ಕ್ವಾರಂಟೈನ್ಗೆ ವಿರೋಧ ಬೇಡ
Team Udayavani, May 9, 2020, 5:28 AM IST
ನೆಲಮಂಗಲ: ವಿದೇಶದ ಕನ್ನಡಿಗರ ಕ್ವಾರಂಟೈನ್ಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಎಲ್ಲ ಜಿಲ್ಲೆಯವರು ವಿರೋಧ ಮಾಡುತ್ತ ಹೋದರೆ ಎಲ್ಲಿ ಕ್ವಾರಂಟೈನ್ ಮಾಡುವುದು. ಈ ಬಗ್ಗೆ ಸರಕಾರ ಎಚ್ಚರಿಕೆ ವಹಿಸಿದೆ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜು ತಿಳಿಸಿದರು.
ತಾಲೂಕಿನ ಗೊಲ್ಲಹಳ್ಳಿ ಗ್ರಾಪಂನ ಮೈಲನಹಳ್ಳಿ ಗ್ರಾಮದ 40 ಬಡ ಕೂಲಿ ಕಾರ್ಮಿಕರಿಗೆ ಆಹಾರ ಕಿಟ್ ನೀಡಿ ಮಾತನಾಡಿ, ಕೋವಿಡ್ ಸಂಕಷ್ಟದಲ್ಲಿರುವ ನಮ್ಮವರನ್ನು ನಾಡಿಗೆ ಕರೆತರುವ ಕೆಲಸವನ್ನು ಎಲ್ಲರೂ ಬೆಂಬಲಿಸಬೇಕು. ಜಿಲ್ಲೆಯ ದೇವನಹಳ್ಳಿಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿರುವುದ ರಿಂದ ಸುತ್ತಮುತ್ತಲ ತಾಲೂಕಿನಲ್ಲಿ ಕ್ವಾರಂಟೈನ್ ಮಾಡುವುದರ ಬಗ್ಗೆ ತಿಳಿಸಲಾಗಿದೆ ಎಂದರು.
ವಿರೋಧ: ತಮಗೆ ಬೇಕಿರುವವರಿಗೆ ಮಾತ್ರ ಕಿಟ್ ವಿತರಿಸಿದ ಎಂಬಿಟಿ ನಾಗರಾಜ ಅವರ ವರ್ತನೆಗೆ ಕೂಲಿ ಕಾರ್ಮಿಕರು ವಿರೋಧ ವ್ಯಕ್ತಪಡಿಸಿದರು. ನಿಜವಾಗಿಯೂ ನಮಗೆ ಕಿಟ್ ಅಗತ್ಯ ವಿದೆ. ಆದರೆ ತಮಗೆ ಬೇಕಾದವರಿಗೆ ಮಾತ್ರ ಕಿಟ್ ನೀಡಲಾಗುತ್ತಿದೆ ಎಂದು ವಿರೋಧ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಂ.ವಿ.ನಾಗರಾಜ, ಮುಖಂಡ ಭವಾನಿಶಂಕರ್ ಮಂಜು ನಾಥ್, ಗೊಲ್ಲಹಳ್ಳಿ ಗ್ರಾಪಂ ಮಾಜಿ ಸದಸ್ಯ ಪ್ರಶಾಂತ್, ನಟರಾಜು, ಸಿದ್ಧಗಂಗಪ್ಪ, ಮುಖಂಡ ರಂಗನಾಥ್, ಮಾರುತಿ, ಆನಂದ್, ಅಂಜನಮೂರ್ತಿ, ರಘು,ಸೋಮಶೇಖರ್, ಮಂಜೇಶ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು