ಕೋಪ ಬಂದಾಗ ಅಡುಗೆ ಮಾಡಿ, ಊಟ ಮಾಡದೆ ಮಲಗುವವಳು ಅಮ್ಮ!

ಅಮ್ಮ ಖುಷಿಯಾಗಿದ್ದರೆ ಕುಟುಂಬ ಖುಷಿಯಾಗಿರುತ್ತದೆ. ಕುಟುಂಬ ಖುಷಿಯಾಗಿದ್ದರೆ ದೇಶ ಖುಷಿಯಾಗಿರುತ್ತದೆ.

Team Udayavani, May 10, 2020, 9:39 AM IST

ಕೋಪ ಬಂದಾಗ ಅಡುಗೆ ಮಾಡಿ, ಊಟ ಮಾಡದೆ ಮಲಗುವವಳು ಅಮ್ಮ

ಅಮ್ಮ ಎನ್ನುವುದು ಕೇವಲ ಒಂದು ಸಂಬಂಧ ಮಾತ್ರವಲ್ಲ. ಆ ಸಂಬಂಧವನ್ನು ಅಕ್ಷರಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅಮ್ಮ ಎಂದರೆ ತಾಯಿ, ಮಾತೆ, ಜನನಿ ಎಂಬ ಅರ್ಥಗಳಿರುತ್ತವೆ. ಅಮ್ಮ ಎಂದರೆ ಮಕ್ಕಳ ಪಾಲಿನ ಜೀವಸೆಲೆ. ಅಮ್ಮನ ಬಗೆಗೆ ಬರೆಯುವುದೆಂದರೆ ಅದು ನಮ್ಮೊಳಗೆ ನಾವೇ ಸಂಭ್ರಮಪಟ್ಟ ಹಾಗೆ. ನಾವು ಬೆಳೆದಂತೆಲ್ಲಾ ಅಮ್ಮ ಬೇರೆ ಬೇರೆ ರೂಪದಲ್ಲಿ ಕಾಣಿಸುತ್ತಾ ಹೋಗುತ್ತಾರೆ. ಶಾಲೆಯ ದಿನದಲ್ಲಿ ಒಂದು ತರಹ ಕಟ್ಟುನಿಟ್ಟಿನ ಅಧಿಕಾರಿ, ನಾವು ಬೆಳೆದಂತೆಲ್ಲಾ ಅಮ್ಮ ನಮಗೆ ಮಾರ್ಗದರ್ಶಿ, ಶಿಕ್ಷಕಿ ತರಹ ಕಾಣುತ್ತಾರೆ. ಕಾಲೇಜು ದಿನದಲ್ಲಿ ಗೆಳತಿ ಆಗಿ ಕಾಣುತ್ತಾರೆ.

ನಾವು ಭೂಮಿ ಮೇಲೆ ಇರುವುದಕ್ಕೆ ಕಾರಣವೇ ಅಮ್ಮ. ಭೂಮಿ ಮೇಲಿನ ಅತ್ಯಂತ ಶಕ್ತಿಯುತವಾದ ಜೀವ ಎಂದರೆ ಅದು ಅಮ್ಮ. ಅಮ್ಮ ಎಂದರೆ ಪ್ರೀತಿ, ಮಮತೆ, ಆತ್ಮಸ್ಥೈರ್ಯ. ಹೀಗೆ ಎಲ್ಲವನ್ನೂ ತುಂಬಿಕೊಂಡಿರುವ ಜಗತ್ತು.ನಾವು ಮಾಡುವ ತುಂಟತನವನ್ನು ಸಹಿಸಿಕೊಂಡು ನಮ್ಮನ್ನು ಬೆಳೆಸಿದ್ದಾರೆ. ಬೆಳೆಸಿದರೂ ಅವರ ಕಾಳಜಿ ಇನ್ನೂ ಹೋಗಿಲ್ಲ.

ಅಮ್ಮ ಎಂದರೆ ಏನೋ ಹರುಷವು.ಕಣ್ಣಿಗೆ ಕಾಣುವ ಮೊದಲ ದೇವರು ಅಮ್ಮ. ಅಮ್ಮನ ಮಡಿಲಿಗಿಂತ ಹೆಚ್ಚಿನ ರಕ್ಷಣೆ ಬೇರೆ ಎಲ್ಲೂ ಸಿಗುವುದಿಲ್ಲ. ಅಮ್ಮನ ಆಶೀವಾರ್ದವೇ ನಮಗೆ ಶ್ರೀರಕ್ಷೆ.ಮನೆಯ ಎಂತಹ ಪರಿಸ್ಥಿತಿಯಲ್ಲೂ ಸಹ ಮನೆಯನ್ನು ನಿಭಾಯಿಸುವ ಶಕ್ತಿ ಅಮ್ಮನಲ್ಲಿ ಇರುತ್ತದೆ. ಅದನ್ನು ನಾವು ಮೆಚ್ಚಲೇಬೇಕು. ಮಕ್ಕಳ ಬದುಕನ್ನು ಸುಂದರವಾಗಿ ರೂಪಿಸುವಲ್ಲಿ ಸತತವಾಗಿ ಪರಿಶ್ರಮ ಪಡುವ ಅಮ್ಮನ ಮಮತೆಗೆ ಬೆಲೆ ಕಟ್ಟಲಿಕ್ಕೆ ಆಗುವುದಿಲ್ಲ. ವೈಯಕ್ತಿಕ ಜೀವನದ ಏಳುಬೀಳುಗಳ ನಡುವೆಯೂ ಮಕ್ಕಳಿಗಾಗಿ ಎಂತಹ ತ್ಯಾಗಕ್ಕೂ ಸದಾ ಸಿದ್ದಳಿರುತ್ತಾಳೆ.

ಅಮ್ಮ ಖುಷಿಯಾಗಿದ್ದರೆ ಕುಟುಂಬ ಖುಷಿಯಾಗಿರುತ್ತದೆ. ಕುಟುಂಬ ಖುಷಿಯಾಗಿದ್ದರೆ ದೇಶ ಖುಷಿಯಾಗಿರುತ್ತದೆ. ಅಂದರೆ ಅಮ್ಮನ ಪ್ರೀತಿ ವಿಶ್ವದಲ್ಲೇ ದೊಡ್ಡ ಪ್ರೀತಿ.ಸ್ವಾಮಿ ವಿವೇಕಾನಂದರು ಒಂದು ಬಾರಿ ಅವರ ತಾಯಿಯ ಬಗ್ಗೆ ಹೀಗೆ ಹೇಳಿದ್ದಾರೆ. ಈಗ ನಾನು ಏನಾಗಿದ್ದೇನೋ ಅದಕ್ಕೆ ಕಾರಣ ನಮ್ಮ ಅಮ್ಮ. ನಾನು ಇನ್ನೇನೇ ಆದರೂ ಆಕೆಯ ಋಣವನ್ನು ತೀರಿಸುವುದಕ್ಕಂತೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕೋಪ ಬಂದಾಗ ಅಡುಗೆ ಮಾಡಿ, ಊಟ ಮಾಡದೆ ಮಲಗುವವಳು ಅಮ್ಮ .
ನನ್ನ ಪ್ರೀತಿಯ ಅಮ್ಮನಿಗೆ ನನ್ನ ಪ್ರೀತಿಯ ನಮನಗಳು.

ರಾಧಾ ಪಿ ಸೋಮಯಾಜಿ
ಸಾಲಿಗ್ರಾಮ

ಟಾಪ್ ನ್ಯೂಸ್

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಗು ಹುಟ್ಟಿದಾಗ ಕಣ್ಣು ಕಲ್ಪನೆಗೆ ಬಂದಾಗ ಮೊದಲು ಕಾಣುವ ಮುಖವೇ ಅಮ್ಮನದ್ದು

ಮಗು ಹುಟ್ಟಿದಾಗ ಕಣ್ಣು ಕಲ್ಪನೆಗೆ ಬಂದಾಗ ಮೊದಲು ಕಾಣುವ ಮುಖವೇ ಅಮ್ಮನದ್ದು

‘ಮಾತೃದೇವೋಭವ’: ಅಮ್ಮನ ಬಗ್ಗೆ ಹೇಳಲು ಪದಗಳೇ ಸಾಲದು…. ಅವಳಿಗೆ ಅವಳೇ ಸಾಟಿ….

‘ಮಾತೃದೇವೋಭವ’: ಅಮ್ಮನ ಬಗ್ಗೆ ಹೇಳಲು ಪದಗಳೇ ಸಾಲದು…. ಅವಳಿಗೆ ಅವಳೇ ಸಾಟಿ….

ನೋವಲ್ಲಿ ಶೋಕ ಸಾಗರವೇ ಬಂದರು ದಾರಿ ಸವೆಸಿ ಕಂದನ ಬರಸೆಳೆದಪ್ಪುವಳು

ನೋವಲ್ಲಿ ಶೋಕ ಸಾಗರವೇ ಬಂದರು ದಾರಿ ಸವೆಸಿ ಕಂದನ ಬರಸೆಳೆದಪ್ಪುವಳು

Mother-09

ನಾನು ಅಮ್ಮನ ಕನಸಿನಲ್ಲಿ ಎಚ್ಚರವಾಗಿರುತ್ತೇನೆ, ಅವಳು ನನ್ನ ಕನಸಿನಲ್ಲಿ ಎಚ್ಚರವಾಗಿರುತ್ತಾಳೆ

Mother-08

ನವಮಾಸ ನಮ್ಮನ್ನು ಹೊತ್ತು, ಹೆರುವ ಆಕೆಗೆ ಕೇವಲ ಒಂದು ದಿನ ಇತ್ತರೆ ಸಾಕೇ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.