ಮಶಿಹಾಳದ ಈ ಕುಟುಂಬಕ್ಕೆ ಗ್ಯಾಂಗ್ರಿನ್ ಕಾಟ!
Team Udayavani, May 1, 2020, 11:43 AM IST
ದೇವದುರ್ಗ: ಗ್ಯಾಂಗ್ರಿನ್ ಸಮಸ್ಯೆಯಿಂದ ಬಳಲುತ್ತಿರುವ ಯುವಕರು.
ದೇವದುರ್ಗ: ತಾಲೂಕಿನ ಮಶಿಹಾಳ ಗ್ರಾಮದ ಪೂಜಾರಿ ಕುಟುಂಬ ಗ್ಯಾಂಗ್ರಿನ್ ಕಾಟದಿಂದ ನಲುಗುತ್ತಿದೆ. ಒಂದೇ ಕುಟುಂಬದ ಮೂವರ ಕಾಲಿಗೆ ಗ್ಯಾಂಗ್ರಿನ್ ರೋಗ ಅಂಟಿಕೊಂಡಿದೆ. ಮಗಳು ಸಹ ಮಾತು ಬಾರದ ಮೂಕಿ. ಹೀಗಾಗಿ ನಾಲ್ವರ ಜವಾಬ್ದಾರಿ ತಂದೆ ಮಾರ್ಕಂಡಯ್ಯ ಅವರ ಹೆಗಲಿಗೆ ಬಿದ್ದಿದೆ. ಮೂರ್ನಾಲ್ಕು ಎಕರೆ ಜಮೀನು ಇದೆಯಾದರೂ ಒಣ ಭೂಮಿ ಮಳೆ ಬಂದಾಗ ಮಾತ್ರ ಬೆಳೆ ಸಿಗುತ್ತದೆ.
ಕುಟುಂಬಕ್ಕೆ ಪಡಿತರ ಕಾರ್ಡ್ ಇದೆ. ಆದರೆ ಆಧಾರ್ ಲಿಂಕ್ ಆಗದೇ ಇರುವುದರಿಂದ ಪಡಿತರ ಸಿಗುತ್ತಿಲ್ಲ. ಸರಕಾರದ ಕೊಡುವ ತಿಂಗಳ ಮಾಸಾಶನ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಆದರೆ ಕೆಲ ಸಮಸ್ಯೆ ಹಿನ್ನೆಲೆಯಲ್ಲಿ ಅರ್ಜಿ ತಿರಸ್ಕೃತಗೊಂಡಿದೆ. ಸಹಾಯಕ್ಕಾಗಿ ಕೈಚಾಚಿದರೂ ಸೌಲಭ್ಯ ಮಾತ್ರ ಸಿಗುತ್ತಿಲ್ಲ. ಮೂವರು ಮಕ್ಕಳ ಆರೋಗ್ಯದ ಸಂಕಷ್ಟ ಮಧ್ಯೆ ತಂದೆ ಜೀವನ ದೂಡುತ್ತಿದ್ದಾರೆ.
ಶಾಸಕ ಕೆ. ಶಿವನಗೌಡ ನಾಯಕ ಪೂಜಾರಿ ಕುಟುಂಬಕ್ಕೆ ಸರಕಾರದ ಸೌಲಭ್ಯ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಪಾಲನೆಯಾಗುತ್ತಿಲ್ಲ. ಹಾಗಾಗಿ ಕುಟುಂಬ ಕಣ್ಣೀರಿನಲ್ಲೇ ಕೈತೊಳೆಯುವಂತಾಗಿದೆ. ಮಕ್ಕಳೇ ತಂದೆಗೆ ಆಸರೆ ಆಗಬೇಕು. ಆದರೆ ತಂದೆಯೇ ಮಕ್ಕಳ ಜೋಪಾನ ಮಾಡುವಂತ ನರಕ ಸ್ಥಿತಿ ಬಂದಿದೆ. ಸರಕಾರದ ಸೌಲಭ್ಯ ಒದಗಿಸಲು ತಾಲೂಕು ಆಡಳಿತ ಮುಂದಾಗುವುದೇ ಎಂಬ ಪ್ರಶ್ನೆ ಎದುರಾಗಿದೆ. ಕೊರೊನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಅಕ್ಕಿ, ಬೇಳೆ ಸೇರಿ ಆಹಾರ ಪದಾರ್ಥ ವಿತರಿಸಿ ನೆರವಿಗೆ ನಿಂತಿವೆ.
ನಾಗರಾಜ ತೇಲ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಸ್ಟೇಟ್ಸ್ ಮ್ಯಾನ್ ಅಲ್ಲ, ಸೇಲ್ಸ್ಮ್ಯಾನ್: ಬಿ.ಕೆ ಹರಿಪ್ರಸಾದ್
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ