ಮಾತಿನ ಚಿಕಿತ್ಸೆಯಿಂದ ಕಾಯಿಲೆ ವಾಸಿಯಾದೀತೆ?
Team Udayavani, Apr 27, 2020, 6:50 PM IST
ಹೊನ್ನಾವರ: ಸಕಾಲದಲ್ಲಿ ಸಾರ್ವಜನಿಕರು ಮತ್ತು ಸರ್ಕಾರ ಮುನ್ನೆಚ್ಚರಿಕೆ ವಹಿಸದ ಕಾರಣ ಮಂಗನ ಕಾಯಿಲೆ ಹೆಚ್ಚುತ್ತ ನಡೆದಿದೆ. ಆರಂಭದಲ್ಲಿ ಜನರೂ ಲಸಿಕೆ ಪಡೆಯಲು ನಿರ್ಲಕ್ಷ ವಹಿಸಿದ್ದು, ಇದೀಗ ಲಸಿಕೆ ಪಡೆದರೂ ಪ್ರಯೋಜನ ಇಲ್ಲದಂತಾಗಿದೆ. ಜೊತೆಗೆ ರೋಗ ನಿಯಂತ್ರಣಕ್ಕೆ, ಅಗತ್ಯ ಚಿಕಿತ್ಸೆಗೆ ವೈದ್ಯಕೀಯ ಸೌಲಭ್ಯಗಳು ಬೇಕಾದಷ್ಟು ಇಲ್ಲವಾಗಿದ್ದು, ಆಳುವವರ ಮಾತಿನ ಚಿಕಿತ್ಸೆಯಿಂದ ಕಾಯಿಲೆ ವಾಸಿಯಾದೀತೆ ಎಂಬ ಪ್ರಶ್ನೆ ಎದುರಾಗಿದೆ.
ಉತ್ತರಕ್ನನಡ ಮತ್ತು ಸಾಗರ, ಶಿವಮೊಗ್ಗಾ ಗಡಿಭಾಗದ ಜನ ಮಂಗನಿಂದ ಬಚ್ಚಿಟ್ಟುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಈಗ ಮಂಗನಿಂದ ಮನುಷ್ಯನನ್ನು ಬಚ್ಚಿಡುವುದು ಸಾಧ್ಯವಿಲ್ಲ. ಮನುಷ್ಯನಿಂದ ಮಂಗನನ್ನು ದೂರ ಓಡಿಸುವುದು ಆಡಳಿತದ ಕೈಯಲ್ಲಿದೆ. ಊರಿನಿಂದ ಕಾಡಿನ ತನಕವೂ ಜನವಸತಿ ಇದ್ದಲ್ಲೆಲ್ಲಾ ಮಂಗಗಳು ರೈತನ ಬಾಳೆ ಮತ್ತು ತೆಂಗನ್ನು ಸರ್ವನಾಶ ಮಾಡಿವೆ.
ತುರ್ತು ಏನೇನಾಗಬೇಕು?: ಎಲ್ಲೆಲ್ಲಿ ಮಂಗ ಸತ್ತು ಬೀಳುತ್ತದೆಯೋ ಅದನ್ನು ಕೂಡಲೇ ಸುಟ್ಟುಹಾಕಲು ಪೌರಕಾರ್ಮಿಕರಂತೆ ದುಡಿಯಬಲ್ಲ ಸಿಬ್ಬಂದಿ ಬೇಕು. ಪ್ರತ್ಯೇಕ ಪ್ರಯೋಗಾಲಯಬೇಕು. ಅರಣ್ಯ ಇಲಾಖೆ ಗಾರ್ಡ್ಗಳು ಮತ್ತು ಫಾರೆಸ್ಟರ್ಗಳನ್ನು ನೇಮಿಸಿ ಮೈಸೂರು ಪ್ರಾಂತ್ಯದಲ್ಲಿ ಆನೆ ಓಡಿಸಿದಂತೆ ಮಂಗಗಳನ್ನು ದಟ್ಟಕಾಡಿಗೆ ಓಡಿಸುವ ವ್ಯವಸ್ಥೆ ಆಗಬೇಕು. ಸರ್ಕಾರ ಮಣಿಪಾಲದಲ್ಲಿ ಉಚಿತ ಚಿಕಿತ್ಸೆಯ ವ್ಯವಸ್ಥೆ ಮಾಡಿದ್ದರೂ ನಾಲ್ಕಾರು ದಿನ ಜ್ವರ ಬಂದ ಮೇಲೆ ಹೋಗಿ ಪ್ರಯೋಜನವಿಲ್ಲ. ಜ್ವರ ಬಂದವರನ್ನು ತಕ್ಷಣ ಗುರುತಿಸಿ ಆಸ್ಪತ್ರೆಗೆ ಸಾಗಿಸಬೇಕಾಗಿದೆ. ಇದನ್ನೆಲ್ಲಾ ಮಾಡಲು ಮಂಗನ ಕಾಯಿಲೆ ವಿಭಾಗಕ್ಕೆ ಸಿಬ್ಬಂದಿ, ಹಣ, ವಾಹನ ಬೇಕು. ಮುಖ್ಯಮಂತ್ರಿವರೆಗೆ ಹೋಗಿ ಮಂಗನ ಕಾಯಿಲೆ ಕುರಿತು ಉಚಿತ ಸಲಹೆ ನೀಡಿ ಜಿಲ್ಲೆಗೆ ಬಂದು ಪತ್ರಿಕಾ ವರದಿ ನೀಡುವ ರಾಜಕಾರಣಿಗಳು ಈ ವ್ಯವಸ್ಥೆ ಮಾಡಿಸಿಕೊಡಬೇಕಾಗಿದೆ.
ಒಂದೇ ಎರವಲು ಆಫೀಸು! ; ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ಸಂಬಂ ಧಿಸಿ ಒಂದೇಎರವಲು ಆಫೀಸಿದೆ, ಒಬ್ಬರೇ ವೈದ್ಯರಿದ್ದಾರೆ. ಮಂಗನ ಕಾಯಿಲೆ ವಿರುದ್ಧ ಯುದ್ಧ ಸಾರಲು ಉಣ್ಣಿ ಸಂಗ್ರಹಿಸುವ ಸಿಬ್ಬಂದಿಯಿಲ್ಲ, ಟೈಪಿಸ್ಟ್ಗಳಿಲ್ಲ, ಸರಿಯಾದ ವಾಹನವಿಲ್ಲ. ಒಂದಿಬ್ಬರು ಸಿಬ್ಬಂದಿಯೊಂದಿಗೆ ಮೂರ್ನಾಲ್ಕು ತಾಲೂಕು ಓಡಾಡುತ್ತ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿ ನೆರವಿನಿಂದ ಮಂಗನ ಕಾಯಿಲೆ ತಡೆಯುವುದು ಅಸಾಧ್ಯ.
ಎಚ್ಚರ ವಹಿಸದ ಸಾರ್ವಜನಿಕರು ; ಮಳೆಗಾಲದಲ್ಲಿ ನಿರಪಾಯಕಾರಿಯಾದ ಉಣ್ಣಿಗಳನ್ನು ದನಗಳ ಮೈಯಿಂದ ನಿವಾರಿಸಲು ಸರ್ಕಾರ ಔಷಧ ಕೊಟ್ಟರೂ ಅದನ್ನು ಸಮರ್ಪಕವಾಗಿ ಜನ ಬಳಸಿಕೊಳ್ಳಲಿಲ್ಲ. ಮಂಗನ ಕಾಯಿಲೆ ಸಂಭವನೀಯ ಪ್ರದೇಶದಲ್ಲಿ ನೀಡಲೆಂದು 1.5 ಲಕ್ಷ ಡೋಸ್ ಲಸಿಕೆ ತರಿಸಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಟ್ಟು ಬಂದು ಚುಚ್ಚುಮದ್ದು ಪಡೆಯಿರಿ ಎಂದರೆ ಬಂದವರು 30,000 ಜನ ಮಾತ್ರ. ನಂತರ ಕಾಡಿನಲ್ಲಿ ಓಡಾಡುವಾಗ ಎಚ್ಚರ ವಹಿಸಿ ಎಂದು ಡಿಎಂಪಿ ತೈಲ ಹಂಚಿದರೂ ಜನ ಹಚ್ಚಿಕೊಳ್ಳಲಿಲ್ಲ. ಈಗ ಉಣ್ಣಿ ನಿವಾರಣೆ ಸಾಧ್ಯವಿಲ್ಲ, ಚುಚ್ಚುಮದ್ದು ಪರಿಣಾಮಕಾರಿಯಲ್ಲ.
-ಜೀಯು ಹೊನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
MUST WATCH
ಹೊಸ ಸೇರ್ಪಡೆ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ