ಸರಳ ಬ್ರಹ್ಮರಥೋತ್ಸವ ಆಚರಣೆ
Team Udayavani, May 8, 2020, 6:41 PM IST
ಹೊಸಕೋಟೆ: ಪ್ರತಿ ವರ್ಷ ಬುದ್ಧ ಪೂರ್ಣಿಮೆಯಂದು ವಿಜೃಂಭಣೆಯಿಂದ ನಡೆಯುತ್ತಿದ್ದ ಅವಿಮುಕ್ತೇಶ್ವರಸ್ವಾಮಿ ಬ್ರಹ್ಮರಥೋತ್ಸವ ಈ ಬಾರಿ ದೇವಾಲಯದಲ್ಲಿ ಸರಳ ಪೂಜೆ ಮೂಲಕ ಮುಕ್ತಾಯ ಗೊಂಡಿತು. ಕೋವಿಡ್ 19 ಸೋಂಕು ತಡೆಗೆ ಲಾಕ್ಡೌನ್ ಘೋಷಣೆಯಾಗಿರುವ ಕಾರಣ ದೇವಾಲಯಗಳಲ್ಲಿ ಪೂಜೆ ರದ್ದುಗೊಳಿಸಲಾಗಿತ್ತು. ಮೇ 7ರಂದು ಬ್ರಹ್ಮರಥೋತ್ಸವ ನಿಗದಿಪಡಿಸಿದ್ದ ಕಾರಣ ಜಿಲ್ಲಾಧಿಕಾರಿ ಗಳಿಂದ ಅನುಮತಿ ಪಡೆದು ಪೂಜೆ ಸಲ್ಲಿಸಲಾಯಿತು.
ಶಾಸಕ ಶರತ್ ಬಚ್ಚೇಗೌಡ, ಬ್ರಹ್ಮರಥೋತ್ಸವ ಸಮಿತಿ ಸಂಚಾಲಕ ಎಚ್.ಜೆ. ತ್ಯಾಜ ರಾಜ್, ಮುಖಂಡ ಬಿ.ವಿ.ಬೈರೇಗೌಡ, ಬಿ.ವಿ.ರಾಜಶೇಖರಗೌಡ, ವಿಜಯಕುಮಾರ್ ಭಾಗವಹಿಸಿದ್ದರು. ಮಾಜಿ ಸಚಿವ ಎಂಟಿಬಿ ನಾಗರಾಜ್, ತಮ್ಮ ಬೆಂಬಲಿಗರೊಂದಿಗೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.