ಸಾರ್ವಜನಿಕ ಗ್ರಂಥಾಲಯ ಈಗ ಸ್ಮಾರ್ಟ್‌


Team Udayavani, May 2, 2020, 5:25 AM IST

ಸಾರ್ವಜನಿಕ ಗ್ರಂಥಾಲಯ ಈಗ ಸ್ಮಾರ್ಟ್‌

ಉಡುಪಿ: ಲಾಕ್‌ಡೌನ್‌ನಿಂದಾಗಿ ಎಲ್ಲ ಕೆಲಸ ಕಾರ್ಯಗಳು ಇ-ತಂತ್ರಜ್ಞಾನದ ಮೂಲಕ ನಡೆಯುತ್ತಿವೆ. ಗ್ರಂಥಾಲಯವೂ ಮುಚ್ಚಿರುವುದ ರಿಂದ ಸಾರ್ವಜನಿಕರು ಸಹಿತ ವಿದ್ಯಾರ್ಥಿಗಳಿಗೆ ಅನು ಕೂಲವಾಗಲು ಇ -ಲೈಬ್ರರಿಗೆ ಒತ್ತು ನೀಡಲಾಗಿದೆ.

ಇ-ಲೈಬ್ರರಿಯ ಮೂಲಕ ಸಾವಿರಾರು ಪಠ್ಯ ವಿಷಯ, ಲ್ಯಾಬ್‌ಗಳ ಆಡಿಯೋ ವಿಡಿಯೋ, ಜರ್ನಲ್‌ ಮೊದಲಾದ ಸೌಲಭ್ಯ ಸಿಗುತ್ತಿವೆ. ಹೆಚ್ಚಿನ ವಿದ್ಯಾರ್ಥಿಗಳು ಈ ಸರಕಾರಿ ಇ-ಲೈಬ್ರರಿ ಆ್ಯಪ್‌ ಮತ್ತು ವೆಬ್‌ಸೈಟ್‌ ಮೂಲಕ ಮಾಹಿತಿ ಪಡೆಯುತ್ತಿದ್ದಾರೆ.

ಕರ್ನಾಟಕ ಡಿಜಿಟಲ್‌ ಪಬ್ಲಿಕ್‌ ಲೈಬ್ರರಿ ಎ. 29ರ ವರದಿ ಪ್ರಕಾರ ಈಗಾಗಲೇ ರಾಜ್ಯದಲ್ಲಿ 89,239 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ದ.ಕ.ದಲ್ಲಿ 1,807 ಮತ್ತು ಉಡುಪಿ ಜಿಲ್ಲೆಯಲ್ಲಿ 605 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ.

ನೋಂದಣಿ ಹೇಗೆ?
www.karnatakadigitalpubliclibrary.org ಮೂಲಕ ಡಿಪಾರ್ಟ್‌ಮೆಂಟ್‌ ಆಫ್ ಪಬ್ಲಿಕ್‌ ಲೈಬ್ರರಿ ಪೇಜ್‌ಗೆ ಹೋಗಬೇಕು. ಅಲ್ಲಿ ಲಾಗಿನ್‌ ಅಥವಾ ರಿಜಿಸ್ಟರ್‌ ಬಟನ್‌ ಕ್ಲಿಕ್‌ ಮಾಡಬೇಕು. ಕ್ರಿಯೇಟ್‌ ನ್ಯೂ ಆಯ್ಕೆ ಮಾಡಿ, ಹೆಸರು ಮೊಬೈಲ್‌ ಸಂಖ್ಯೆ, ಇ-ಮೇಲ್‌ ಐಡಿ ಮತ್ತು ರಾಜ್ಯದ ವಿವಿಧ ವ್ಯಾಪ್ತಿಯ ಗ್ರಂಥಾಲಯಗಳಲ್ಲಿ ನಮ್ಮ ಜಿಲ್ಲೆಯ ಗ್ರಂಥಾಲಯವನ್ನು ಆಯ್ಕೆ ಮಾಡಿ ಲಾಗಿನ್‌ ಆಗಬೇಕು. ಅನಂತರ ನಾವು ನೀಡಿದ ನಂಬರ್‌ಗೆ ಒಟಿಪಿ ಬಂದು ಬಳಿಕ ಪಾಸ್‌ವರ್ಡ್‌ ಹಾಕಿದಾಗ ಲಾಗಿನ್‌ ಆಗುತ್ತದೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲೂ ಇ-ಸಾರ್ವಜನಿಕ ಗ್ರಂಥಾಲಯ ಲಭ್ಯವಿದ್ದು ಅದನ್ನು ನೇರವಾಗಿ ಡೌನ್‌ಲೋಡ್‌ ಮಾಡಬಹುದಾಗಿದೆ.

ಸಾವಿರಾರು ಆಯ್ಕೆ
35,500 ಇ-ಪುಸ್ತಕ, 4,800 ವಿಡಿಯೋ ಮಾದರಿಯ ಲ್ಯಾಬ್‌, ಇತರ ಪಠ್ಯ ವಿಷಯ, 59,980 ಜರ್ನಲ್‌, 1,112 ಕಿಡ್‌ ಜೋನ್‌ಗಳ ಮಾಹಿತಿಗಳ ಭಂಡಾರ ಲಭ್ಯವಿದೆ.

ಆರ್ಟ್‌ ಆ್ಯಂಡ್‌ ಹ್ಯುಮಾನಿಟಿ ಸಂಬಂಧಿಸಿದಂತೆ ಸಮಾಜಶಾಸ್ತ್ರ, ಇತಿಹಾಸ, ಮನಃಶಾಸ್ತ್ರ, ರಾಜ್ಯಶಾಸ್ತ್ರ, ಲೀಗಲ್‌ ಸ್ಟಡೀಸ್‌, ಪತ್ರಿಕೋದ್ಯಮ ವಿಷಯಗಳು, ಕ್ಲಾಸಿಕ್‌ ಆ್ಯಂಡ್‌ ಲಿಟರೇಚರ್‌ನಲ್ಲಿ ಪ್ರಬಂಧ, ಕಾದಂಬರಿ, ಸಾಹಿತ್ಯ ಕೃತಿ, ವಿಮರ್ಶೆ, ವ್ಯಾಕರಣಗಳು ಲಭ್ಯವಿವೆ.

ಕಾಮರ್ಸ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌ನಲ್ಲಿ ಬ್ಯಾಂಕಿಂಗ್‌, ಮಾರ್ಕೆಟ್‌ -ಮ್ಯಾನೇಜ್‌ಮೆಂಟ್‌, ಇನ್ಶೂರೆನ್ಸ್‌, ಇಕಾನಮಿ, ಫಿನಾನ್ಶಿಯಲ್‌, ಅಕೌಂಟ್‌ ಮೊದಲಾದ ವಿಷಯ. ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿಯಲ್ಲಿ ಕೆಮಿಸ್ಟ್ರಿ, ಫಿಸಿಕ್ಸ್‌, ಮ್ಯಾಥಮ್ಯಾಟಿಕ್ಸ್‌, ಮೆಡಿಸಿನ್‌, ಹೆಲ್ತ್‌ ಸೈನ್ಸ್‌, ಕಂಪ್ಯೂಟರ್‌ ಸೈನ್ಸ್‌, ಐಟಿ ವಿಷಯ ಲಭ್ಯ.

ಉಳಿದಂತೆ ಸಿಮ್ಯುಲೇಶನ್‌ ಲ್ಯಾಬ್‌, ಮ್ನಾಗಜಿನ್‌, ನ್ಯೂಸ್‌ ಪೇಪರ್‌ಗಳು ಹೀಗೆ ಸಾವಿರಕ್ಕೂ ಹೆಚ್ಚಿನ ಪುಸ್ತಕಗಳು, ವಿಡಿಯೋ ರೀತಿಯ ಮಾಹಿತಿಗಳು ಲಭ್ಯವಿವೆ. ಜತೆಗೆ ಸಿಇಟಿ, ನೆಟ್‌, ಯುಪಿಎಸ್‌ಸಿ, ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಯ ವಿವಿಧ ಪುಸ್ತಕಗಳು, ಹಳೆಯ ಪ್ರಶ್ನೆಪತ್ರಿಕೆಗಳು ಲಭ್ಯವಿವೆ.ಇಂಗ್ಲಿಷ್‌ ಹಿಂದಿ, ಕನ್ನಡ, ಮರಾಠಿ, ಸಂಸ್ಕೃತ, ತಮಿಳು, ತೆಲುಗು ಉರ್ದು ಹಿಂದಿ ಹೀಗೆ 9 ಬಗೆಯ ಭಾಷೆಗಳ ಆಯ್ಕೆ ಇದೆ.

ಉತ್ತಮ ಅವಕಾಶ
ಈ ಲಾಕ್‌ಡೌನ್‌ ಸಮಯದಲ್ಲೂ ಇ-ಲೈಬ್ರರಿ ಬಳಸಿ ಬೇಕಾದ ಮಾಹಿತಿಯನ್ನು ಪಡೆಯಲು ಸಾಧ್ಯವಿದೆ. ಪರೀಕ್ಷೆಗೆ ತಯಾರಾಗುತ್ತಿರುವ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಪುಸ್ತಕಗಳು ಲಭ್ಯವಿದ್ದು, ಪ್ರಯೋಜನ ಪಡೆದುಕೊಳ್ಳಬಹುದು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವವರಿಗೂ ಬೇಕಾದ ಪುಸ್ತಕಗಳು ಲಭ್ಯವಿವೆ. ಮೊಬೈಲ್‌ ಮೂಲಕ ಸುಲಭವಾಗಿ ಎಲ್ಲ ಮಾಹಿತಿ ಪಡೆಯಬಹುದು.
-ನಳಿನಿ ಜಿ.,
ಮುಖ್ಯ ಗ್ರಂಥಾಲಯ ಅಧಿಕಾರಿ,
ಜಿಲ್ಲಾ ಕೇಂದ್ರ ಗ್ರಂಥಾಲಯ, ಉಡುಪಿ.

ಟಾಪ್ ನ್ಯೂಸ್

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.