ಬೆಳೆಹಾನಿ ವರದಿ ಸಲ್ಲಿಸಲು ಡಿಸಿಎಂ ಸೂಚನೆ
Team Udayavani, Apr 28, 2020, 6:11 PM IST
ಸಿರವಾರ: ತಾಲೂಕಿನಾದ್ಯಂತ ಕಳೆದ ತಿಂಗಳಿನಿಂದ ಸುರಿದ ಮಳೆ-ಗಾಳಿಗೆ ಹಾನಿಯಾದ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ನೀಡಲಾಗುವುದು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ತಾಲೂಕಿನಲ್ಲಿ ಕಳೆದ ತಿಂಗಳು ಮಳೆಯಿಂದಾಗಿ ಹಾನಿಯಾದ ಭತ್ತದ ಬೆಳೆಯ ವೀಕ್ಷಿಸಿ ಮಾತನಾಡಿದ ಅವರು, ಕಳೆದ ತಿಂಗಳಿಂದ ಆಲಿಕಲ್ಲು ಮಳೆಯಾಗಿ ಭತ್ತವು ಹೆಚ್ಚಿನ ಪ್ರಮಾಣದಲ್ಲಿ ನಾಶವಾಗಿರುವುದು ಕಂಡುಬರುತ್ತಿದೆ. ತಾಲೂಕಿನಾದ್ಯಂತ 1200ಕ್ಕೂ ಹೆಚ್ಚಿನ ಎಕರೆ ಹಾನಿಯಾದ ವರದಿಯಿದೆ. ಇದಕ್ಕೆ ಸಂಬಂಧಪಟ್ಟಂತೆ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡುತ್ತೇವೆ. ಸರ್ಕಾರವು ಕೋವಿಡ್ 19 ನಿಯಂತ್ರಣದಿಂದಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದರು.
ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಶಿವನಗೌಡ ನಾಯಕ, ಡಾ.ಶಿವರಾಜ ಪಾಟೀಲ್, ಬಸವನಗೌಡ ತುರವಿಹಾಳ, ಜಿಲ್ಲಾಧಿಕಾರಿ ವೆಂಕಟೇಶ ಕುಮಾರ, ಸಹಾಯಕ ಆಯುಕ್ತ ಸಂತೋಷ ಕಾಮೇಗೌಡ, ಅಬೀದ್, ಕೆ.ಶ್ರುತಿ, ಹುಸೇನ್ ಬಾಷಾ ಮುಖಂಡರಾದ ಜೆ.ಶರಣಪ್ಪಗೌಡ, ಗಂಗಾಧರ ನಾಯಕ, ಬಸವನಗೌಡ ಬ್ಯಾಗವಾಟ ಇತರರಿದ್ದರು.