ಸಾಲ ನೀಡಿದ ಹಣ ವಾಪಸ್ ಕೇಳಿದ್ದಕ್ಕೆ ಕತ್ತಿಯಿಂದ ಹಲ್ಲೆ: ಗಂಭೀರ ಗಾಯ
Team Udayavani, May 13, 2020, 8:39 AM IST
ಸಾಂದರ್ಭಿಕ ಚಿತ್ರ
ಬೆಳ್ತಂಗಡಿ: ನಿಡ್ಲೆ ಗ್ರಾಮದ ಪಿಲಿಕಜೆ ಎಂಬಲ್ಲಿ ರವಿವಾರ ರಾತ್ರಿ ಹಣದ ವಿಚಾರವಾಗಿ ವ್ಯಕ್ತಿಯೋರ್ವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಲಾಗಿದೆ. ರಾಘವೇಂದ್ರ (38) ಎಂಬವರ ಮೇಲೆ ಜಗದೀಶ ಹಾಗೂ ಚಂದ್ರಶೇಖರ ಎಂಬವರು ಹಲ್ಲೆ ನಡೆಸಿ ದ್ದಾರೆ ಎಂದು ಆರೋಪಿಸಲಾಗಿದೆ.
ಜಗದೀಶನಿಗೆ ರಾಘವೇಂದ್ರ ಹಣ ಸಾಲ ಕೊಟ್ಟಿದ್ದು, ಅದನ್ನು ಹಿಂದಿರುಗಿಸುವಂತೆ ಕೇಳಿದ್ದರು. ಈ ಹಿನ್ನೆಲೆಯಲ್ಲಿ ರಾಘವೇಂದ್ರ ಮನೆ ಯಲ್ಲಿರುವ ಸಮಯದಲ್ಲಿ ಜಗದೀಶ ಹಾಗೂ ಚಂದ್ರಶೇಖರ ಅಕ್ರಮವಾಗಿ ಪ್ರವೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಬಳಿಕ ರಾಘವೇಂದ್ರರ ತಲೆಗೆ ಕತ್ತಿ ಬೀಸಿದ್ದರಿಂದ ಅವರ ಕಣ್ಣಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡಿರುವ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಧರ್ಮಸ್ಥಳ ಠಾಣೆ ಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.