ಜಮೀನಿನಲ್ಲೇ ನಾಶವಾದ ಟೊಮೆಟೋ
Team Udayavani, May 9, 2020, 4:43 AM IST
ಪಾತಪಾಳ್ಯ: ಲಾಕ್ಡೌನ್ನಿಂದ ರೈತ ತಾನು ಬೆಳೆದ ಟೊಮೊಟೋ ಬೆಳೆಗೆ ಸರಿಯಾದ ಬೆಲೆಗೆ ಸಿಗದೆ ಲಕ್ಷಾಂತರ ರೂ. ನಷ್ಟ ಅನುಭವಿಸಬೇಕಾಗಿದೆ.
ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯದ ಗಂಗಮ್ಮನ ಕಾಲುವೆ ಬಳಿ ಸೀಗಲಪಲ್ಲಿ ಗ್ರಾಮದ ಬಿ.ವಿ.ವೆಂಕಟರವಣಾರೆಡ್ಡಿ 3 ಎಕರೆ ಜಮೀನಿನಲ್ಲಿ 5 ಲಕ್ಷ ರೂ. ಖರ್ಚು ಮಾಡಿ ಟೊಮೊಟೋ ಬೆಳೆ ಬೆಳೆದಿದ್ದರು. ಕಳೆದ 40 ದಿನಗಳಿಂದ ಲಾಕ್ಡೌನ್ ಇದ್ದುದ್ದರಿಂದ ಟೊಮೊಟೋ ಬೆಳೆ ಮಾರು ಕಟ್ಟೆಗೆ ಸಾಗಾಟ ಮಾಡದೆ ಜಮೀನಿನಲ್ಲಿ ಬಿಡಬೇಕಾದಂತಹ ಪರಿಸ್ಥಿತಿ ಏರ್ಪಟ್ಟು ಸಾಕಷ್ಟು ನಷ್ಟ ಅನುಭವಿಸಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸರ್ಕಾರ ಟೊಮೊಟೋ ಬೆಳೆ ಬೆಳೆದ ರೈತನಿಗೆ ಸಹಾಯಹಸ್ತ ಚಾಚಿದರೆ ಸ್ವಲ್ಪ ಮಟ್ಟಿಗಾದರೂ ಸಂಕಷ್ಟದಿಂದ ಹೊರಬರಲು ಸಾಧ್ಯ.