್ತ ನಡೆದ ಪೂರ್ವಭಾವಿ ಸಭೆಯಲ್ಲಿ ತಹಶೀಲ್ದಾರ್ ಮಧುರಾಜ ಯಾಳಗಿ ಮಾತನಾಡಿದರು
ದೇವದುರ್ಗ: ಶನಿವಾರದಿಂದ ರಂಜಾನ್ ಉಪವಾಸ ಆರಂಭವಾಗಲಿದೆ. ಮುಸ್ಲಿಂ ಬಾಂಧವರು ಪ್ರಾರ್ಥನೆ ಮನೆಯಲ್ಲಿ ಮಾಡಬೇಕು ಎಂದು ತಹಶೀಲ್ದಾರ್ ಮಧುರಾಜ ಯಾಳಗಿ ಹೇಳಿದರು.
ಪಟ್ಟಣದ ಮುರಿಗೆಪ್ಪ ಖೇಣೇದ್ ಫಂಕ್ಷನ್ ಸಭಾಂಗಣದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯ ಸರಕಾರ ಜಾರಿಗೊಳಿಸಿದ ಕೆಲ ನಿಯಮ ಉಲ್ಲಂಘನೆಗೆಯಾಗದಂತೆ ರಂಜಾನ್ ಉಪವಾಸ ಮಾಡಬೇಕು. ಮನೆಯಲ್ಲಿ ಪ್ರಾರ್ಥನೆ ಸಂದರ್ಭ ಹೆಚ್ಚಿನ ಜನರು ಸೇರದಂತೆ ಸಮಾಜದ ಹಿರಿಯರು ನಿಗಾವಹಿಸಬೇಕು ಎಂದು ಕೋರಿದರು.
ಲಿಂಗಸುಗೂರು ಡಿವೈಎಸ್ಪಿ ಎಸ್.ಎಸ್. ಹುಲ್ಲೂರು ಮಾತನಾಡಿ, ಮಸೀದಿ ಸುತ್ತಲು ಹಣ್ಣಿನ ವ್ಯಾಪಾರಕ್ಕೆ ನಿಷೇಧಿ ಸಲಾಗಿದೆ. ರಂಜಾನ್ ಉಪವಾಸ ಮುಗಿದ ನಂತರ ಇಫ್ತೀಯಾರ್ ಕಾರ್ಯಕ್ರಮ ನಡೆಯದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ಯೂನೂಸ್ ಶಾಹಪುರಿ, ಮಾನಪ್ಪ ಮೇಸ್ತ್ರೀ, ಅಬ್ದುಲ್ ಅಜೀಜ್, ಬಾಬುಸಾಬ. ಸಿಪಿಐ ಆರ್. ಎಂ. ನದಾಫ್, ಪಿಎಸ್ಐ ಎಲ್.ಬಿ. ಅಗ್ನಿ, ರಂಗಪ್ಪ, ವಿರುಪಾಕ್ಷಪ್ಪ, ಪುರಸಭೆ ಸದಸ್ಯ ಖಾಜಾಹುಸೇನ್, ರವಿ ಅಕ್ಕರಕಿ, ಬಸವರಾಜ ಸೇರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು
PM ಮೋದಿ ಸ್ಟೇಟ್ಸ್ ಮ್ಯಾನ್ ಅಲ್ಲ, ಸೇಲ್ಸ್ಮ್ಯಾನ್: ಬಿ.ಕೆ ಹರಿಪ್ರಸಾದ್
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
MUST WATCH
ಹೊಸ ಸೇರ್ಪಡೆ
Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು
UV Fusion: ಸದ್ಗತಿಯ ಹಾದಿಯಲ್ಲಿ ನೆಮ್ಮದಿಯ ಹಾಸು
ಕೊಳವೆ ಬಾವಿ ಕೊರೆಯಲು ಹೆಚ್ಚಿದ ಬೇಡಿಕೆ; ನದಿಗಳ ಒಡಲು ಬರಿದು
Vijayapura; ಶನಿವಾರ ಇಂಚಗೇರಿಯಲ್ಲಿ ಪಂಚಮಸಾಲಿ ಸಮಾವೇಶ; ಕಾಂಗ್ರೆಸ್ಗೆ ಬೆಂಬಲ ಎಂದ ನಾಯಕರು
Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ