ವಲಸೆ ಕೃಷಿ ಕಾರ್ಮಿಕರತ್ತ ತಿರಸ್ಕಾರ ಭಾವ
Team Udayavani, May 12, 2020, 2:48 PM IST
ಮಣಿಪಾಲ: ಕೋವಿಡ್-19 ಲಾಕ್ಡೌನ್ನಿಂದ ವಲಸೆ ಕಾರ್ಮಿಕರ ಬದುಕು ಅತಂತ್ರವಾಗಿದೆ. ಜೀವನೋಪಾಯಕ್ಕಾಗಿ ಸ್ವಂತ ನೆಲೆ ಬಿಟ್ಟು ನಂಬಿಹೋಗಿದ್ದ ಪ್ರದೇಶದಲ್ಲಿಯೂ ನೆಲೆ ಇಲ್ಲದಂತಾಗಿದ್ದು, ಒಂದೂತ್ತಿನ ಊಟಕ್ಕೂ ಪರದಾಡುವಂತಾಗಿದೆ. ಎಲ್ಲ ದೇಶಗಳಲ್ಲೂ ಬಡ ಕಾರ್ಮಿಕರದ್ದು ಇದೇ ಗೋಳು. ಅವರಿಗೆ ರಕ್ಷಣೆ ಮತ್ತು ನೆರವು ಒದಗಿಸಲು ಯುರೋಪ್ನ ಹಲವು ದೇಶಗಳು ಹಿಂದೇಟು ಹಾಕುತ್ತಿವೆ. ಸ್ಪೇನ್ ಪಶುಸಂಗೋಪನೆ ಕಾಯಕದಲ್ಲಿ ನಿರತರಾಗಿರುವ ಸಾವಿರಾರು ವಲಸೆ ಕೃಷಿ ಕಾರ್ಮಿಕರನ್ನು ಕಡೆಗಣಿಸುವ ಮೂಲಕ ಅವರನ್ನು ಮೂಲೆಗುಂಪು ಮಾಡಿದೆ.
ಫ್ರಾನ್ಸ್ನ ಗಡಿ ಭಾಗದಲ್ಲಿರುವ ಸ್ಪೈನ್ನ ಅರಾಗೋನ್ ನಗರದ ಪ್ರಮುಖ ಆದಾಯ ಮೂಲ ಪಶುಸಂಗೋಪನೆ. ಉರುಗ್ವೆ ಮತ್ತು ಪರಾಗ್ವೆಯ ಸಾವಿರಾರು ವಲಸೆ ಕೃಷಿ ಕಾರ್ಮಿಕರು ಇಲ್ಲಿನ ಪಶುಸಂಗೋಪನೆಯಲ್ಲಿ ದುಡಿಯುತ್ತಿದ್ದಾರೆ. ಕೋವಿಡ್ ಕಾಟದಿಂದಾಗಿ ಈಗ ಈ ಕಾರ್ಮಿಕರ ಬದುಕು ಅನಿಶ್ಚಿತತೆಯಲ್ಲಿದೆ.ಸರಕಾರವಾಗಲಿ, ಮಾಲಕರಾಗಲಿ ಅವರ ಕಷ್ಟಸುಖ ವಿಚಾರಿಸುತ್ತಿಲ್ಲ. ಒಂದು ರೀತಿಯ ನಿರಾಶ್ರಿತ ಜೀವನವನ್ನು ಅವರು ನಡೆಸುತ್ತಿದ್ದಾರೆ. ಸದ್ಯ ಎದುರಾಗಿರುವ ಬಿಕ್ಕಟ್ಟಿನಿಂದ ಯುರೋಪಿನ ಇತರ ಭಾಗಗಳಲ್ಲೂ ವಲಸೆ ಕೃಷಿ ಕಾರ್ಮಿಕರನ್ನು ಒಂದು ಸಮಸ್ಯೆ ಎಂದು ಪರಿಗಣಿಸಲಾಗುತ್ತಿದ್ದು, ಅವರನ್ನು ತಿರಸ್ಕಾರ ಭಾವದಿಂದ ಕಾಣಲಾಗುತ್ತಿದೆ. ಆದರೂ ಹೊಟ್ಟೆ ಪಾಡಿಗಾಗಿ ಲಾಕ್ಡೌನ್ ನಿಯಮ ಇದ್ದರೂ ಕೃಷಿ ಕಾರ್ಮಿಕರು ಕೆಲಸ ಅರಸಿ ಒಂದೆಡೆಯಿಂದ ಮತ್ತೂಂದೆಡೆಗೆ ತೆರಳುತ್ತಿದ್ದು, ಐರೋಪ್ಯ ಒಕ್ಕೂಟದ ರಾಷ್ಟ್ರಗಳು ಇತರ ದೇಶಗಳಿಂದ ಕಾರ್ಮಿಕರನ್ನು ಕರೆಸಿಕೊಳ್ಳುತ್ತಿವೆ. ಸ್ಪೈನ್ನಲ್ಲಿ ಶೀಘ್ರವಾಗಿ ಉಣ್ಣೆಯನ್ನು ಬಿಡಿಸುವ ಕೆಲಸ ಪ್ರಾರಂಭವಾಗಬೇಕು. ಇಲ್ಲವಾದರೆ ಉತ್ಪತ್ತಿ ಸಂಪೂರ್ಣ ನಾಶವಾಗುವ ಸಾಧ್ಯತೆ ಇದೆ. ಈ ಅನಿವಾರ್ಯತೆಗಾಗಿ ಒಂದಷ್ಟು ಕಾರ್ಮಿಕರನ್ನು ಉಳಿಸಿಕೊಳ್ಳಲಾಗಿದೆ.
ಸ್ಟ್ರಾಬೆರಿ, ಕಿತ್ತಳೆ, ಕಲ್ಲಂಗಡಿ, ಟೊಮೆಟೊ ಇತರ ತರಕಾರಿ ಬೆಳೆಗಳ ಕಟಾವಿಗೂ ಇದೇ ಕೃಷಿ ಕಾರ್ಮಿಕರ ಅಗತ್ಯವಿದೆ.
ಅಯರ್ಲ್ಯಾಂಡ್ನಿಂದ ಇಟಲಿಗೆ ಮತ್ತು ಜರ್ಮನಿಯಿಂದ ರೊಮೇನಿಯಾಗೆ ಅವರು ಗಡಿ ದಾಟಿ ಬರುತ್ತಿದ್ದಾರೆ.
ಆದರೆ ಈ ವೇಳೆ ಯಾವುದೇ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳದೇ ಕಾರ್ಮಿಕರನ್ನು ಬರ ಮಾಡಿಕೊಳ್ಳುತ್ತಿರುವುದರಿಂದ
ಅವರಿಗೆ ಸೋಂಕು ತಗುಲುವ ಭಯ ಕಾಡುತ್ತಿದೆ.
ಭದ್ರತೆಯಿಲ್ಲ
ಜರ್ಮನಿ ಪೂರ್ವ ಯುರೋಪ್ ಭಾಗದಿಂದ ಇತ್ತೀಚೆಗೆ 30 ಸಾವಿರ ಕಾರ್ಮಿಕರನ್ನು ಕರೆಸಿಕೊಂಡಿದ್ದು, ಮೇ ಅಂತ್ಯದ ವೇಳೆಗೆ ಇನ್ನೂ 30,000 ಕಾರ್ಮಿಕರನ್ನು ಬರ ಮಾಡಿಕೊಳ್ಳುವ ಯೋಚನೆಯಲ್ಲಿದೆ. ಆದರೆ ಈಗ ಕೃಷಿ ಕಾರ್ಯಕ್ಕೆ ಕರೆಸಿಕೊಳ್ಳಲಾಗುತ್ತಿರುವ ಕಾರ್ಮಿಕರಿಗೆ ಭದ್ರತೆ ಒದಗಿಸುವಲ್ಲಿ ವಿಫಲವಾಗಿದೆ. ಲಾಕ್ಡೌನ್ ನಿಯಮಗಳನ್ನು ಗಾಳಿಗೆ ತೂರಿ ಸಾಮಾಜಿಕ ಅಂತರ ನಿಯಮ ಸೇರಿದಂತೆ ಇತರೆ ಸುರಕ್ಷಾ ಕ್ರಮಗಳನ್ನು ಪಾಲಿಸದೇ ಕಾರ್ಮಿಕರ ಪ್ರಾಣವನ್ನು ಅಪಾಯಕ್ಕೊಡ್ಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
MUST WATCH
ಹೊಸ ಸೇರ್ಪಡೆ
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ