ಲಾಕ್ ಡೌನ್ ಮುಗಿಸಿ ಅಂಗಡಿ ಬಾಗಿಲು ತೆರೆದ ಮಾಲೀಕನಿಗೆ ಇದನ್ನು ಕಂಡು ಅಚ್ಚರಿ!
Team Udayavani, May 5, 2020, 7:12 AM IST
ಕಣ್ಣೂರು: ಲಾಕ್ಡೌನ್ ಹೇರಿದ್ದ ಕಾರಣ ಒಂದು ತಿಂಗಳ ಕಾಲ ಮುಚ್ಚಲಾಗಿದ್ದ ಆಭರಣ ಅಂಗಡಿಯನ್ನು ತೆರೆದ ಮಾಲೀಕರು ಎದುರಾದ ಮೊದಲ ಗ್ರಾಹಕರನ್ನು ನೋಡಿ ಬೆಚ್ಚಿದ್ದಾರೆ.
ಪಯ್ಯನೂರ್ನ ಸಜಿತ್ ಎಂಬವರ ಆಭರಣದ ಅಂಗಡಿಯಲ್ಲಿ ಹಳೆಯ ವಸ್ತುಗಳನ್ನು ಇರಿಸಿದ್ದ ಜಾಗ ದಲ್ಲಿ 3 ಮೀಟರ್ ಉದ್ದದ ಹೆಬ್ಟಾವು ತನ್ನ 20 ಮೊಟ್ಟೆಗಳ ಜೊತೆ ಆಶ್ರಯ ಪಡೆದುಕೊಂಡಿತ್ತು.
ಬಾಗಿಲು ತೆರೆದು ಹೆಬ್ಟಾವನ್ನು ನೋಡಿದಾಗ ಒಮ್ಮೆಲೆ ಕಿರುಚಿಕೊಂಡೆ, ಬಳಿಕ ಸಾವರಿಸಿಕೊಂಡು ಹಾವು ಹಿಡಿಯುವವರಿಗೆ ಕರೆ ಮಾಡಿದೆ. ಅವರು ಬಂದು ಹಾವು ಹಿಡಿದರು. ಹಾವು ಮತ್ತು ಮೊಟ್ಟೆಗಳನ್ನು ಅವರು ಒಯ್ದಿದ್ದಾರೆ.
ಮೊಟ್ಟೆಯಿಂದ ಮರಿ ಹೊರಬರವವರೆಗೂ ಅವರು ಅವನ್ನು ರಕ್ಷಿಸುತ್ತಾರೆ ಎಂದು ಅಂಗಡಿ ಮಾಲಿಕ ಸಜಿತ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ