ಆರ್ಥಿಕ ಲೆಕ್ಕಾಚಾರದ ಆಸೆಯಲ್ಲಿ ಎಡವಿ ಮುಳುಗಿದ ಬ್ರಿಟನ್‌


Team Udayavani, Apr 26, 2020, 5:07 PM IST

ಆರ್ಥಿಕ ಲೆಕ್ಕಾಚಾರದ ಆಸೆಯಲ್ಲಿ ಎಡವಿ ಮುಳುಗಿದ ಬ್ರಿಟನ್‌

ಮಣಿಪಾಲ: ಜಗತ್ತಿನಾದ್ಯಂತ ರುದ್ರತಾಂಡವ ಮಾಡುತ್ತಿರುವ ಕೋವಿಡ್‌-19 ಬ್ರಿಟನ್‌ ದೇಶದಲ್ಲೂ ರಣಕೇಕೆ ಹಾಕಿದೆ. ಇಲ್ಲಿಯವರೆಗೆ 1.48 ಲಕ್ಷ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 20 ಸಾವಿರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಜನವರಿಯಿಂದಲೇ ಲಾಕ್‌ಡೌನ್‌ ನಿಯಮದ ಮೊರೆಹೋದ ಯುಕೆ ಪ್ರಾಂತ್ಯ ಈ ಬಿಕ್ಕಟ್ಟಿನಿಂದ ಹೊರಬರಲು ಪರದಾಡುತ್ತಿದೆ. ಹಾಗಾದರೆ ಈ ಬ್ರಿಟನ್‌ ಎಡವಿದ್ದೆಲ್ಲಿ ? ಎಂಬುದೇ ಕುತೂಹಲಕ್ಕೆ ಕಾರಣವಾಗಿದೆ.

ಜನವರಿ ತಿಂಗಳ ಪ್ರಾರಂಭದ ವೇಳೆಗೆ ಕೋವಿಡ್‌-19 ಕುರಿತಾದ ಕಳವಳದ ಸುದ್ದಿಗಳು ಬಿತ್ತರವಾಗಲು ಶುರುವಾಗಿತ್ತು. ಚೀನದಲ್ಲಿನ ಸಾವು-ನೋವಿನ ಸುದ್ದಿಗಳು ಕಿವಿಗೆ ಬಂದು ಅಪ್ಪಳಿಸಿದ್ದವು. ವಿಶ್ವದಲ್ಲಿ ಮಾರಣಾಂತಿಕ ಪಿಡುಗು ಕುರಿತಾದ ಚರ್ಚೆಗಳು ಪ್ರಾರಂಭಗೊಂಡು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವತ್ತ ಇತರೆ ದೇಶಗಳು ದಾಪುಗಾಲಿಡುತ್ತಿದ್ದರೆ, ಬ್ರಿಟನ್‌ ಮಾತ್ರ ತಲೆ ಕೆಡಿಸಿಕೊಂಡಿರಲಿಲ್ಲ.

ಬ್ರೆಕ್ಸಿಟ್‌ ಒಕ್ಕೂಟದ ಮೋಜಿನ ಪಾರ್ಟಿ ಆಯೋಜನೆಯಲ್ಲಿ ಮುಳುಗಿದ್ದ ಬ್ರಿಟನ್‌, ದೇಶದ ಸ್ಥಿತಿಗತಿಗಳನ್ನು ಅವಲೋಕಿಸಿ, ಬಿಕ್ಕಟ್ಟಿನ ಪರಿಹಾರಕ್ಕಾಗಿ ರೂಪುರೇಷೆ ಮಾಡಲೇ ಇಲ್ಲ. ಸಾಮಾಜಿಕ ಆರೋಗ್ಯಕ್ಕಿಂತ ರಾಜಕೀಯ ಬೆಳವಣಿಗೆಯತ್ತ ಮನಸ್ಸು ಹರಿದಿತ್ತು. ಆಗ ಕೊಂಚ ವಿಳಂಬ ಮಾಡಿದ ಪರಿಣಾಮ ಈಗ ಸಮಸ್ಯೆ ಮುಗಿಲೆತ್ತರಕ್ಕೆ ಬೆಳೆದಿದೆ.

ಕೂಗಿ ಹೇಳಿದರೂ ಕೇಳಲಿಲ್ಲ
ಲಂಡನ್‌ನ ಇಂಪೀರಿಯಲ್‌ ಕಾಲೇಜಿನ ಜಾಗತಿಕ ಆರೋಗ್ಯ ಪ್ರಾಧ್ಯಾಪಕ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ರಾಯಭಾರಿ ಡೇವಿಡ್‌ ನಬರೋ ಹೇಳಿರುವ ಪ್ರಕಾರ ಎಲ್ಲ ದೇಶದ ಸರಕಾರಗಳಿಗೆ ಜನವರಿ ಅಂತ್ಯದ ವೇಳೆಗೆ ಕೋವಿಡ್‌-19 ಮುಂದಿನ ದಿನಗಳಲ್ಲಿ ಗಂಭೀರವಾದ ಸಮಸ್ಯೆಗಳನ್ನು ಸೃಷ್ಟಿಸಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಸಿತ್ತು. ಜತೆಗೆ ಜನವರಿ 30ರಂದು ಕೋವಿಡ್‌-19 ಅನ್ನು ಜಾಗತಿಕ ಪಿಡುಗು ಎಂದು ಘೋಷಿಸಿತು. ಆದರೆ ವಿಶ್ವಸಂಸ್ಥೆ ಎಚ್ಚರಿಕೆ ಕೂಗು ಬ್ರಿಟನ್‌ ಕಿವಿಗೆ ಕೇಳಲೇ ಇಲ್ಲ . ಪ್ರಧಾನಿ ಜಾನ್ಸನ್‌ ಬ್ರೆಕ್ಸಿಟ್‌ ಒಕ್ಕೂಟ ಮತ್ತು ಆರ್ಥಿಕತೆಯ ಕುರಿತಾದ ಚರ್ಚೆಗಳಲ್ಲಿ ಮುಳುಗಿದ್ದರು. ಮುಕ್ತ ವ್ಯಾಪಾರದತ್ತ ಒಲವು ತೋರುತ್ತಿದ್ದ ಅವರಿಗೆ ಸೋಂಕಿನ ತೀವ್ರತೆ ಅರಿವಾಗಲೇ ಇಲ್ಲ.

ನಿಯಮಗಳನ್ನು ಗೌರವಿಸಲೇ ಇಲ್ಲ
ಮಾರ್ಚ್‌ ಆರಂಭದ ವೇಳೆಗೆ ಅನೇಕ ದೇಶಗಳಲ್ಲಿ ಕೋವಿಡ್‌-19ನ ಭೀಕರತೆ ಅರಿವಾಗ ತೊಡಗಿತ್ತು. ಪ್ರಾರಂಭಿಕ ಹಂತದಲ್ಲೇ ಎಚ್ಚೆತ್ತ ದಕ್ಷಿಣ ಕೊರಿಯಾ, ಸಿಂಗಾಪುರ, ಜರ್ಮನಿ ಮುಂತಾದ ಕೆಲ ರಾಷ್ಟ್ರಗಳು ಸೋಂಕು ನಿಯಂತ್ರಿಸಲು ತೊಡಗಿದವು. ಆದರೆ ಆ ವೇಳೆಗಾಗಲೇ ಅಮೆರಿಕ, ಇಟಲಿ, ಸ್ಪೇನ್‌, ದೇಶಗಳಲ್ಲಿ ಸೋಂಕಿನ ಆರ್ಭಟ ಮುಗಿಲು ಮಟ್ಟಿತ್ತು. ಇದನ್ನೂ ಕಂಡೂ ಬ್ರಿಟನ್‌ನಲ್ಲಿ ಯಾವುದೇ ಪರಿಣಾಮಕಾರಿ ನಿಯಮಗಳನ್ನು ಜಾರಿ ಮಾಡಲೇ ಇಲ್ಲ. ಲಾಕ್‌ಡೌನ್‌ ನಿಯಮಗಳನ್ನು ಜನರು ಪಾಲಿಸುವುದಿಲ್ಲ ಎಂದು ತನ್ನಷ್ಟಕ್ಕೆ ತಾನೇ ನಿರ್ಧರಿಸಿದ ಸರಕಾರವು, ಸಾಮೂಹಿಕ ಕೂಟಗಳನ್ನು , ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚಲೇ ಇಲ್ಲ. ಆ ಮೂಲಕ ಸಾಮಾಜಿಕ ಅಂತರ, ಲಾಕ್‌ಡೌನ್‌ ಮುಂತಾದ ನಿಯಮಗಳನ್ನು ಗಾಳಿಗೆ ತೂರಿದ ಬ್ರಿಟನ್‌ ಮಾರ್ಚ್‌ ಮಧ್ಯಾಂತರದಲ್ಲಿ ಲಾಕ್‌ಡೌನ್‌ ನಿರ್ಧಾರ ತಳೆಯಿತು. ಸೋಂಕು ತಡೆಯುವಲ್ಲಿ ಬ್ರಿಟನ್‌ ಟ್ರಯಲ್‌ ಆ್ಯಂಡ್‌ ಎರರ್‌ ಪದ್ಧತಿ ಅನುಸರಿಸಿತು. ಜಾಗತಿಕವಾಗಿ ಆಗುತ್ತಿರುವ ಬೆಳವಣಿಗೆಗಳಿಂದ ಕಲಿತು, ತನ್ನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಆಲೋಚಿಸಲಿಲ್ಲ. ಬದಲಾಗಿ ತನ್ನದೇ ರೀತಿಯಲ್ಲಿ ಬಿಕ್ಕಟ್ಟು ಪರಿಹರಿಸಲು ಹೋಗಿ, ಜಾಗತಿಕ ಮಟ್ಟದ ಪರಿಣಿತರ ಸಲಹೆಗಳನ್ನು ತಳ್ಳಿ ಹಾಕಿತು. ಆ ಪರಿಣಾಮ ಈಗ ಅನುಭವಿಸುವಂತಾಗಿದೆ.

ಟಾಪ್ ನ್ಯೂಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.