ಮುಂಬೈನಿಂದ ಬಂದಿಳಿದ ಕಾರ್ಮಿಕರು
ವಿಶೇಷ ಶ್ರಮಿಕ್ ರೈಲಿನಲ್ಲಿ ಕಲಬುರಗಿ-ಯಾದಗಿರಿ-ವಿಜಯಪುರ ಜಿಲ್ಲೆಯ 1,251 ವಲಸಿಗರು ವಾಪಸ್
Team Udayavani, May 13, 2020, 5:31 AM IST
ಕಲಬುರಗಿ: ಮುಂಬೈನಿಂದ ಶ್ರಮಿಕ್ ವಿಶೇಷ ರೈಲಿನಲ್ಲಿ ಮಂಗಳವಾರ ಬೆಳಗಿನ ಜಾವ 2:30ಕ್ಕೆ ನಗರಕ್ಕೆ 1,251 ಮಂದಿ ವಲಸಿಗರು ಬಂದಿಳಿದರು. ಕಲಬುರಗಿ, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಯ ಕಾರ್ಮಿಕರು ತವರು ಸೇರಿದರು.
ಲಾಕ್ಡೌನ್ನಲ್ಲಿ ಸಿಲುಕಿರುವ ರಾಜ್ಯದ ವಲಸಿಗರ ಕರೆ ತರಲು ಸರ್ಕಾರ ವಿಶೇಷ ರೈಲು ವ್ಯವಸ್ಥೆ ಮಾಡಿತ್ತು. ಸೋಮವಾರ ಥಾಣೆಯಿಂದ ಸಂಜೆ 4:30ಕ್ಕೆ ರೈಲು ಪ್ರಯಾಣ ಆರಂಭಿಸಿದ್ದ ರೈಲು ರಾತ್ರಿ 11:40ಕ್ಕೆ ಆಗಮಿಸಬೇಕಿತ್ತು. ಮೂರು ಗಂಟೆ ತಡವಾಗಿ ತಡರಾತ್ರಿ 2:30ಕ್ಕೆ ನಿಲ್ದಾಣಕ್ಕೆ ರೈಲು ತಲುಪಿತು. ರೈಲಿನಲ್ಲಿ ಆಗಮಿಸಿದ ವಲಸಿಗರನ್ನು ಸಂಸದ ಡಾ| ಉಮೇಶ ಜಾಧವ, ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು, ಜಿಲ್ಲಾಧಿಕಾರಿ ಶರತ್ ಬಿ., ಜಿಪಂ ಸಿಇಒ ಡಾ| ರಾಜಾ ಪಿ., ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ಕಿಶೋರ ಬಾಬು ಹಾಗೂ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಬರ ಮಾಡಿಕೊಂಡರು.
ಸಂಸದ ಜಾಧವ ವಲಸಿಗರನ್ನು ಕಿಟಕಿ ಮೂಲಕ ಕಂಡು ಯೋಗ-ಕ್ಷೇಮ ವಿಚಾರಿಸಿದರು. ದೂರದಿಂದ ಬಂದಿದ್ದ ಕಾರ್ಮಿಕರಿಗೆ ನಾವು-ನಿಮ್ಮೊಂದಿಗಿದ್ದದೇವೆಎಂದು ಆತ್ಮಸ್ಥೈರ್ಯ ತುಂಬಿದರು. ರೈಲಿನಲ್ಲಿ ಕಲಬುರಗಿ, ಯಾದಗಿರಿ ಮತ್ತು ವಿಜಯಪುರ ಮೂರು ಜಿಲ್ಲೆಗಳ ವಲಸಿಗರು ಆಗಮಿಸಿದರು. ಜಿಲ್ಲೆಯ ಚಿತ್ತಾಪುರ ತಾಲೂಕಿನ ಅತ್ಯಧಿಕ 676 ಜನ ವಲಸಿಗರು ಬಂದರು. ಕಮಲಾಪುರ ತಾಲೂಕಿನ 26 ಮಂದಿ, ಸೇಡಂ ಮತ್ತು ಶಹಾಬಾದನ ತಲಾ 6 ಮಂದಿ, ಕಲಬುರಗಿ ತಾಲೂಕಿನ ಒಬ್ಬರು ತವರಿಗೆ ಬಂದರು. ಯಾದಗಿರಿ ಮತ್ತು ವಿಜಯಪುರ ಜಿಲ್ಲೆಯ ಜನರನ್ನೂ ಆಯಾ ಜಿಲ್ಲೆಗಳಿಗೆ ರವಾನಿಸಲಾಯಿತು. ನಿಲ್ದಾಣಕ್ಕೆ ರೈಲು ಬರುತ್ತಿದ್ದಂತೆ ಯಾರನ್ನೂ ಕೆಳಗಿಳಿಸದಂತೆ ಒಬ್ಬೊಬ್ಬರನ್ನೇ ಸರದಿಯಲ್ಲಿ ಥರ್ಮಲ್ ಸ್ಕ್ರೀನಿಂಗ್ ಮೂಲಕ ತಪಾಸಣೆ ಮಾಡಲಾಯಿತು. ಬಳಿಕ ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (ಎನ್ಇಕೆಆರ್ಟಿಸಿ) ಬಸ್ ಮೂಲಕ ಆಯಾ ತಾಲೂಕಿನಲ್ಲಿ ತೆರೆಯಲಾಗಿರುವ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಿಕೊಡಲಾಯಿತು.
ವಲಸಿಗರಿಗೆ ಊಟ: ಜಿಲ್ಲಾಡಳಿತದ ಆಹಾರ ಸಮಿತಿ ವತಿಯಿಂದ ವಲಸಿಗರಿಗಾಗಿ 1,500 ಊಟದ ಪೊಟ್ಟಣ, 1,500 ಲೀಟರ್ ನೀರಿನ ಬಾಟಲ್, ಮಜ್ಜಿಗೆ, ಬಿಸ್ಕತ್, ಗ್ಲುಕೋಸ್-ಡಿ ಮುಂತಾದವುಗಳನ್ನು ಪೂರೈಕೆ ಮಾಡಲಾಗಿತ್ತು ಎಂದು ಸಮಿತಿ ಅಧ್ಯಕ್ಷೆ ಪ್ರವೀಣಪ್ರಿಯಾ ಡೇವಿಡ್ ಹೇಳಿದರು.
ಇಂದು ಮತ್ತೂಂದು ರೈಲು : ಮುಂಬೈನಿಂದ ಶ್ರಮಿಕ ವಿಶೇಷ ರೈಲಿನಲ್ಲಿ ಮಂಗಳವಾರ ಬೆಳಗಿನ ಜಾವ ಕಲಬುರಗಿಗೆ 1,251 ಮಂದಿ ವಲಸಿಗರು ಆಗಮಿಸಿದ್ದು, ಮೇ 13ರಂದು ಸಹ ಇನ್ನೊಂದು ಶ್ರಮಿಕ ವಿಶೇಷ ರೈಲು ಮುಂಬೈನಿಂದ ವಲಸಿಗರನ್ನು ಹೊತ್ತು ತರಲಿದೆ ಎಂದು ತಿಳಿಸಿದ್ದಾರೆ.
7,700 ಜನರ ನೋಂದಣಿ : ಹೊರ ಜಿಲ್ಲೆ ಮತ್ತು ಹೊರ ರಾಜ್ಯಕ್ಕೆ ಪ್ರಯಾಣಿಸಲು ಸೇವಾ ಸಿಂಧು ಆ್ಯಪ್ನಲ್ಲಿ ಇದುವರೆಗೆ ಜಿಲ್ಲೆಯಲ್ಲಿ 7,700 ಜನ ನೋಂದಣಿ ಮಾಡಿಸಿಕೊಂಡಿದ್ದಾರೆ. ಮುಂಬೈನಿಂದ ರೈಲಿನಲ್ಲಿ ಬಂದವರ ಪೈಕಿ ಕೇವಲ 8 ಜನರು ನೋಂದಾಯಿಸಿಕೊಂಡಿದ್ದರು. ಹೊರರಾಜ್ಯದಿಂದ ಯಾರೇ ಬರಲಿ, ಆಯಾ ತಾಲೂಕಿನ ಕ್ವಾರಂಟೈನ್ ಸೆಂಟರ್ನಲ್ಲಿ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ಡಿಸಿ ಶರತ್ ಬಿ. ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್ಗೆ ನಡುಕ: ಗಾಯತ್ರಿ
ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
IPL 2024; ಚೆನ್ನೈ ಕಿಂಗ್ಸ್ಗೆ ಚೇಸಿಂಗ್ ಕಿಂಗ್ ಸವಾಲು
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ