ಗೆಲ್ಲುವ ಮೊದಲೇ ಸಂಭ್ರಮಿಸುತ್ತಿವೆಯೆ ದೇಶಗಳು ?


Team Udayavani, May 13, 2020, 12:00 PM IST

ಗೆಲ್ಲುವ ಮೊದಲೇ ಸಂಭ್ರಮಿಸುತ್ತಿವೆಯೆ ದೇಶಗಳು ?

ಹಾಂಗ್‌ಕಾಂಗ್‌: ಕೋವಿಡ್ ಸೋಂಕು ತಡೆಯುವ ಸಂಬಂಧ ಲಾಕ್‌ಡೌನ್‌ ಮೊರೆ ಹೋಗಿದ್ದ ರಾಷ್ಟ್ರಗಳು ಈಗ ಒಂದೊಂದಾಗಿ ಸಡಿಲಿಕೆಯತ್ತ ಮನಸ್ಸು ಮಾಡುತ್ತಿದೆ. ದೇಶದಲ್ಲಿ ಕೋವಿಡ್ ಸೋಂಕು ಹರಡುವ ಪ್ರಮಾಣ ಕಡಿಮೆಯಾಗಿರುವ ಕಾರಣ ಈ ನಿರ್ಧಾರಕ್ಕೆ ಭಾರತ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳು ಬಂದಿದೆ.

ಇದು ಒಂದು ಅರ್ಥದಲ್ಲಿ ಹೋರಾಡುವ ಮೊದಲೇ ಗೆಲುವನ್ನು ಸಂಭ್ರಮಿಸಿದಂತಾಗಿದೆ. ಇದರ ಬಳಿಕದ ಸ್ಥಿತಿಯ ಬಗೆಗೆ ಬಹಳಷ್ಟು ರಾಷ್ಟ್ರಗಳಿಗೆ ಅರಿವು ಇದ್ದಂತಿಲ್ಲ. ಕಳೆದ ವರ್ಷಾಂತ್ಯದಲ್ಲಿ ಚೀನದಲ್ಲಿ ಕಾಣಿಸಿಕೊಂಡ ವೈರಸ್‌ ಬಳಿಕ ಹಲವು ದೇಶಗಳಿಗೆ ಹಬ್ಬಿತ್ತು. ತನ್ನ ನೆಲದಲ್ಲಿ ಮೊದಲು ಕೋವಿಡ್ ಪ್ರಕರಣ ಕಾಣಿಸಿಕೊಂಡ ಕಾರಣ ಚೀನ ಲಾಕ್‌ಡೌನ್‌ ಮೂಲಕ ತನ್ನ ಪ್ರಜೆಗಳನ್ನು ರಕ್ಷಿಸಿತ್ತು. ಬಳಿಕ ಅದೇ ಕ್ರಮವನ್ನು ಜಗತ್ತು ಪಾಲಿಸಿತ್ತು. ತನ್ನ ನೆಲದಲ್ಲಿ ಪ್ರಕರಣ ಕಡಿಮೆಯಾದ ಕಾರಣ ಚೀನ ಲಾಕ್‌ಡೌನ್‌ ಅನ್ನು ಹಂತ ಹಂತವಾಗಿ ಸಡಿಲಗೊಳಿಸಿ ಬಳಿಕ ಸಂಪೂರ್ಣ ತೆರವು ಮಾಡಿತ್ತು. ಇದೇ ಮಾದರಿಯನ್ನು ಇತರ ರಾಷ್ಟ್ರಗಳು ಇಂದು ಅನುಕರಿಸುತ್ತಿವೆ. ಕೋವಿಡ್ ಜಗತ್ತಿನಿಂದ ಕಣ್ಮರೆಯಾಗಿಲ್ಲ ಎಂಬ ಸತ್ಯದ ಅರಿವಿದ್ದೂ ಜಗತ್ತು ತಪ್ಪು ಮಾಡುತ್ತಿವೆಯೇ ಎಂಬ ಅನುಮಾನ ಬರುವುದು ಸಹಜ.

ಕೋವಿಡ್ ಪ್ರಕರಣಗಳು ಕಡಿಮೆಯಾಗಿದ್ದರೂ ದೇಶದಲ್ಲಿ ಅದು ಶೂನ್ಯಕ್ಕೆ ಬರದೇ ಇರುವ ಸಂದರ್ಭದಲ್ಲಿ ಲಾಕ್‌ಡೌನ್‌ ತೆರೆದರೆ ಸೋಂಕು ಹರಡುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ. ಎರಡನೇ ಹಂತದ ಕೋವಿಡ್ ಸೋಂಕು ಹರಡಬಹುದಾದ ಕಾರಣ ಜನರು ಎಚ್ಚರಿಕೆಯಿಂದ ಇರಬೇಕು ಎಂದು ದಕ್ಷಿಣ ಕೊರಿಯಾ, ಜರ್ಮನಿ ಹಾಗೂ ಚೀನ ಸರಕಾರಗಳು ತನ್ನ ಜನರಿಗೆ ಮನವಿ ಮಾಡಿಕೊಳ್ಳುತ್ತಿವೆ.

ಕೋವಿಡ್ ವೈರಸ್‌ ದಕ್ಷಿಣ ಕೊರಿಯಾದ ಕೆಲವು ಭಾಗಗಳಲ್ಲಿ ಪತ್ತೆಯಾಗಿತ್ತು. ಸಾಮಾಜಿಕ ಅಂತರ ಕ್ರಮಗಳು ಸರಿಯಾಗಿ ಪಾಲನೆಯ ಮೂಲಕ ಅದನ್ನು ಈಗ ನಿಯಂತ್ರಣದಲ್ಲಿರಿಸಿಕೊಂಡಿದೆ. ಈಗ ಪರಿಸ್ಥಿತಿ ಸುಧಾರಣೆಗೊಂಡಿರುವ ದೃಷ್ಟಿಯಿಂದ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಆದರೆ ಎರಡನೇ ಹಂತದ ಪ್ರಸರಣ ಆಗುವ ಸಾಧ್ಯತೆ ಇದ್ದು, ಅದಕ್ಕಾಗಿ ಸಾಮಾಜಿಕ ಅಂತರ ಮತ್ತು ವೈಯಕ್ತಿಕ ರಕ್ಷಣಾ ವಸ್ತ್ರವನ್ನು ಧರಿಸುವಂತೆ ಸರಕಾರ ಸೂಚಿಸಿದೆ.

ಪ್ರಾರಂಭದಲ್ಲಿ ಕೋವಿಡ್ ನಿಯಂತ್ರಿಸಲು ಹೆಣಗಾಡಿದ ಚೀನ ಬಳಿಕ ಪರಿಸ್ಥಿತಿಯನ್ನು ನಿಯಂತ್ರಿಸಿತ್ತು. ಇದೀಗ ಚೀನದ ಎರಡು ನಗರಗಳಲ್ಲಿ ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿದ್ದು ಹೊಸ ನಿರ್ಬಂಧಗಳನ್ನು ಪರಿಚಯಿಸುತ್ತಿದೆ. ಹೊಸದಾಗಿ ದೃಢಪಟ್ಟ 11 ಪ್ರಕರಣಗಳನ್ನು ಅನುಸರಿಸಿ ದೇಶದ ಈಶಾನ್ಯದ ಜಿಲಿನ್‌ ಪ್ರಾಂತ್ಯದ ಶೂಲನ್‌ ಪ್ರದೇಶವನ್ನು ಲಾಕ್‌ಡೌನ್‌ ಮಾಡಲಾಗಿದೆ. ಅಪಾಯ ಎಂದರೆ ರಷ್ಯಾ ಮತ್ತು ಉತ್ತರ ಕೊರಿಯಾ ರಾಷ್ಟ್ರಗಳ ಜತೆ ಗಡಿ ಹಂಚಿಕೊಂಡಿದೆ.

ವುಹಾನ್‌ನಲ್ಲಿಯೂ ಮತ್ತೆ ಎಚ್ಚರಿಕೆಯ ಕ್ರಮಗಳನ್ನು ಜಾರಿಗೆ ತರಲಾಗಿದೆ. ಮೊದಲ ಬಾರಿ ಲಾಕ್‌ಡೌನ್‌ ಆದ ವುಹಾನ್‌ 76 ದಿನಗಳ ಬಳಿಕ ಸಾಮಾನ್ಯ ಸ್ಥಿತಿಗೆ ಮರಳಿದೆ. ಸೋಮವಾರ ನಗರದಲ್ಲಿ 5 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಯಾರೂ ಟ್ರಾವೆಲ್‌ ಹಿಸ್ಟರಿ ಹೊಂದಿಲ್ಲ. ಎಲ್ಲರೂ ಚೀನಿಗರೇ ಎಂಬುದು ದೃಢಪಟ್ಟಿದೆ.

ಯುರೋಪಿನಲ್ಲಿ ಕೋವಿಡ್ ನ್ನು ಹೇಗೆ ನಿಯಂತ್ರಿಸಬೇಕು ಎಂಬ ಪ್ರಶ್ನೆಗೆ ಜರ್ಮನಿಯು ಉದಾಹರಣೆಯಾಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಪ್ರಕರಣ ಕಡಿಮೆಯಾದ ಕಾರಣ ಲಾಕ್‌ಡೌನ್‌ ಅನ್ನು ಸಡಿಲಗೊಳಿಸಿ ಸಂಚಾರಕ್ಕೆ ಅನುವುಮಾಡಿಕೊಡಲಾಗುತ್ತಿತ್ತು. ಆದರೆ ಈಗ ಕೋವಿಡ್ ಮತ್ತೆ ತಲೆ ಎತ್ತಿದೆ. ಸರಕಾರದ ಮಾಹಿತಿಯ ಪ್ರಕಾರ 1 ಲಕ್ಷ ಜನಸಂಖ್ಯೆಯಲ್ಲಿ 50 ಹೊಸ ಕೋವಿಡ್ ವೈರಸ್‌ ಪ್ರಕರಣ ಪತ್ತೆಯಾದರೆ ಆಂತಹ ಕೌಂಟಿಯಲ್ಲಿ ಮತ್ತೆ ಲಾಕ್‌ ಡೌನ್‌ ಕ್ರಮಗಳನ್ನು ಪರಿಚಯಿಸಲಾಗುತ್ತದೆ. ವಾರಾಂತ್ಯದಲ್ಲಿ ದೇಶಾದ್ಯಂತ ಹಲವಾರು ಕೌಂಟಿಗಳು ಆ ಮಿತಿಯನ್ನು ಮೀರಿವೆ ಎನ್ನಲಾಗುತ್ತಿದೆ. ಒಟ್ಟಾರೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದರೂ ಈ ಮೇಲಿನ ಮೂರು ದೇಶಗಳಲ್ಲಿ ಮತ್ತೆ ಕೋವಿಡ್ ವೈರಸ್‌ ಪ್ರಸರಣ ವರದಿಯಾಗುತ್ತಿವೆ.

ಸಿಂಗಾಪುರದಲ್ಲಿ ಎಪ್ರಿಲ್‌ ಆರಂಭದಲ್ಲಿ 2 ಸಾವಿರಕ್ಕಿಂತಲೂ ಕಡಿಮೆ ಪ್ರಕರಣಗಳಿದ್ದವು. ಈಗ ಅವುಗಳ ಸಂಖ್ಯೆ 24 ಸಾವಿರ ದಾಟಿದೆ. ಈ ಕಾರಣಕ್ಕೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ. ಸಾಮಾಜಿಕ ದೂರವನ್ನು ಪಾಲಿಸಲು ಪೊಲೀಸ್‌ ಸಿಬಂದಿ ಬದಲು ರೋಬೋಟ್‌ ನಾಯಿಗಳನ್ನು ನಿಯೋಜಿಸುತ್ತಿವೆ. ಸಿಬಂದಿಗಳಿಗೆ ಸೋಂಕು ಹರಡಬಾರದು ಎಂಬ ಕಾರಣಕ್ಕೆ. ಈ ನಿಟ್ಟಿನಲ್ಲಿ ಯೋಚಿಸುವುದಾದರೆ ಹಾಂಗ್‌ ಕಾಂಗ್‌ನಲ್ಲಿ ಎರಡನೇ ಹಂತದ ಯಾವುದೇ ಸೋಂಕುಗಳು ಪತ್ತೆಯಾಗಿಲ್ಲ. 21 ದಿನಗಳು ಕಳೆದರೂ ಯಾವುದೇ ಹೊಸ ಸ್ಥಳೀಯ ಪ್ರಕರಣಗಳು ಪತ್ತೆಯಾಗಿಲ್ಲ. ಇದಕ್ಕೆ ಅಲ್ಲಿನ ಸರಕಾರ ಮುಂದುವರಿಸಿದ ಲಾಕ್‌ಡೌನ್‌.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.