ಭೂಸ್ವಾಧೀನವೂ ಇಲ್ಲ, ಪರಿಹಾರವೂ ಇಲ್ಲದೆ ಸಂಕಷ್ಟಕ್ಕೀಡಾದ ಸಾಂತೂರಿನ ದಲಿತ ಕುಟುಂಬ
Team Udayavani, May 5, 2020, 5:50 AM IST
ಪಡುಬಿದ್ರಿ: ಯುಪಿಸಿಎಲ್ ವಿದ್ಯುತ್ ಸ್ಥಾವರದ ಎರಡನೇ ಹಂತದ ವಿಸ್ತರಣೆಗಾಗಿ ಭೂಸ್ವಾಧೀನಗೊಳ್ಳುವ ನಿರೀಕ್ಷೆ ಯಲ್ಲಿದ್ದ ಸಾಂತೂರು ಗ್ರಾಮದ ದಲಿತ ಕುಟುಂಬವೊಂದು ಆತಂಕದಲ್ಲೇ ದಿನ ದೂಡುತ್ತಿದೆ.
ಸಾಂತೂರು ಗುರುವ ಮುಖಾರಿ ಅವರ ಪುತ್ರರಾದ ಸದಾನಂದ, ಉದಯ ಮುಖಾರಿ ಹಾಗೂ ಅವರ ಕುಟುಂಬ ಸಂಕಷ್ಟದಲ್ಲಿದ್ದು, ಕುಸಿದ ಮನೆ ದುರಸ್ತಿಯೂ ಮಾಡಲಾಗದೆ, ಹೊಸದು ಕಟ್ಟಲೂ ಆಗದೆ ಇದ್ದಾರೆ.
ಆಗಿದ್ದೇನು?
ದಿ| ಗುರುವ ಮುಖಾರಿ ಅವರು ಎಲ್ಲೂರು ಗ್ರಾಮದ ಕುಕ್ಕಿಕಟ್ಟೆ ಎಂಬಲ್ಲಿ ಜಮೀನು ಹೊಂದಿದ್ದರು. ಯುಪಿಸಿಎಲ್ ಯೋಜನೆಗಾಗಿ 2015ರಲ್ಲಿ ಭೂಸ್ವಾಧೀನ ನಡೆದಿತ್ತು. ಇವರ ಸುತ್ತಲಿನ ಜಮೀನು ಭೂಸ್ವಾಧೀನಗೊಂಡಿದೆ. ಆದರೆ ಗುರುವ ಮುಖಾರಿ ಜಮೀನು ಹಾಗೆಯೇ ಇದೆ. ಭೂಸ್ವಾಧೀನ ಬಗ್ಗೆ ಅಂತಿಮ ನೋಟಿಸ್ ಕೆಐಎಡಿಬಿಯಿಂದಲೂ ಆಗಿಲ್ಲ. ಹಾಗಾಗಿ ಯುಪಿಸಿಎಲ್ ಕಡೆಯಿಂದ ಪರಿಹಾರ ನೀಡಲಾಗಿಲ್ಲ. ಮನೆಯೂ ಬಿದ್ದುದರಿಂದ ಕುಟುಂಬ ಅತಂತ್ರ ಸ್ಥಿತಿಗೆ ತಲುಪಿದೆ.
ಸದಾನಂದ ಅವರು ರಿಕ್ಷಾ ಚಾಲಕರು. ಲಾಕ್ಡೌನ್ನಿಂದಾಗಿ ದುಡಿಯುವುದೂ ಸಾಧ್ಯವಿಲ್ಲದಾಗಿದೆ. “ಒಂದು ವೇಳೆ ಕಂಪೆನಿಯವರಿಗೆ ಭೂಮಿ ಬೇಡವಾದರೆ ವಾಪಸು ನೀಡಲಿ. ಪರಿಹಾರಕ್ಕಾಗಿ ಅಲೆದು ಇದ್ದ ಹಣವೂ ಖರ್ಚಾಗಿದೆ. ನಮಗೆ ಜಿಲ್ಲಾಧಿಕಾರಿ ಅಥವಾ ಸಮಾಜ ಕಲ್ಯಾಣ ಇಲಾಖೆ ಸಹಾಯವನ್ನು ಮಾಡಬೇಕಿದೆ’ ಎಂದು ಸದಾನಂದ ಅವರು ಅಳಲು ತೋಡಿಕೊಂಡಿದ್ದಾರೆ.
ಮಳೆಗಾಲದ ಭಯ
ಈ ಮೊದಲು ಪರಿಹಾರ ಹಣ ಸಿಕ್ಕರೆ ಹೊಸ ಮನೆ ಕಟ್ಟಿಕೊಳ್ಳುವುದು ಅಥವಾ ಈಗಿದ್ದ ಮನೆ ದುರಸ್ತಿಗೆ ತೀರ್ಮಾನಿಸಲಾಗಿತ್ತು. ಇತ್ತೀಚಿನ ಮಳೆಗೆ ಮನೆ ಛಾವಣಿ ಕುಸಿದಿದ್ದು, ಪರಿಸ್ಥಿತಿ ಮತ್ತಷ್ಟು ಕಷ್ಟಕರವಾಗಿದೆ. ರಿಪೇರಿಯಾಗದಿದ್ದರೆ ಮಳೆಗಾಲ ಕಷ್ಟಕರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಅಪಘಾತ
MUST WATCH
ಹೊಸ ಸೇರ್ಪಡೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ